ಕೊಪ್ಪಳ ತಾಲೂಕಿನಲ್ಲಿ ಒಂದೇ ಕುಟುಂಬದ 6 ಜನ ಆತ್ಮಹತ್ಯೆಗೆ ಶರಣು

ಪತ್ನಿ ಮತ್ತು ಪುತ್ರಿಯರಿಗೆ ವಿಷ ಉಣಿಸಿ ತಾನೂ ಸಾವಿಗೆ ಶರಣಾದ ಪತಿ.

Last Updated : Jan 5, 2019, 01:27 PM IST
ಕೊಪ್ಪಳ ತಾಲೂಕಿನಲ್ಲಿ ಒಂದೇ ಕುಟುಂಬದ 6 ಜನ ಆತ್ಮಹತ್ಯೆಗೆ ಶರಣು title=

ಕೊಪ್ಪಳ: ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಕೊಪ್ಪಳ ತಾಲ್ಲೂಕಿನ ಮೆಟಗಲ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಶೇಖರಯ್ಯ ಬೀಡನಾಳ ಎಂಬಾತ ಪತ್ನಿ ಮತ್ತು ಪುತ್ರಿಯರಿಗೆ ವಿಷ ಉಣಿಸಿ ತಾನೂ ಸಾವಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಶೇಖರಯ್ಯ ಬೀಡನಾಳ (42), ಪತ್ನಿ ಜಯಮ್ಮ(39), ಮಕ್ಕಳಾದ ಬಸಮ್ಮ (23), ಗೌರಮ್ಮ (20), ಸಾವಿತ್ರಿ (18), ಪಾರ್ವತಿ (16) ಎಂದು ಗುರುತಿಸಲಾಗಿದೆ. ಕೊಪ್ಪಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪತ್ನಿ ಮತ್ತು ಪುತ್ರಿಯರಿಗೆ ವಿಷವುಣ್ಣಿಸಿ ಶೇಖರಯ್ಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಶೇಖರಯ್ಯ ಸಾಕಷ್ಟು ಸಾಲ ಮಾಡಿಕೊಂಡಿದ್ದ. ತನ್ನ ಜಮೀನಿನಲ್ಲಿ ಒಂದಿಷ್ಟು ಜಮೀನು‌ ಈಗಾಗಲೇ ಮಾರಿದ್ದ. ಇನ್ನುಳಿದ ಎರಡು ಎಕರೆ ಜಮೀನು ಮಾರಾಟ‌ ಮಾಡಲು ಸಿದ್ದನಾಗಿದ್ದ. ಸಾಲ ಬಾಧೆಯಿಂದ ಶೇಖರಯ್ಯ ಈ ನಿರ್ಧಾರ ಮಾಡಿದ್ದಾನೆ ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ಹೇಳುತ್ತಿದ್ದಾರೆ.
 

Trending News