ಏರ್ ಕಂಡಿಷನ್ ರಿಪೇರಿ ಮಾಡದ ಗೊದ್ರೇಜ್ ಕಂಪನಿಗೆ ದಂಡ ವಿಧಿಸಿದ ಕೋರ್ಟ್..!

ಹುಬ್ಬಳ್ಳಿಯ ತೋಳನಕೆರಿಯ ಅಮಿತ್ ಅಕ್ಕಿ ಎಂಬುವವರು ಹುಬ್ಬಳ್ಳಿಯ ಗಿರಿಯಾಸ್ ಶೋರೂಂನಲ್ಲಿ ರೂ.33,200/- ಕೊಟ್ಟು ಗೊದ್ರೇಜ್ ಏರ್ ಕಂಡಿಷನ್ ಯುನಿಟ್‍ನ್ನು ಖರೀದಿಸಿದ್ದರು. ಅದರ ಅಳವಡಿಕೆಗೆ ಹೆಚ್ಚಿನ ಮೊತ್ತ ರೂ.5,000/- ಸೇರಿ ದೂರುದಾರ ಒಟ್ಟು 38,200/- ಎದುರುದಾರರಿಗೆ ಪಾವತಿಸಿದ್ದರು. ಎದುರುದಾರರು ಗೊದ್ರೇಜ್‍ರವರು ಸದರಿ ಏರ್ ಕಂಡಿಷನ್‍ನ ಉತ್ಪಾದಕರಾಗಿರುತ್ತಾರೆ.

Written by - Manjunath N | Last Updated : Oct 5, 2024, 09:28 PM IST
  • ಈ ರೀತಿಯ ತೊಂದರೆ ಉತ್ಪಾದನಾದೋಷವಾಗಿದ್ದರೂ ಅದನ್ನು ಎದುರುದಾರರು ಸರಿಪಡಿಸದೇ ಸೇವಾ ನ್ಯೂನ್ಯತೆ ಎಸೆಗಿರುತ್ತಾರೆ.
  • ಶೇ.10% ರಷ್ಟು ವಾರ್ಷಿಕ ಬಡ್ಡಿಯನ್ನು ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.
 ಏರ್ ಕಂಡಿಷನ್ ರಿಪೇರಿ ಮಾಡದ ಗೊದ್ರೇಜ್ ಕಂಪನಿಗೆ ದಂಡ ವಿಧಿಸಿದ ಕೋರ್ಟ್..! title=

ಧಾರವಾಡ: ಹುಬ್ಬಳ್ಳಿಯ ತೋಳನಕೆರಿಯ ಅಮಿತ್ ಅಕ್ಕಿ ಎಂಬುವವರು ಹುಬ್ಬಳ್ಳಿಯ ಗಿರಿಯಾಸ್ ಶೋರೂಂನಲ್ಲಿ ರೂ.33,200/- ಕೊಟ್ಟು ಗೊದ್ರೇಜ್ ಏರ್ ಕಂಡಿಷನ್ ಯುನಿಟ್‍ನ್ನು ಖರೀದಿಸಿದ್ದರು. ಅದರ ಅಳವಡಿಕೆಗೆ ಹೆಚ್ಚಿನ ಮೊತ್ತ ರೂ.5,000/- ಸೇರಿ ದೂರುದಾರ ಒಟ್ಟು 38,200/- ಎದುರುದಾರರಿಗೆ ಪಾವತಿಸಿದ್ದರು. ಎದುರುದಾರರು ಗೊದ್ರೇಜ್‍ರವರು ಸದರಿ ಏರ್ ಕಂಡಿಷನ್‍ನ ಉತ್ಪಾದಕರಾಗಿರುತ್ತಾರೆ.

ಖರೀದಿಸಿದ 20 ದಿವಸದೊಳಗಾಗಿ ಅದರ ಕಾರ್ಯವು ಸ್ತಗಿತಗೊಂಡಿತ್ತು. ಇದರ ಬಗ್ಗೆ ದೂರುದಾರರು ಹುಬ್ಬಳ್ಳಿಯ ಗಿರಿಯಾಸ್ ಮತ್ತು ಉತ್ಪಾದಕರಿಗೆ ತಿಳಿಸಿದರು ಅವರು ಏರ್ ಕಂಡಿಷ್‍ನ್ನಿನ ದೋಷವನ್ನು ಸರಿಪಡಿಸಿರಲಿಲ್ಲ. ಈ ರೀತಿಯ ತೊಂದರೆ ಉತ್ಪಾದನಾದೋಷವಾಗಿದ್ದರೂ ಅದನ್ನು ಎದುರುದಾರರು ಸರಿಪಡಿಸದೇ ಸೇವಾ ನ್ಯೂನ್ಯತೆ ಎಸೆಗಿರುತ್ತಾರೆ. ಮನನೊಂದ ದೂರುದಾರ/ಗ್ರಾಹಕ ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:21/06/2024 ರಂದು ಅವರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ-Bigg Boss 11: ನನ್ನದೆ ರೂಲ್ಸ್‌ ಎಂದ ಸ್ಪರ್ಧಿಗೆ ತಕ್ಕ ಪಾಠ ಕಲಿಸಿದ ಬಿಗ್‌ಬಾಸ್‌? ಹೊರಗೆ ಹೋಗ್ತೀನಿ ಅಂತಿದ್ದ ಲಾಯರ್‌ ಜಗದೀಶ್‌ಗೆ ಸ್ಥಿತಿ ಏನಾಯ್ತು ?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ. ವಿಶಾಲಾಕ್ಷಿ. ಬೋಳಶೆಟ್ಟಿ ಮಹಿಳಾ ಸದಸ್ಯರು ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ಹಾಜರುಪಡಿಸಿದ ಏರ್ ಕಂಡಿಷನ್ ಖರೀದಿಸಿರುವುದು ರಶೀದಿಯ ಮುಖಾಂತರ ಕಂಡುಬರುತ್ತದೆ. ಆಯೋಗ ಕೊಟ್ಟಂತಹ ನೋಟಿಸಿಗೂ ಸಹ ಎದುರುದಾರರು ಹಾಜರಾಗಿರುವುದಿಲ್ಲ. ಖರೀದಿಸಿದ 20 ದಿವಸಗಳಲ್ಲಿಯೇ ಏರ್ ಕಂಡಿಷನ್ನಲ್ಲಿ ದೋಷ ಕಂಡುಬಂದಿರುವುದರಿಂದ ಅದು ಉತ್ಪಾದನಾ ದೋಷವಾಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಇದಕ್ಕೆ ಉತ್ಪಾದಕರಾದ ಗೊದ್ರೇಜ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳು ಒಳಗಾಗಿ ಮೊದಲು ಕೊಟ್ಟಿರುವ ಏರ್ ಕಂಡಿಷನ್ ಮಶೀನ್ ವಾಪಸ್ಸು ಪಡೆದು ಅದರ ಕಿಮ್ಮತ್ತು 38,200/- ಮತ್ತು ಅದರ ಮೇಲೆ ಶೇ.10% ರಷ್ಟು ವಾರ್ಷಿಕ ಬಡ್ಡಿಯನ್ನು ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ: ದಿನಾ ಬೆಳಿಗ್ಗೆ ಈ ಒಣಹಣ್ಣಿನ ರಸ ಕುಡಿಯೋದಕ್ಕೆ ಇಷ್ಟೊಂದು ಫಿಟ್ ಆಗಿದ್ದಾರಂತೆ ವಿರಾಟ್ ಕೊಹ್ಲಿ! ಸಣ್ಣ ಆಗೋಕೆ ಪರದಾಡೋರಿಗೆ ಸ್ವತಃ ಅವರೇ ಹೇಳಿದ ಟಿಪ್ಸ್ ಇದು

ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.25,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚುವೆಚ್ಚ ಅಂತಾ ರೂ.10,000/- ನಿಡುವಂತೆ ಎದುರುದಾರರಾದ ಗೊದ್ರೇಜ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News