ಗದಗ, ಶಿರಟ್ಟಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನ 22 ಜನದೂರುದಾರರು ಹುಬ್ಬಳ್ಳಿಯ ಆಶೀರ್ವಾದ್ ಡೆವಲ್ಪರ್ಸ್ಜತೆ ಧಾರವಾಡದ ಸತ್ತೂರಿನಲ್ಲಿ ಪ್ಲಾಟ್ ಖರೀದಿಸಲು 2012 ನೇ ಇಸ್ವಿಯಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಎಲ್ಲ ದೂರುದಾರರು ಖರೀದಿ ಒಪ್ಪಂದದ ಮುಂಗಡ ಹಣವನ್ನು ಆಶೀರ್ವಾದ ಡೆವಲ್ಪರ್ಸ್ 2010 ರಿಂದ 2012 ಇಸ್ವಿವರೆಗೆ ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ಇಟಿಗಟ್ಟಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ಇಟಿಗಟ್ಟಿ ಲೇಔಟನಲ್ಲಿ, ಹುಬ್ಬಳ್ಳಿಯ ಅಧ್ಯಾಪಕ ನಗರ ನಿವಾಸಿ ನಾಗರತ್ನ ಮುಂಡರಗಿ ಮತ್ತು ಧಾರವಾಡದ ಸತ್ತೂರ ನಿವಾಸಿ ಮೋಹನ ಡೊಂಬರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್ಜೊತೆ ಪ್ಲಾಟ ನಂ.9, 10 ಮತ್ತು 11ರ ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಒಂದೊಂದು ಸೈಟಿಗೆ ರೂ.5,63,600/- ರೂಪಾಯಿ ಹಣ ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಕಮಲಾ ಬಡಿಗೇರ ಎಂಬುವವರು 2020 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್ ವಿ ಶೇಲ್ಟರ್ಸ್ನ ವಿಜಯಕುಮಾರ ಕಬಾಡಿ ರವರಿಂದ 875 ಚ.ಅಡಿ ವಿಸ್ತ್ರೀರ್ಣದ ಮಳಿಗೆಯನ್ನು ಖರೀಸಿದ್ದರು. ಅದಕ್ಕೆ ಅವರು ರೂ.27,41,080/-ಗಳಿಗೆ ಹಣ ಸಂದಾಯ ಮಾಡಿದ್ದರು.
ಧಾರವಾಡದ ಕೆ.ಎಚ್.ಬಿ. ಕಾಲೋನಿಯ ಹನುಮಂತಪ್ಪ ನಾಯಕರವರು ಮೈಸೂರಿನ ಶ್ರೀಗುರು ಮಲ್ಲೇಶರಿಯಲ್ ವ್ಯಾಲ್ಯು ಕಾರ್ಪೊರೇಟನ ಮೆಂಬರ್ ಆಗಿದ್ದರು. ಅವರು 30x40 ಸೈಜಿನ ಪ್ಲಾಟಗೆ ಕಂತುಗಳ ಮೂಖಾಂತರ ಒಟ್ಟು ರೂ.3,16,800/- ತುಂಬಿದ್ದರು. ಈ ಬಗ್ಗೆ ಎದುರುದಾರರು ಸೈಟ್ ಕೊಡುವ ಬಗ್ಗೆ ಬರವಸೆ ಕೊಟ್ಟು ದಿ.07/10/2014 ರಂದು ಕರಾರು ಪತ್ರ ಬರೆದುಕೊಟ್ಟಿದ್ದರು.
ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಎದುರುದಾರರ ಜಾಹಿರಾತಿಗೆ ಮಾರು ಹೋಗಿ ಅವರು ದಿ:30/06/2017 ರಂದು ರೂ.3,50,000/- ಹಣ ನೀಡಿದ್ದರು.
ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಅನ್ನುವವರು ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಲು ದಿ:22/09/2022 ರಂದು ಹುಬ್ಬಳ್ಳಿಯ ವಿದ್ಯಾನಗರದ ರೆಪ್ಕೋ ಹೋಮ ಫೈನಾನ್ಸ್ರವರಿಂದ ರೂ.12 ಲಕ್ಷ ಸಾಲ ಪಡೆದಿದ್ದರು.
ಜಿಲ್ಲೆಯ ಕಲಘಟಗಿ ಅಕ್ಕಿ ಓಣಿಯ ನಿವಾಸಿ ಅರುಣ್ ಕುಂಬಾರ ಎಂಬುವವರು ದಿನಾಂಕ:28/09/2022 ರಂದು ಒಬ್ಬ ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿಯ ಸ್ಯಾಮ್ ಔಟ್ಫಿಟ್ ಪ್ಯಾಶನ್ ಪ್ರೈವೇಟ್ ಲಿ. ಇವರಿಂದ ರೂ.38,640/- ಮೌಲ್ಯದ ಬಟ್ಟೆಗಳ ಬಾಕ್ಸ್ಗಳನ್ನು ಖರೀದಿಸಿದ್ದರು.
ಹುಬ್ಬಳ್ಳಿ ಶೆಟ್ಟರ ಕಾಲನಿಯ ನಿವಾಸಿ ಅಶೋಕ ಶದ್ಮಾಕರ್ ರವರು ಎದುರುದಾರರಾದ ಬೆಳಗಾವಿಯ ನಿಖಿತಾರವರಿಂದ ಅಕ್ಟೋಬರ್-2022 ಹೈಡ್ರೋಪಾವರ್ ಉಪಕರಣ ಖರೀದಿಸಿದ್ದರು. ಅದಕ್ಕೆ ಅವರು ಒಟ್ಟು ರೂ.14,00,015/- ಹಣ ಎದುರುದಾರರಿಗೆ ಕೊಟ್ಟಿದ್ದರು.
6 ಜನ ನಿವೃತ್ತ ಪಿಂಚಣಿದಾರರು ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯವರು ತಮ್ಮ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಷ್ಟು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ನಾಗಪ್ಪ ಶಿವಪ್ಪ ಕುರಹಟ್ಟಿ ಇವರು ಮೆಣಸಿನಕಾಯಿ ವ್ಯಾಪಾರಸ್ಥರಾಗಿದ್ದರು. ವ್ಯಾಪಾರಕ್ಕೆಂದು ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು. ಹೀಗೆ ವ್ಯಾಪಾರಕ್ಕೆಂದು ಹೋದಾಗ ದಿ:28/03/2019 ರಂದು ರೂ.7,291/- ಪ್ರೀಮಿಯಮ್ ನೀಡಿ ಸೊರಬ (ಸಾಗರ) ಅಂಚೆ ಕಛೇರಿಯಿಂದ ಗ್ರಾಮೀಣ ಅಂಚೆ ಜೀವ ವಿಮೆಯನ್ನು ಪಡೆದುಕೊಂಡಿದ್ದರು.
ಹುಬ್ಬಳ್ಳಿಯ ದತ್ತಾತ್ರೇಯ ಕಾಲನಿ, ನಿವಾಸಿ ಲಕ್ಷ್ಮೀಕಾಂತ ಖಟವಟೆ ಎಂಬುವವರು ಎದುರುದಾರ ರಿಲೈನ್ಸ್ ವಿಮಾ ಕಂಪನಿಯಿಂದ ತನ್ನ ಮಾಲೀಕತ್ವದ ಹುಂಡೈ ಕಾರ್ ನಂ.ಕೆಎ-63/ಎಮ್-0959ಗೆ ಒಟ್ಟು ರೂ.16,606/- ಮೊತ್ತದ ಪ್ರೀಮಿಯಮ್ ಕೊಟ್ಟು ಪ್ಯಾಕೇಜ್ ಪಾಲಸಿ ಖರೀದಿಸಿದ್ದರು.
ಹುಬ್ಬಳ್ಳಿಯ ಉಣಕಲ್ನ ಅಂಬಿಕಾ ನಗರ ವಾಸಿ ಸವಿತಾ, ಶೈಲೇಂದ್ರ ದಂಪತಿಗಳು ಸ್ವಯಂ ಉದ್ಯೋಗಕ್ಕೆಂದು, ಹುಬ್ಬಳ್ಳಿಯ ರಾಜೇಂದ್ರ ನಗರದ ಶ್ರೀ ಸಾಯಿ ಸರ್ಚ್ & ಸಪೋರ್ಟ್ ಕಂಪನಿಯವರಿಂದ ರೂ.1 ಲಕ್ಷ 51 ಸಾವಿರ 750 ರೂ ಹಣ ಕೊಟ್ಟು 6ಜಿ ಅಟೋಮೆಟಿಕ್ ಅಗರಬತ್ತಿ ತಯಾರಿಸುವ ಮಶೀನನ್ನು ಖರೀದಿಸಿದ್ದರು. ಮಶೀನ್ ಪಡೆದುಕೊಳ್ಳುವ ಪೂರ್ವದಲ್ಲಿ ದೂರುದಾರರು ತಯಾರಿಸಿದ ಅಗರಬತ್ತಿಗಳನ್ನು ತಾವೇ ಹಣ ಕೊಟ್ಟು ಪಡೆದುಕೊಳ್ಳುವುದಾಗಿ ಎದುರುದಾರರು ಒಪ್ಪಿಕೊಂಡಿದ್ದರು.
ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯವರು ತಮ್ಮ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು 8 ಜನ ನಿವೃತ್ತ ಪಿಂಚಣಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರು.
7-8 ವರ್ಷ ಕಳೆದರೂ ಡೆವಲಪರ್ ಸದರಿ ಜಮೀನಿನನ್ನು ಅಬಿವೃದ್ಧಿ ಪಡಿಸಲಿಲ್ಲ
ದೂರುದಾರ ಅಭಿವೃದ್ಧಿಪಡಿಸಿ ಪ್ಲಾಟಕೊಡುವಂತೆ ಹಲವು ಬಾರಿ ವಿನಂತಿಸಿದರೂ ಎದುರುದಾರರು ಅವರಿಗೆ ಪ್ಲಾಟ್ ಕೊಟ್ಟಿರಲಿಲ್ಲ
ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ರೂ.25 ಸಾವಿರ ಪರಿಹಾರ, ರೂ.10,000/- ಪ್ರಕರಣದ ಖರ್ಚು ಹಾಗೂ ರೂ.15,400/- ಬೆಳೆಗೆ ವಿನಿಯೋಗಿಸಿದ ಖರ್ಚು ವೆಚ್ಚ ಕೊಡುವಂತೆ ತೀರ್ಪಿನಲ್ಲಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.