ಸಿದ್ಧಗಂಗಾ ಶ್ರೀಗಳ ಜೀವನವೇ ನಮಗೆ ಪಾಠ- ಅಮಿತ್ ಶಾ

ಸುದೀರ್ಘ ವಯಸ್ಸಿನಲ್ಲಿ ಅವರ ದಣಿವರಿಯದ ಕೆಲಸ ಸ್ಪೂರ್ತಿದಾಯಕವಾಗಿದೆ.

Last Updated : Mar 26, 2018, 12:27 PM IST
ಸಿದ್ಧಗಂಗಾ ಶ್ರೀಗಳ ಜೀವನವೇ ನಮಗೆ ಪಾಠ- ಅಮಿತ್ ಶಾ title=
Pic: Twitter@AmitShah

ತುಮಕೂರು: ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿದ್ಧಗಂಗಾ ಶ್ರೀಗಳ ಜೀವನವೇ ನಮಗೆ ಪಾಠ, ಸುದೀರ್ಘ ವಯಸ್ಸಿನಲ್ಲಿ ಅವರ ದಣಿವರಿಯದ ಕೆಲಸ ಸ್ಪೂರ್ತಿದಾಯಕ ಎಂದು ತಿಳಿಸಿದ್ದಾರೆ.

ರಾಜ್ಯ ಪ್ರವಾಸದಲ್ಲಿರುವ  ಅಮಿತ್ ಶಾ, ಇಂದು(ಮಾರ್ಚ್ 26)  ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದಗಂಗಾ ಮಠದ 'ನಡೆದಾಡುವ ದೇವರು' ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಉತ್ತಮ ಅದೃಷ್ಟವನ್ನು ಹೊಂದಿದ್ದೇನೆ. ಅವರ ಸುದೀರ್ಘ ವಯಸ್ಸಿನಲ್ಲಿ ಅವರ ದಣಿವರಿಯದ ಕೆಲಸ ಸ್ಪೂರ್ತಿದಾಯಕವಾಗಿದೆ. ಶ್ರೀಗಳ ಜೀವನವೇ ನಮಗೆ ಪಾಠ ಮತ್ತು ನಮಗೆಲ್ಲಾ ಮಾರ್ಗದರ್ಶನ ಬೆಳಕು ಎಂದು ತಿಳಿಸಿದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿರುವ ನಮಗೆ ಸ್ವಾಮೀಜಿ ಆಶೀರ್ವಾದದಿಂದ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಇದೇ ಸಂದರ್ಭದಲ್ಲಿ ಶಾ ತಿಳಿಸಿದರು.

Trending News