ಜನ ಕಾಂಗ್ರೆಸ್‌ ಜತೆಯಿದ್ದಾರೆ ಎನ್ನುವುದಕ್ಕೆ ರಾಜರಾಜೇಶ್ವರಿ ಕ್ಷೇತ್ರದ ಗೆಲುವು ಸಾಕ್ಷಿ

ಚುನಾವಣಾ ಗಣಿತದ ಪ್ರಕಾರ ನಿರೀಕ್ಷಿತ ಸ್ಥಾನ ಬಂದಿಲ್ಲ, ಆದರೆ ಬಿಜೆಪಿಗಿಂತ ಎರಡರಷ್ಟು ಮತ ಗಳಿಸಿದ್ದೇವೆ-ಸಿದ್ದರಾಮಯ್ಯ  

Last Updated : May 31, 2018, 03:52 PM IST
ಜನ ಕಾಂಗ್ರೆಸ್‌ ಜತೆಯಿದ್ದಾರೆ ಎನ್ನುವುದಕ್ಕೆ ರಾಜರಾಜೇಶ್ವರಿ ಕ್ಷೇತ್ರದ ಗೆಲುವು ಸಾಕ್ಷಿ title=

ಬೆಂಗಳೂರು: ಚುನಾವಣಾ ಗಣಿತದ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಸ್ಥಾನಗಳು ಬಂದಿಲ್ಲ ನಿಜ. ಆದರೆ ಬಿಜೆಪಿಗಿಂತ ಕಾಂಗ್ರೆಸ್ ಸುಮಾರು‌ ಶೇಕಡಾ ಎರಡರಷ್ಟು ಹೆಚ್ಚು ಮತಗಳಿಸಿರುವುದು  ಕೂಡಾ ಅಷ್ಟೇ ನಿಜ. ಜನ ಕಾಂಗ್ರೆಸ್‌ ಜತೆಯಿದ್ದಾರೆ ಎನ್ನುವುದಕ್ಕೆ ರಾಜರಾಜೇಶ್ವರಿ ನಗರ ಕ್ಷೇತ್ರದ ಗೆಲುವು ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ರಾಜರಾಜೇಶ್ವರಿ‌ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಸತ್ಯದ ಗೆಲುವು. ಪಕ್ಷವನ್ನು ಯಾವ ಮಾರ್ಗದಿಂದಾದರೂ ಸೋಲಿಸಬೇಕೆಂಬ ವಿರೋಧಿಗಳ ಷಡ್ಯಂತ್ರದ ಸೋಲು ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮುನಿರತ್ನ ಗೆಲುವು ನಿರೀಕ್ಷಿತ. ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೇ ಮುನುರತ್ನ ಗೆಲುವು ಸಾಧಿಸುತ್ತಿದ್ದರು. ಕಾಂಗ್ರೆಸ್‌ ಪಕ್ಷಕ್ಕೆಮತ ಹಾಕಿದ ರಾಜರಾಜೇಶ್ವರಿ ನಗರ ಕ್ಷೇತ್ರದ  ಮತದಾರರಿಗೆ ಕೃತಜ್ಞತೆಗಳು. ಮುನಿರತ್ನ ಅವರಿಗೆ ಅಭಿನಂದನೆಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Trending News