Vaikunta Ekadashi: ಪೂರ್ಣ ಲಸಿಕೆ ಪಡೆದಿದ್ದರೆ ಮಾತ್ರ ವೈಕುಂಠ ಏಕಾದಶಿ ಹಬ್ಬದಂದು ದೇವಸ್ಥಾನಕ್ಕೆ ಪ್ರವೇಶ

ವೈಕುಂಠ ಏಕಾದಶಿ (Vaikunta Ekadashi) ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆ (Covid-19 Vaccine) ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.

Edited by - Yashaswini V | Last Updated : Jan 12, 2022, 11:54 AM IST
  • ನಾಳೆ ಜನವರಿ 13 ರಂದು ವೈಕುಂಠ ಏಕಾದಶಿ ಹಾಗೂ ಜ. 15 ರಂದು ಮಕರ ಸಂಕ್ರಾಂತಿ ಹಬ್ಬಗಳ ಆಚರಣೆ
  • ಈ ಸಂದರ್ಭದಲ್ಲಿ ಸಾರ್ವಜನಿಕರು ಕೋವಿಡ್ 19 ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ
  • ಹಬ್ಬದ ಸಂದರ್ಭದಲ್ಲಿ ದೇವಾಲಯಗಳಿಗೆ ತೆರಳುವ ಮುನ್ನ ಈ ನಿಯಮಗಳನ್ನು ತಪ್ಪದೇ ಓದಿ
Vaikunta Ekadashi: ಪೂರ್ಣ ಲಸಿಕೆ ಪಡೆದಿದ್ದರೆ ಮಾತ್ರ ವೈಕುಂಠ ಏಕಾದಶಿ ಹಬ್ಬದಂದು ದೇವಸ್ಥಾನಕ್ಕೆ ಪ್ರವೇಶ title=
Vaikuntha Ekadashi

ಬೆಂಗಳೂರು : ನಾಳೆ ಜನವರಿ 13 ರಂದು ವೈಕುಂಠ ಏಕಾದಶಿ ಹಾಗೂ ಜ. 15 ರಂದು ಮಕರ ಸಂಕ್ರಾಂತಿ (Makara Sankranti) ಹಬ್ಬಗಳ ಆಚರಣೆ ನಡೆಯಲಿದ್ದು, ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಕೋವಿಡ್ 19 (Covid 19) ವೈರಾಣು ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಲುವಾಗಿ ವಿಪತ್ತು ನಿರ್ವಹಣಾ ಅಧಿನಿಯಮ, 2005 ರ ಸೆಕ್ಷನ್ 24(ಎಲ್)ರ ಅಡಿ ಜ.4 ರಂದು ಹೊರಡಿಸಲಾದ ಮಾರ್ಗಸೂಚಿಗಳೊಂದಿಗೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

1. ವೈಕುಂಠ ಏಕಾದಶಿ (Vaikunta Ekadashi) ಹಾಗೂ ಸಂಕ್ರಾಂತಿ (Sankranti) ಹಬ್ಬಗಳ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ-  Makar Sankranti 2022: ಇನ್ನೆರಡು ದಿನಗಳಲ್ಲಿ ಹೊಳೆಯಲಿದೆ ಈ 3 ರಾಶಿಯವರ ಅದೃಷ್ಟ

2. ವೈಕುಂಠ ಏಕಾದಶಿ (Vaikunta Ekadashi) ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆ (Covid-19 Vaccine) ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.

3. ಹಬ್ಬಗಳ ಆಚರಣೆಯ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸುವಂತಿಲ್ಲ.

ಇದನ್ನೂ ಓದಿ- Money Dream: ಕನಸಿನಲ್ಲಿ ಹಣ ಕಂಡರೆ ನಿಜ ಜೀವನದಲ್ಲಿ ಲಾಭವೋ? ನಷ್ಟವೋ? ಈ ಪ್ರಮುಖ ಚಿಹ್ನೆಗಳನ್ನು ತಿಳಿಯಿರಿ

4. ಬೆಂಗಳೂರು ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳೀಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಕ್ರಮವಹಿಸತಕ್ಕದ್ದು ಎಂದು ಆದೇಶದಲ್ಲಿ ಸೂಚಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News