ನಿಮಗೆ ಗೋವಾ ಮುಖ್ಯಮಂತ್ರಿ ಪತ್ರ ಬರೆಯಲು ನೀವೇನು ರಾಜ್ಯದ ಮುಖ್ಯಮಂತ್ರಿಯೇ?-ಬಿಎಸ್ ವೈಗೆ ಪ್ರಶ್ನಿಸಿದ ವಾಟಾಳ್ ನಾಗರಾಜ್

   

Last Updated : Dec 26, 2017, 08:05 PM IST
ನಿಮಗೆ ಗೋವಾ ಮುಖ್ಯಮಂತ್ರಿ ಪತ್ರ ಬರೆಯಲು ನೀವೇನು ರಾಜ್ಯದ ಮುಖ್ಯಮಂತ್ರಿಯೇ?-ಬಿಎಸ್ ವೈಗೆ ಪ್ರಶ್ನಿಸಿದ ವಾಟಾಳ್ ನಾಗರಾಜ್  title=
ಸಂಗ್ರಹ ಚಿತ್ರ

ಬೆಂಗಳೂರು: ಗೋವಾದ ಮುಖ್ಯಮಂತ್ರಿಗಳು ನಿಮಗೆ ಪತ್ರ ಬರೆಯಲು ನೀವೇನು ಕರ್ನಾಟಕದ ಮುಖ್ಯಮಂತ್ರಿಯೇ ? ಎಂದು ಬಿಜೆಪಿ ನಾಯಕ ಯಡಿಯೂರಪ್ಪನವರಿಗೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ನಾಗರಾಜ್ ಮಾತನಾಡುತ್ತಾ ಗೋವಾ ಮುಖ್ಯಮಂತ್ರಿ ನಿಮಗೆ ಪತ್ರ ಬರೆಯಲು ನೀವ್ಯಾರು ನೀವೇನು ರಾಜ್ಯದ ಸಿಎಮ್ಮಾ ? ಎಂದು ಯಡಿಯೂರಪ್ಪರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಸಮಾವೇಶದಲ್ಲಿಯೇ ಗೋವಾ ಸಿಎಂ ಪತ್ರ ಓದಿದ್ದು ಯಾಕೆ? ಇದು ಕೇವಲ ಯಡಿಯೂರಪ್ಪ ಮತ್ತು ಮನೋಹರ್ ಪರಿಕ್ಕರ್ ಸೇರಿಕೊಂಡು ಆಡಿರುವ ನಾಟಕವೆಂದು ವ್ಯಂಗವಾಡಿದ್ದಾರೆ. 

ಪ್ರಧಾನಿ ಮೋದಿಯವರನ್ನು ಮಧ್ಯಸ್ಥಿಕೆಯೊಂದಿಗೆ ಕರ್ನಾಟಕ ಮತ್ತು ಗೋವಾದ ನಡುವಿನ ಸಮಸ್ಯೆಯ ಇತ್ಯರ್ಥಕ್ಕೆ ಸೇತುವೆಯಾಗಿ ಕೆಲಸ ಮಾಡಬೇಕಾಗಿತ್ತು ಆದರೆ ಅದನ್ನು ಬಿಟ್ಟು ನೀವು ರಾಜಕೀಯ ಮಾಡುತ್ತಿದ್ದಿರಿ, ಎಂದು ಅವರು ಯಡಿಯೂರಪ್ಪ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಯಡಿಯೂರಪ್ಪನವರು ಏಣಗಿ ಬಾಳಪ್ಪ  ಮಾಸ್ಟರ್ ಹಿರಣ್ಣಯ್ಯರವರನ್ನು ಮೀರಿಸಿದ ಪಾತ್ರವನ್ನು ಮಹದಾಯಿ ವಿಷಯದಲ್ಲಿ ಮಾಡುತ್ತಿದ್ದಾರೆ. ಮಹಾದಾಯಿಯಂತಹ ವಿಷಯದಲ್ಲಿ  ರಾಜಕೀಯ ಮಾಡಬೇಡಿ ಅದರ ಬದಲಾಗಿ ಸಮಸ್ಯ್ಯೆಯ ಇತ್ಯರ್ಥಕ್ಕೆ  ಪ್ರಯತ್ನಿಸಿ ಎಂದು ವಾಟಾಳ್ ನಾಗರಾಜ್ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Trending News