ಔಷಧಿ ಬೇಕೆಂದಿಲ್ಲ, ಈ ಜ್ಯೂಸ್ ಅನ್ನು ನಿತ್ಯ ಸೇವಿಸಿದರೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ ಲೆವೆಲ್

Diabetes Friendly Drinks: ಮಧುಮೇಹ ರೋಗಿಗಳು ದಿನಕ್ಕೆ 3 ರೀತಿಯ ಪಾನೀಯಗಳನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. 

Written by - Ranjitha R K | Last Updated : Sep 22, 2023, 02:57 PM IST
  • ಮಧುಮೇಹವು ಬಹಳ ಸಂಕೀರ್ಣವಾದ ಕಾಯಿಲೆ.
  • ಮಧುಮೇಹಿಗಳಿಗೆ ಬೆಸ್ಟ್ ಈ 3 ಪಾನೀಯಗಳು
  • ಸಕ್ಕರೆ ಮಟ್ಟವನ್ನು ಈ ರೀತಿ ನಿಯಂತ್ರಿಸಬಹುದು
ಔಷಧಿ ಬೇಕೆಂದಿಲ್ಲ, ಈ ಜ್ಯೂಸ್ ಅನ್ನು ನಿತ್ಯ ಸೇವಿಸಿದರೆ  ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ ಲೆವೆಲ್ title=

Diabetes Friendly Drinks : ಮಧುಮೇಹವು ಬಹಳ ಸಂಕೀರ್ಣವಾದ ಕಾಯಿಲೆ. ದೇಹವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದ ದೀರ್ಘಕಾಲದ ಸ್ಥಿತಿಯನ್ನೇ ಮಧುಮೇಹ ಎಂದು ಕರೆಯಲಾಗುತ್ತದೆ. ಇದಕ್ಕಾಗಿ, ನಾವು ದೈಹಿಕವಾಗಿ ಸಕ್ರಿಯವಾಗಿರುವುದು ಮತ್ತು ಯಾವಾಗಲೂ ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವ್ಯಾಟ್ಸ್ ಪ್ರಕಾರ, ಮಧುಮೇಹ ರೋಗಿಗಳು ದಿನಕ್ಕೆ 3 ರೀತಿಯ ಪಾನೀಯಗಳನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. 

ಈ 3 ಪಾನೀಯಗಳನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು : 
1. ಮೆಂತ್ಯೆ ನೀರು : 

ಮೆಂತ್ಯೆ ತುಂಬಾ ರುಚಿಕರವಾದ ಮಸಾಲೆಯಾಗಿದ್ದು, ಇದನ್ನು ಉಪ್ಪಿನಕಾಯಿ ಸೇರಿದಂತೆ ಕೆಲವು ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ನಾವು ಅದರ ನೀರನ್ನು ಕುಡಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನನಿಯಂತ್ರಿಸಬಹುದು. ಕರಗುವ ಫೈಬರ್ ಗಳು (Soluble fibres) ಮೆಂತ್ಯೆ ನೀರಿನಲ್ಲಿ ಕಂಡುಬರುತ್ತವೆ. ಇದು ಗ್ಲುಕೋಮನ್ನನ್ (Glucomannan) ಅನ್ನು ಸಹ ಒಳಗೊಂಡಿದೆ. ಇವು  ಸಕ್ಕರೆ ಮತ್ತು ಆಲ್ಕಲಾಯ್ಡ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತವೆ. ಇದರಲ್ಲಿರುವ  ಫೆನ್ಯೂಗ್ರೆಸಿನ್ (Fenugrecin)  ಮತ್ತು ಟ್ರೈಗೋನೆಲಿನ್ (Trigonelline) ಹೈಪೊಗ್ಲಿಸಿಮಿಕ್ ಕ್ರಿಯೆಯಲ್ಲಿ (Hydroxyisoleucine) ಸಹಾಯ ಮಾಡುತ್ತದೆ. ಮೆಂತ್ಯೆಯಲ್ಲಿರುವ ಹೈಡ್ರಾಕ್ಸಿಸೋಲ್ಯೂಸಿನ್ ಅಮೈನೋ ಆಮ್ಲಗಳು ನಮ್ಮ ಮೇದೋಜ್ಜೀರಕ ಗ್ರಂಥಿ ಇನ್ಸುಲಿನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಬಾದಾಮಿ

2. ಅಮೃತಬಳ್ಳಿ ನೀರು:
ಕರೋನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಅಮೃತಬಳ್ಳಿ  ಅನ್ನು ಹೆಚ್ಚಾಗಿ ಬಳಸಿರುತ್ತೇವೆ. ಏಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಇದರ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕೂಡಾ ಸಾಧ್ಯವಾಗುತ್ತದೆ. ಬರ್ಬರೀನ್‌ನಂತಹ ಆಲ್ಕಲಾಯ್ಡ್ ಸಂಯುಕ್ತಗಳು ಅಮೃತಬಳ್ಳಿಯಲ್ಲಿ ಕಂಡುಬರುತ್ತವೆ. ಇದು ಮಧುಮೇಹಕ್ಕೆ ಸಾಂಪ್ರದಾಯಿಕ ಗಿಡಮೂಲಿಕೆ ಪರಿಹಾರ ಎನ್ನುವುದು ವಿವಿಧ ಅಧ್ಯಯನಗಳ ಮೂಲಕ ಕಂಡುಹಿಡಿಯಲಾಗಿದೆ. 

3. ಚಕ್ಕೆ ಚಹಾ : 
ನೀವು ಚಕ್ಕೆಯನ್ನು ಹಲವು ರೀತಿಯಲ್ಲಿ ಸೇವಿಸಿರಬಹುದು. ಸಾಮಾನ್ಯವಾಗಿ ಇದನ್ನು ಪುಲಾವ್, ಬಿರಿಯಾನಿ ಮತ್ತು ಪನೀರ್, ನಾನ್ ವೆಜ್ ಅಡುಗೆಯಲ್ಲಿ ಬಳಸಲಾಗುತ್ತದೆ. ಮಧುಮೇಹ ರೋಗಿಗಳು ನಿಯಮಿತವಾಗಿ ಈ ಚಹಾವನ್ನು ಸೇವಿಸಿದರೆ, ಕೆಲವೇ ವಾರಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಚಕ್ಕೆ ಗ್ಲೈಕೊಜೆನ್  ಸಿನ್ಥೆಸಿಸ್ (Glycogen Synthesis) ಮೇಲೆ ಪರಿಣಾಮ ಬೀರುವ ಮೂಲಕ ಗ್ಲೈಕೊಜೆನ್  ಸ್ಟೋರೇಜ್ ಅನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿಯಲ್ಲಿ ಕಂಡುಬರುವ ನೈಸರ್ಗಿಕ ಏಜೆಂಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Male Fertility: ಈ 5 ಆಹಾರ ಸೇವಿಸುವುದರಿಂದ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ.!

 

(ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News