Daily Horoscope: ದಿನಭವಿಷ್ಯ 28-05-2021 Today astrology

ಶ್ರೀ ಶ್ರೀ ಕ್ಷೇತ್ರ ಕೊಲ್ಲಾಪುರ ಮಹಾಲಕ್ಷ್ಮಿ ದೇವಿ  ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

Written by - Zee Kannada News Desk | Last Updated : May 28, 2021, 06:50 AM IST
  • ಕರ್ಕಾಟಕ ರಾಶಿಯವರಿಗೆ ಇಂದು ಹಲವಾರು ಕಷ್ಟಗಳು ಎದುರಾಗಲಿದೆ
  • ವೃಶ್ಚಿಕ ರಾಶಿಯವರು ಇಂದು ನಿಮ್ಮ ಮನೋಧರ್ಮವು ನಿಮಗೆ ನಷ್ಟವನ್ನು ಉಂಟು ಮಾಡುತ್ತದೆ
  • ಮೀನ ರಾಶಿಯವರಿಗೆ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
Daily Horoscope: ದಿನಭವಿಷ್ಯ 28-05-2021 Today astrology title=
Daily Horoscope (ದಿನಭವಿಷ್ಯ 28-05-2021)

Daily Horoscope (ದಿನಭವಿಷ್ಯ 28-05-2021) :  ಶ್ರೀ ಶ್ರೀ ಕ್ಷೇತ್ರ ಕೊಲ್ಲಾಪುರ ಮಹಾಲಕ್ಷ್ಮಿ ದೇವಿ  ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

ಮೇಷ ರಾಶಿ:
ಕೆಲಸದಲ್ಲಿ ನಿಮಗೆ ಉತ್ತಮವಾಗಿರುತ್ತದೆ. ನಿಮಗೆ ಇಂದು ನಿಮ್ಮ ಕೈಯಲ್ಲಿ ಉತ್ತಮವಾದ ಭವಿಷ್ಯವಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಂಪೂರ್ಣವಾಗಿ ಲಾಭ ಸಿಗುತ್ತದೆ ಹಾಗೂ ಆದಾಯದಲ್ಲಿ ನಿಮಗೆ ಹೆಚ್ಚಳವಾಗುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಸ್ವಲ್ಪ ಹಣದ ವಿಚಾರದಲ್ಲಿ ಬೇರೆಯವರ ಜೊತೆ ಜಗಳವಾಗುತ್ತದೆ ಹಾಗೂ ಕೋಪವನ್ನು ತಾಳ್ಮೆಯಿಂದ ತಡೆದುಕೊಳ್ಳಬೇಕು. ಬೇರೆಯವರ ಜೊತೆ ಶಾಂತಿಯಾಗಿ ಮಾತನಾಡಬೇಕು. ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ.
ನಿಮ್ಮ ಅದೃಷ್ಟ ಬಣ್ಣ-ಕಿತ್ತಳೆ
ಅದೃಷ್ಟ ಸಂಖ್ಯೆ -2

ವೃಷಭ ರಾಶಿ:
ದೀರ್ಘ ಕಾಲದವರೆಗೆ ನಿಮ್ಮ ಕೆಲಸದಲ್ಲಿ ನಿರತರಾಗಿರುತ್ತೀರಿ ಹಾಗೂ ನಿಮಗೆ ಸಮಯ ಸಿಗುತ್ತಿಲ್ಲ. ನಿಮ್ಮ ಪ್ರಿಯತಮೆ ಗೋಸ್ಕರ ನೀವು ಇವತ್ತು ಒಂದು ಕಡೆ ಹೊರಗಡೆ ಹೋಗುತ್ತೀರಾ. ವೈವಾಹಿಕ ಜೀವನ ತುಂಬಾ ಸಂತೋಷವಾಗಿರುತ್ತದೆ ಹಾಗೂ ದಂಪತಿಗಳಿಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಕೆಲಸದ ಬಗ್ಗೆ ಆಸಕ್ತಿ ತೋರಿಸುತ್ತೀರಿ. ಸಂಗಾತಿಯ ಬೆಂಬಲವನ್ನು ಪಡೆದುಕೊಳ್ಳುತ್ತೀರಿ. ಯಾವುದೇ ಕೆಲಸವನ್ನಾದರೂ ನೀವು ಇಂದು ಸಂಪೂರ್ಣವಾಗಿ ಪೂರ್ಣಗೊಳಿಸಲಿದ್ದೀರಿ. ಅದೃಷ್ಟ ಬಣ್ಣ-ಕಂದು
ಅದೃಷ್ಟ ಸಂಖ್ಯೆ-6

ಮಿಥುನ ರಾಶಿ:
ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ ಹಾಗೂ ಕುಟುಂಬದ ಸದಸ್ಯರ ಜೊತೆ ತುಂಬಾ ಚೆನ್ನಾಗಿ ಗೌರವದಿಂದ ಇರುತ್ತೀರ. ನಿಮ್ಮ ತಾಯಿಯ ಆರೋಗ್ಯವನ್ನು ಸುಧಾರಿಸುವುದರಲ್ಲಿ ನೀವು ಒಂದು ದೊಡ್ಡ ಕಂಟಕವನ್ನು ಪರಿಹಾರ ಮಾಡಿಕೊಳ್ಳುತ್ತೀರಿ. ಇಂದು ನಿಮ್ಮ ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಹಾಗೂ ನಿಮ್ಮ ಕುಟುಂಬದ ಸದಸ್ಯರ ಜೊತೆ ತುಂಬಾ ಆತ್ಮೀಯವಾಗಿರಿತ್ತೀರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ. ನಿಮ್ಮ ಪ್ರೀತಿಯ ನಡವಳಿಕೆಗಳು ಎಲ್ಲಾ ಒತ್ತಡವನ್ನು ನಿವಾರಣೆ ಮಾಡುತ್ತದೆ ಹಾಗೂ ಕೆಲಸದ ಬಗ್ಗೆ ಆಸಕ್ತಿ ತೋರಿಸುತ್ತೀರಿ. ಅದೃಷ್ಟ ಬಣ್ಣ- ಗುಲಾಬಿ
ಅದೃಷ್ಟ ಸಂಖ್ಯೆ-2

ಕರ್ಕಾಟಕ ರಾಶಿ:
ಜೀವನದಲ್ಲಿ ಹಲವಾರು ಕಷ್ಟಗಳು ಬರುತ್ತದೆ. ಆದರೆ ಅದನ್ನು ಭಯಪಡದೆ ಧೈರ್ಯದಿಂದ ಎದುರಿಸಬೇಕು. ಪೂರ್ಣ ಸಕಾರಾತ್ಮಕತೆಯೊಂದಿಗೆ ಮುಂದೆ ನಡೆಯಿರಿ. ನಿಮ್ಮ ಸಮಸ್ಯೆಗಳು ಶೀಘ್ರದಲ್ಲಿ ಮುಗಿಯುತ್ತದೆ ಹಾಗೂ ನಿಮಗೆ ಯಾವುದೇ ತೊಂದರೆ ಇದ್ದರೂ ಈಗ ನಿವಾರಣೆಯಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಹೊಸ ಯೋಜನೆಯನ್ನು ಪ್ರಾರಂಭ ಮಾಡಿದ್ದರೆ ನಿಮ್ಮ ಆಪ್ತರನ್ನು ಭೇಟಿ ಮಾಡಿ ಅವರ ಸಲಹೆಯನ್ನು ಪಡೆದುಕೊಳ್ಳಿ. ನಿಮಗೆ ವ್ಯಾಪಾರದಲ್ಲಿ ಉತ್ತಮವಾದ ಲಾಭ ಸಿಗುತ್ತದೆ. ಸ್ವಲ್ಪ ವೈವಾಹಿಕ ಜೀವನದಲ್ಲಿ ಗೊಂದಲ ಉಂಟಾಗುತ್ತದೆ.
ಅದೃಷ್ಟ ಬಣ್ಣ-ಕೆಂಪು
ಅದೃಷ್ಟ ಸಂಖ್ಯೆ -7

ಇದನ್ನೂ ಓದಿ- Watch Vastu Tips: ಯಮರಾಜನ ದಿಕ್ಕಂತೆ ಇದು; ಇಲ್ಲಿ ಗಡಿಯಾರ ಹಾಕುವ ತಪ್ಪು ಮಾಡದಿರಿ

ಸಿಂಹ ರಾಶಿ:
ಇಂದು ನಿಮಗೆ ಸಾಮಾನ್ಯವಾದ ದಿನವಾಗಿರುತ್ತದೆ. ಇಂದು ಯಾವುದೇ ಕಾರಣವಿಲ್ಲದೆ ನಿಮ್ಮ ಮನಸ್ಸು ಸ್ವಲ್ಪ ಖಿನ್ನತೆಗೆ ಒಳಗಾಗುತ್ತದೆ. ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಿದೆ. ಅದರಿಂದ ಸ್ವಲ್ಪ ಕೆಲಸದ ಬಗ್ಗೆ ಎಚ್ಚರಿಕೆ ಕೊಡಬೇಕು. ಸ್ನೇಹಿತರು ಮತ್ತು ಕುಟುಂಬದ ಜೊತೆ ಸಮಯ ಕಳೆಯುತ್ತೀರಿ. ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಿ, ನಿಮ್ಮ ಒತ್ತಡವನ್ನು ಕಡಿಮೆ ಮಾಡಿದರೆ ಒಳಿತು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಮೂಡುತ್ತದೆ.
ಅದೃಷ್ಟ ಬಣ್ಣ-ಕಿತ್ತಳೆ
ಅದೃಷ್ಟ ಸಂಖ್ಯೆ-6

ಕನ್ಯಾ ರಾಶಿ:
ಇಂದು ನಿಮಗೆ ಕೆಲಸದ ವಿಚಾರದಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗಬಹುದು. ಆದರೆ ಅದರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಳ್ಳದೆ ಬುದ್ಧಿವಂತಿಕೆಯಿಂದ ಪರಿಹಾರ ಕಂಡುಕೊಳ್ಳಬೇಕು. ಇಂದು ನಿಮಗಾಗಿ ಸಾಕಷ್ಟು ಸಮಯವನ್ನು ಮೀಸಲಿಡಬೇಕು. ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತದೆ. ಇಂದು ನಿಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಯೋಚಿಸುತ್ತೀರಿ. ಕುಟುಂಬ ಸದಸ್ಯರ ಜೊತೆ ತುಂಬಾ ಚೆನ್ನಾಗಿರುತ್ತದೆ ಹಾಗೂ ಸಂಗಾತಿ ಜೊತೆ ಉತ್ತಮವಾದ ಜೀವನ ನಡೆಸುತ್ತೀರಿ. ಯಾವುದೇ ಆರ್ಥಿಕ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ಅದೃಷ್ಟ ಬಣ್ಣ-ಬಿಳಿ
ಅದೃಷ್ಟ ಸಂಖ್ಯೆ-5

ತುಲಾ ರಾಶಿ:
ಇಂದು ನಿಮಗೆ ಮಿಶ್ರ ಫಲಿತಾಂಶ ಸಿಗುತ್ತದೆ. ಇನ್ನು ಹಣದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಯೋಜನೆಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಬೇಕು. ಸ್ವಲ್ಪ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ. ನಿಮಗೆ ರಾಜಕೀಯ ವಿಷಯದಲ್ಲಿ ತುಂಬಾ ಚೆನ್ನಾಗಿರುತ್ತದೆ. ಜನರು ನಿಮಗೆ ತುಂಬಾ ಬೆಂಬಲ ನೀಡುತ್ತಾರೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ.
ಇಂದಿನ ಅದೃಷ್ಟ ಬಣ್ಣ-ಕೇಸರಿ
ಅದೃಷ್ಟ ಸಂಖ್ಯೆ- 9

ವೃಶ್ಚಿಕ ರಾಶಿ :
ಇಂದು ನಿಮ್ಮ ಮನೋಧರ್ಮವು ನಿಮಗೆ  ನಷ್ಟವನ್ನು ಉಂಟು ಮಾಡುತ್ತದೆ. ಯಾವುದೇ ವಿಷಯದ ಬಗ್ಗೆ ವಾದಿಸುವ ಬದಲು ಸ್ವಲ್ಪ ಶಾಂತವಾಗಿರಬೇಕು. ಏಕೆಂದರೆ ನಿಮಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಆರ್ಥಿಕ ರಂಗದಲ್ಲಿ ನಿಮಗೆ ಇಂದು ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಕೆಲವು ಸಲ ನೀವು ಉಳಿತಾಯದ ಬಗ್ಗೆ ಗಮನ ಕೊಡಬೇಕು. ಇಲ್ಲದಿದ್ದರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಇಂದು ನಿಮ್ಮ ಕೋಪದ ಬಗ್ಗೆ ತಾಳ್ಮೆಯಿಂದ ಇರಬೇಕು ಹಾಗೂ ಹಣಕಾಸಿನ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಕುಟುಂಬ ಸದಸ್ಯರ ಜೊತೆ ತುಂಬಾ ಚೆನ್ನಾಗಿರುತ್ತದೆ. ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ.
ಅದೃಷ್ಟ ಬಣ್ಣ-ನೇರಳೆ
ಅದೃಷ್ಟ ಸಂಖ್ಯೆ-3

ಇದನ್ನೂ ಓದಿ- Vastu Tips: ಸಂತಾನ ಪ್ರಾಪ್ತಿ, ಸುಖ-ಶಾಂತಿಗಾಗಿ ಮನೆಯಲ್ಲಿರಲಿ ಈ ರೀತಿಯ ಚಿತ್ರ

ಧನಸ್ಸು ರಾಶಿ:
ಕೆಲಸ ಮಾಡುವಾಗ ನೀವು ಯಾವುದೇ ಯೋಜನೆ ಬಗ್ಗೆ ಮಾತನಾಡಿದರೆ ನಿಮಗೆ ಇಂದು ಹಣಕಾಸಿನ ಸೌಲಭ್ಯ ಸಿಗುತ್ತದೆ. ನಿಮಗೆ ಬಾಕಿ ಇರುವ ಕೆಲಸಗಳ ಬಗ್ಗೆ ಸ್ವಲ್ಪ ಗಮನ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಹಣದ ವಿಷಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು‌. ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಹೆಚ್ಚು ಕೆಲಸ ಇಲ್ಲದಿದ್ದರೆ ನಿಮ್ಮ ಸ್ನೇಹಿತರ ಜೊತೆ ಹೊರಗಡೆ ಹೋಗಿ ಕಾಲಕಳೆಯಲು ಅವಕಾಶ ಸಿಗಲಿದೆ. ಇಂದು ನಿಮ್ಮ ಕೆಲವು ಸಮಸ್ಯೆ ನಿವಾರಣೆ ಆಗುತ್ತದೆ. ಸ್ವಲ್ಪ ನಿಮಗೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಅದೃಷ್ಟ ಬಣ್ಣ-ಬಿಳಿ
ಅದೃಷ್ಟ ಸಂಖ್ಯೆ- 4

ಮಕರ ರಾಶಿ:
ಇಂದು ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ನೀವು ಮಾತನಾಡುವ ಶೈಲಿಯಿಂದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಬಹುದು. ಇದನ್ನು ಮಾಡದಿದ್ದರೆ ಮನೆಯ ವಾತಾವರಣದಿಂದ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಸರಿಯಾದ ಕ್ರಮಗಳನ್ನು ಪಾಲಿಸಬೇಕು. ಹಣದ ದೃಷ್ಟಿಯಲ್ಲಿ ನಿಮಗೆ ಇಂದು ಸ್ವಲ್ಪ ಉತ್ತಮವಾಗಿಲ್ಲ. ನೀವು ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಅದೃಷ್ಟ ಬಣ್ಣ -ಕಂದು
ಅದೃಷ್ಟ ಸಂಖ್ಯೆ- 9

ಕುಂಭ ರಾಶಿ :
ಇಂದು ನಿಮ್ಮ ಕಠಿಣ ಪರಿಶ್ರಮದಿಂದ ಯಶಸ್ವಿಯಾಗಿರುತ್ತದೆ. ಉತ್ತಮ ಉದ್ಯೋಗದ ಬಗ್ಗೆ ಪ್ರಸ್ತಾಪ ಪಡೆಯುತ್ತೀರಿ. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಹಣದ ದೃಷ್ಟಿಯಿಂದ ನಿಮಗೆ ಇಂದು ಉತ್ತಮವಾಗಿರುತ್ತದೆ. ನೀವು ಸ್ವಲ್ಪ ಚಿಂತನಶೀಲರಾಗಿ ಇರಬೇಕು. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಅನಗತ್ಯ ವಿಷಯಗಳಿಗೆ ಹಣವನ್ನು ವ್ಯರ್ಥ ಮಾಡಬೇಡಿ. ನಿರುದ್ಯೋಗಿಗಳಾಗಿದ್ದರೆ ನಿಮಗೆ ಇಂದು ಕೆಲಸ ಸಿಗುತ್ತದೆ. ಇಂದು ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಯಾವುದೇ ಕೆಲಸ ಮಾಡಿದರೂ ನಿಮಗೆ ಇಂದು ಒಳ್ಳೆಯದಾಗುತ್ತದೆ. ಆದರೆ ಸ್ವಲ್ಪ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಸ್ವಚ್ಛತೆ ಮತ್ತು ಆಹಾರದ ಬಗ್ಗೆ ಗಮನವಿರಬೇಕು. ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ.
ಅದೃಷ್ಟ ಬಣ್ಣ-ಕೆಂಪು
ಅದೃಷ್ಟ ಸಂಖ್ಯೆ- 7

ಮೀನ ರಾಶಿ:
ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ನೀವು ಮಾಡುವ ಕೆಲಸಗಳು ಉತ್ತಮವಾಗಿರುತ್ತದೆ. ಇಂದು ನಿಮ್ಮ ಆಲೋಚನೆ ಕಾರ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಬೇಕು. ಬಹಳ ಸಮಯದ ನಂತರ ನಿಮಗೆ ತೃಪ್ತಿ ಸಿಗುತ್ತದೆ. ಹಿರಿಯರು ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಬೆಂಬಲ ನೀಡುತ್ತಾರೆ. ಕೆಲಸವನ್ನು ಎಚ್ಚರಿಕೆಯಿಂದ ಮಾಡಿ ನಿಮಗೆ ದೊಡ್ಡ ಕೊಡುಗೆ ಸಿಗುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಶೀಘ್ರದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಹುದು.
ಅದೃಷ್ಟ ಬಣ್ಣ-ನೇರಳೆ
ಅದೃಷ್ಟ ಸಂಖ್ಯೆ-2

ಇದನ್ನೂ ಓದಿ- ಪ್ರತಿನಿತ್ಯ ಈ ಕೆಲಸಗಳನ್ನು ಮಾಡುತ್ತಾ ಬಂದರೆ ಸಿಗಲಿದೆ ಭಾರೀ ಪ್ರಯೋಜನ ತಿಳಿಯಿರಿ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News