Garuda Purana: ಗರುಡ ಪುರಾಣದ ಪ್ರಕಾರ ಇವು ಅತ್ಯಂತ ಅಪಾಯಕಾರಿ 'ತಪ್ಪುಗಳು'

ಪುರುಷ ಮತ್ತು ಮಹಿಳೆಯ ಲೈಂಗಿಕ ಸಂಬಂಧವು ಅವರ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಕರ್ಮ ಮಾಡುವವನು ಮುಂದಿನ ಜನ್ಮವನ್ನು ಯಾವ ರೂಪದಲ್ಲಿ ಜನ್ಮ ತಾಳುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

Written by - Yashaswini V | Last Updated : Jan 20, 2022, 12:45 PM IST
  • ಗರುಡ ಪುರಾಣದಲ್ಲಿ ಲೈಂಗಿಕತೆಗೆ ಸಂಬಂಧಿಸಿದ ರಹಸ್ಯಗಳನ್ನು ಹೇಳಲಾಗಿದೆ

    ಮಹಿಳೆಯನ್ನು ಅವಮಾನಿಸುವವನು ದುರ್ಬಲನಾಗುತ್ತಾನೆ
  • ಗರುಡ ಪುರಾಣದಲ್ಲಿ ಮಹಿಳೆಯ ಅಪಹರಣವನ್ನು ಮಹಾಪಾಪ
Garuda Purana: ಗರುಡ ಪುರಾಣದ ಪ್ರಕಾರ ಇವು ಅತ್ಯಂತ ಅಪಾಯಕಾರಿ 'ತಪ್ಪುಗಳು' title=
Karma phala in garuda purana

Garuda Purana: ಹಿಂದೂ ಧರ್ಮದಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಆತನ ಕರ್ಮಗಳಿಗೆ ಅನುಗುಣವಾಗಿ ಪಡೆಯುವ ಫಲಗಳ ಕಲ್ಪನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕ್ರಿಯೆಗಳು ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮದಲ್ಲಿ ಅವನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಗರುಡ ಪುರಾಣವು ವ್ಯಕ್ತಿಯ ಪಾತ್ರ ಮತ್ತು ಕೆಟ್ಟ ಕಾರ್ಯಗಳನ್ನು ವಿವರಿಸುತ್ತದೆ, ಇದು ಕೆಟ್ಟ ಅಭ್ಯಾಸವು ಅವನನ್ನು ದುರ್ಬಲಗೊಳಿಸುತ್ತದೆ. ಇದರ ಹೊರತಾಗಿ, ಯಾವ ಕ್ರಿಯೆಗಳು ಅವನನ್ನು ನರಕಕ್ಕೆ ಅಥವಾ ಸ್ವರ್ಗಕ್ಕೆ ಕರೆದೊಯ್ಯುತ್ತವೆ. ಅದರ ಎಲ್ಲಾ ವಿವರಗಳನ್ನು ಈ ಮಹಾನ್ ಪುಸ್ತಕದಲ್ಲಿ ನೀಡಲಾಗಿದೆ. 

ಈ ಕೆಟ್ಟ ಕೆಲಸಗಳಿಗೆ ಶಿಕ್ಷೆ ತಪ್ಪಿದ್ದಲ್ಲ:
ಗರುಡ ಪುರಾಣದಲ್ಲಿ (Garuda Purana), ಪುರುಷರು ಮತ್ತು ಮಹಿಳೆಯರಿಬ್ಬರ ಲೈಂಗಿಕ ಸಂಬಂಧಗಳಿಗೆ ಸಂಬಂಧಿಸಿದ ಕಾರ್ಯಗಳ ಬಗ್ಗೆ ಬಹಳಷ್ಟು ಹೇಳಲಾಗಿದೆ. ಇದರ ಪ್ರಕಾರ, ಮುಂದಿನ ಜೀವನದಲ್ಲಿ ಅವರು ಏನಾಗುತ್ತಾರೆ ಅಥವಾ ಯಾವ ರೀತಿಯ ಜೀವನವನ್ನು ಪಡೆಯುತ್ತಾರೆ ಎಂಬುದನ್ನು ಅವರ ಕ್ರಿಯೆಗಳು ನಿರ್ಧರಿಸುತ್ತವೆ ಎಂದು ಹೇಳಲಾಗುತ್ತದೆ.

ಗರುಡ ಪುರಾಣದ ಪ್ರಕಾರ, ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ದೈಹಿಕವಾಗಿ ನಿಂದಿಸುವ ವ್ಯಕ್ತಿಯು ಸಾವಿನ ಸಮಯದಲ್ಲಿ ನರಕಕ್ಕೆ ಹೋಗುತ್ತಾನೆ. ವರ್ಷಾನುಗಟ್ಟಲೆ ನರಕದಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಆತನ ಮುಂದಿನ ಜನ್ಮ ಹೆಬ್ಬಾವಿನ ರೂಪದಲ್ಲಿರಲಿದೆ. 

ಇದನ್ನೂ ಓದಿ- Budh Rashi Parivartan: ಈ 3 ರಾಶಿಯವರಿಗೆ ಮುಂದಿನ 45 ದಿನ ಬಹಳ ವಿಶೇಷ, ಸುರಿಯಲಿದೆ ಹಣದ ಮಳೆ

- ಯಾವ ವ್ಯಕ್ತಿಯು ತನ್ನ ಗುರುವಿನ ಹೆಂಡತಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾನೆಯೋ, ಅವನು ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ ಮುಂದಿನ ಜನ್ಮದಲ್ಲಿ ಗೋಸುಂಬೆಯಾಗಿ ಜನ್ಮತಾಳುತ್ತಾನೆ.

- ಯಾವ ವ್ಯಕ್ತಿ ತನ್ನ ಸ್ನೇಹಿತನ (Friend) ಹೆಂಡತಿಯೊಂದಿಗೆ ಸಂಬಂಧ ಹೊಂದಿರುತ್ತಾನೆಯೋ, ಅಂತಹವನು ಮುಂದಿನ ಜನ್ಮದಲ್ಲಿ ಕತ್ತೆಯಾಗಿ ಜನಿಸುತ್ತಾನೆ ಎಂದು ಹೇಳಲಾಗುತ್ತದೆ.

- ಗರುಡ ಪುರಾಣದಲ್ಲಿ ಮಹಿಳೆಯ ಅಪಹರಣವನ್ನು ಮಹಾಪಾಪ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವ ವ್ಯಕ್ತಿಯ ಮರಣದ ನಂತರ ಅವನ ಆತ್ಮವು ತುಂಬಾ ನರಳುತ್ತದೆ ಮತ್ತು ಬ್ರಹ್ಮರಾಕ್ಷಸನಾಗುತ್ತಾನೆ. ಅದು ಯಾರಿಗೂ ಕಾಣದ ಅಗೋಚರ ಜಾತಿ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ- Vasant Panchami 2022: ವಸಂತ ಪಂಚಮಿ ಯಾವ ದಿನ? ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..!

- ಅದೇ ಸಮಯದಲ್ಲಿ, ಮಹಿಳೆಯನ್ನು ಅವಮಾನಿಸುವ ವ್ಯಕ್ತಿ ಮುಂದಿನ ಜನ್ಮದಲ್ಲಿ ದುರ್ಬಲನಾಗುತ್ತಾನೆ. 

- ಯಾವುದೇ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಬೇರೆಯವರೊಂದಿಗೆ ಸಂಬಂಧವನ್ನು ಹೊಂದಿದ್ದರೆ, ಅಂತಹ ಮಹಿಳೆಯ ಆತ್ಮವು ಯಮಲೋಕದಲ್ಲಿ ಚಿತ್ರಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಮತ್ತು ಮುಂದಿನ ಜನ್ಮದಲ್ಲಿ ಅವಳು ಹಲ್ಲಿ, ಹಾವು ಅಥವಾ ಬಾವಲಿಯಾಗಿ ಜನಿಸುತ್ತಾಳೆ ಎಂದು ತಿಳಿಸಲಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News