Hanuman Mantra: ಮಂಗಳವಾರ ಆಂಜನೇಯನ ಮಂತ್ರ ಜಪಿಸುವುದಕ್ಕೆ ವಿಶೇಷ ಮಹತ್ವವಿದೆ, ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ

Chant Hanuman Mantra: ಮಂಗಳವಾರದ ದಿನ ಶ್ರೀ ಆಂಜನೇಯನ ಪೂಜಾ-ಪಠನೆ ಹಾಗೂ ವೃತವನ್ನು ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದರಿಂದ ಹಾಗೂ ವೃತವನ್ನು ಆಚರಿಸುವುದರಿಂದ ಹನುಮನ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ. ಇದರ ಜೊತೆಗೆ ಎಲ್ಲಾ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.   

Written by - Nitin Tabib | Last Updated : Jun 20, 2022, 10:13 PM IST
  • ಮಂಗಳವಾರ ಆಂಜನೇಯನ ಮಂತ್ರ ಜಪಿಸುವುದಕ್ಕೆ ವಿಶೇಷ ಮಹತ್ವವಿದೆ,
  • ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ
Hanuman Mantra: ಮಂಗಳವಾರ ಆಂಜನೇಯನ ಮಂತ್ರ ಜಪಿಸುವುದಕ್ಕೆ ವಿಶೇಷ ಮಹತ್ವವಿದೆ, ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ title=
Chant Hanuman Mantra

Hanuman Mantra Jaap: ಮಂಗಳವಾರ ಹನುಮನ ಪೂಜೆ, ಹನುಮಾನ್ ಚಾಲೀಸಾ ಪಠಣಕ್ಕೆ  ಮತ್ತು ಆಂಜನೇಯನ ಮಂತ್ರಗಳ ಜಾಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನದಂದು ಹನುಮನ ಮಂತ್ರ ಪಠಣದಿಂದ ಮಾತ್ರ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಶ್ರೀ ಆಂಜನೇಯ ತನ್ನ ಭಕ್ತರ ಕೇವಲ ನಿಜವಾದ ಭಕ್ತಿ ಮತ್ತು ಗೌರವದಿಂದ ಮಾತ್ರ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇಂದು ನಾವು ನಿಮಗೆ ಹನುಮನ ಕೆಲ ಮಂತ್ರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳ ಪಠಣ ಮಾತ್ರದಿಂದ ಭಕ್ತಾದಿಗಳ ದೊಡ್ಡ ಅಡೆತಡೆಗಳು ದೂರಗುತ್ತವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಮಂತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ, ಪ್ರತಿಯೊಂದು ಆಶಯಕ್ಕೂ ಪ್ರತ್ಯೇಕ ಮಂತ್ರವನ್ನು ಹೇಳಲಾಗಿದೆ. ಈ ಮಂತ್ರಗಳ ನಿಯಮಿತ ಉಚ್ಚಾರಣೆಯಿಂದ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರುತ್ತವೆ ಮತ್ತು ಭಕ್ತರ ಸಂಕಷ್ಟಗಳು ದೂರವಾಗುತ್ತವೆ. 

ಉದ್ಯೋಗ ಅಥವಾ ಕೆಲಸದ ಸಮಸ್ಯೆಗಾಗಿ
ಓಂ ಪಿಂಗಾಕ್ಷಾಯ ನಮಃ । ಮಂತ್ರವನ್ನು ಉಚ್ಛರಿಸಿ

ಗೌರವ ಮತ್ತು ಖ್ಯಾತಿ ಪಡೆಯಲು
ಓಂ ವ್ಯಾಪಕಾಯನಮಃ ಮಂತ್ರವನ್ನು ಪಠಿಸಿ.

ಮನೋಕಾಮನೆಗಳ ಪೂರೈಕೆಗಾಗಿ
ಓಂ ಮಹಾಬಲಯ ವೀರಾಯ ಚಿರಂಜೀವಿನ ಉದ್ಧತೇ ।
ಹರಿಣೇ ವಜ್ರ ದೇಹಾಯ ಚೋಲಂಘಿತಮಹವ್ಯಯೇ । ಮಂತ್ರವನ್ನು ಪಠಿಸಿ

ರೋಗಗಳ ನಿವಾರಣೆಗೆ 
'ಓಂ ನಮೋ ಭಗವತೇ ಆಂಜನೇಯ ಮಹಾಬಲಾಯ ಸ್ವಾಹಾ ಮಂತ್ರವನ್ನು ಪಠಿಸಿ

ಇಚ್ಛಾಪೂರ್ತಿಗಾಗಿ ಕೆಳಗಿನ ಮಂತ್ರ ಪಠಿಸಿ
ಔರ್ ಮನೋರಥ ಜೋ ಕೋಯಿ ಲಾವೈ .
ಸೋಯಿ ಅಮಿತ್ ಜೀವನ ಫಲ ಪಾವೈ।

ಸರ್ವ ಸುಖ-ಶಾಂತಿಗಾಗಿ ಈ ಮಂತ್ರ ಪಠಿಸಿ 
'ಓಂ ನಮೋ ಭಗವತೇ ಹನುಮತೇ ನಮಃ'.

ಸಕಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಳಗಿನ ಮಂತ್ರಗಳನ್ನು ಪಠಿಸಿ
ಓಂ ತೆಜಸೆ ನಮಃ:..
ಓಂ ಪ್ರಸನ್ನತ್ನೇ ನಮಃ:
ಓಂ ಶೂರಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಮಾರುತಾತ್ಮಜಾಯ ನಮಃ ।
ಓಂ ಹನುಮತೇ ನಮಃ ।

ಇದನ್ನೂ ಓದಿ-Mustard Seed Remedies: ಮನೆಯ ಸುಖ, ಶಾಂತಿ -ಸಮೃದ್ಧಿಯ ಹೆಚ್ಚಳಕ್ಕೆ ಚಿಟಿಕೆ ಸಾಸಿವೆ ಬಳಸಿ

ಕಷ್ಟಕರವಾದ ಕಾರ್ಯಗಳ ಸಿದ್ಧಿಗಾಗಿ ಕೆಳಗಿನ ಮಂತ್ರ ಪಠಿಸಿ
ದುರ್ಗಮ ಕಾಜ ಜಗತ ಕೆ ಜೆತೆ .
ಸುಗಮ ಅನುಗ್ರಹ ತುಮ್ಹಾರೆ ತೆತೆ.

ಇದನ್ನೂ ಓದಿ-Love Marriage Line: ಲವ್ ಲೈಫ್ ಕುರಿತು ಹೇಳುತ್ತೆ ಅಂಗೈಯಲ್ಲಿನ ಈ ರೇಖೆ, ನೀವೂ ಪರೀಕ್ಷಿಸಿಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News