Money plant vastu: ಮನಿ ಪ್ಲಾಂಟ್ ದಾನ ಮಾಡುವುದು ಅಥವಾ ಕದಿಯುವುದು ಸರಿಯೋ ತಪ್ಪೋ?

ಮನಿ ಪ್ಲಾಂಟ್ ವಾಸ್ತು: ಮನಿ ಪ್ಲಾಂಟ್ ಅನ್ನು ಹಣವನ್ನು ಆಕರ್ಷಿಸುವ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್ ಇರುವ ಮನೆಯಲ್ಲಿ ಸಮೃದ್ಧಿಯ ಮಳೆಯಾಗುತ್ತದೆ. ಆದರೆ ಮನಿ ಪ್ಲಾಂಟ್ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ, ಅವುಗಳ ಸರಿಯಾದ ಉತ್ತರಗಳನ್ನು ತಿಳಿದುಕೊಳ್ಳಬೇಕು.

Written by - Puttaraj K Alur | Last Updated : Jul 28, 2023, 02:48 PM IST
  • ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಗಿಡಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ
  • ಮನಿಪ್ಲಾಂಡ್ ಕಳ್ಳತನ ಮಾಡಿದ್ರೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ
  • ಮನಿ ಪ್ಲಾಂಟ್ ದಾನ ಮಾಡಿದ್ರೆ ನಿಮ್ಮ ಮನೆಯ ಸಂತೋಷ & ಸಮೃದ್ಧಿ ಇನ್ನೊಬ್ಬರ ಮನೆಗೆ ಹೋಗುತ್ತದೆ
Money plant vastu: ಮನಿ ಪ್ಲಾಂಟ್ ದಾನ ಮಾಡುವುದು ಅಥವಾ ಕದಿಯುವುದು ಸರಿಯೋ ತಪ್ಪೋ?   title=
ಮನಿ ಪ್ಲಾಂಟ್ ವಾಸ್ತು

ನವದೆಹಲಿ: ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಗಿಡಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕಾಗಿಯೇ ಮನೆಯ ಒಳಗೆ ಮತ್ತು ಹೊರಗೆ ಮರ-ಗಿಡಗಳನ್ನು ಪೂಜಿಸಲು ಹೇಳಲಾಗಿದೆ. ವಾಸ್ತವದಲ್ಲಿ ತಿಳಿಸಲಾಗಿರುವ ಈ ಸಸ್ಯ ಸಲಹೆಗಳನ್ನು ಅನುಸರಿಸಿದರೆ ಬಹಳಷ್ಟು ಪ್ರಯೋಜನವಿದೆ. ಈ ಮರಗಳು ಮತ್ತು ಸಸ್ಯಗಳು ಜೀವನದಲ್ಲಿ ಧನಾತ್ಮಕ, ಸಂಪತ್ತು, ಯಶಸ್ಸು, ಸಂತೋಷ, ಶಾಂತಿ ಎಲ್ಲವನ್ನೂ ನೀಡುತ್ತದೆ.

ಮನಿ ಪ್ಲಾಂಟ್ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಹೆಸರೇ ಸೂಚಿಸುವಂತೆ ಮನಿ ಪ್ಲಾಂಟ್ ಹಣ ನೀಡುವ ಸಸ್ಯವಾಗಿದೆ. ಮನಿ ಪ್ಲಾಂಟ್ ಹಣವನ್ನು ಆಕರ್ಷಿಸುತ್ತದೆ, ಆದ್ದರಿಂದ ಜನರು ಅದನ್ನು ತಮ್ಮ ಮನೆಯಲ್ಲಿ ಇಡುತ್ತಾರೆ. ಆದರೆ ಅನೇಕ ಬಾರಿ ಮನಿ ಪ್ಲಾಂಟ್ ನೆಟ್ಟ ನಂತರವೂ ಜನರು ಬಯಸಿದ ಪ್ರಯೋಜನಗಳನ್ನು ಪಡೆಯುವುದಿಲ್ಲ. ಮನಿ ಪ್ಲಾಂಟ್‌ಗೆ ಸಂಬಂಧಿಸಿದ ತಪ್ಪು ಕಲ್ಪನೆಗಳೇ ಇದರ ಹಿಂದಿನ ಕಾರಣ.

ಇದನ್ನೂ ಓದಿ: ನಿಮ್ಮ ಕೈಯಲ್ಲಿ ಈ ರೀತಿಯ ಗೆರೆಗಳಿದ್ದರೆ ನೀವು ಆಗರ್ಭ ಶ್ರೀಮಂತರಾಗುವುದು ಖಂಡಿತ..!

ಮನಿ ಪ್ಲಾಂಟ್ ಕದಿಯುವುದು ಸರಿಯೋ ತಪ್ಪೋ?

ಕಳ್ಳತನ ಮಾಡಿಯೇ ಮನಿ ಪ್ಲಾಂಟ್‌ ನೆಡಬೇಕು ಎಂಬುದು ಜನರ ನಂಬಿಕೆ. ಆಗ ಮಾತ್ರ ಮನಿ ಪ್ಲಾಂಟ್ ನೆಟ್ಟರೆ ಲಾಭ ಸಿಗುತ್ತದೆ, ಅಂದರೆ ಮನೆಗೆ ಹಣ ಬರುತ್ತದೆ ಅಂದುಕೊಂಡಿರುತ್ತಾರೆ. ಆದರೆ ಕಳ್ಳತನ ಮಾಡುವುದು ಒಳ್ಳೆಯದಲ್ಲ ಮತ್ತು ಹೀಗೆ ಮಾಡುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಅದಕ್ಕಾಗಿಯೇ ಮನಿ ಪ್ಲಾಂಟ್ ಕದಿಯುವ ತಪ್ಪನ್ನು ಎಂದಿಗೂ ಮಾಡಬೇಡಿ. ಇಲ್ಲದಿದ್ದರೆ ಲಾಭದ ಬದಲು ನೀವೇ ಹಾನಿ ಮಾಡಿಕೊಳ್ಳುತ್ತೀರಿ.

ಮನಿ ಪ್ಲಾಂಟ್ ಕೊಡಬೇಕೋ ಬೇಡವೋ?

ಮನಿ ಪ್ಲಾಂಟ್ ಕದಿಯುವುದು ತಪ್ಪು, ಆದರೆ ಯಾರ ಬಳಿಯಾದರೂ ಮನಿ ಪ್ಲಾಂಟ್ ಕೇಳುವುದು ಅಥವಾ ಯಾರಿಗಾದರೂ ಮನಿ ಪ್ಲಾಂಟ್ ದಾನ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮನಿ ಪ್ಲಾಂಟ್ ಅನ್ನು ಯಾರಿಗೂ ದಾನ ಮಾಡಬಾರದು. ಇಲ್ಲದಿದ್ದರೆ ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿ ಇನ್ನೊಬ್ಬರ ಮನೆಗೆ ಹೋಗುತ್ತದೆ. ಅದೇ ರೀತಿ ಮನಿ ಪ್ಲಾಂಟ್ ಕೇಳುವುದು ಕೂಡ ಸರಿಯಲ್ಲ. ಹೀಗೆ ಮಾಡಿದರೂ ಮನಿ ಪ್ಲಾಂಟ್ ನೆಟ್ಟರೆ ಪೂರ್ಣ ಲಾಭ ಸಿಗುವುದಿಲ್ಲ.

ಇದನ್ನೂ ಓದಿ: ಭೃಂಗರಾಜ ಎಣ್ಣೆಯಿಂದಾಗುವ ಪ್ರಯೋಜನಗಳೇನು ಗೊತ್ತಾ?..ದಪ್ಪನೆಯ ಕೂದಲಿಗಾಗಿ ಟ್ರೈ ಮಾಡಿ ನೋಡಿ..!

ಮನಿ ಪ್ಲಾಂಟ್ ಖರೀದಿಸಿ

ಮನಿ ಪ್ಲಾಂಟ್ ನೆಡಲು ಸರಿಯಾದ ಮಾರ್ಗವೆಂದರೆ ನರ್ಸರಿಯಿಂದ ಮನಿ ಪ್ಲಾಂಟ್ ಖರೀದಿಸುವುದು. ಮನಿ ಪ್ಲಾಂಟ್ ಅನ್ನು ಯಾವಾಗಲೂ ನಿಮ್ಮ ಸ್ವಂತ ಹಣದಿಂದ ಖರೀದಿಸಿ ನೆಡಬೇಕು. ಮನೆಯೊಳಗೆ ಮನಿ ಪ್ಲಾಂಟ್ ಕೂಡ ನೆಡಿ. ಇದನ್ನು ಡ್ರಾಯಿಂಗ್ ರೂಮ್, ಪೂಜಾ ಕೊಠಡಿ, ಬಾಲ್ಕನಿ ಅಥವಾ ಲಿವಿಂಗ್ ರೂಮ್‌ನಲ್ಲಿ ಅಳವಡಿಸಬಹುದು. ಆದರೆ ಮನೆಯ ಹೊರಗೆ ಮನಿ ಪ್ಲಾಂಟ್ ನೆಡಬೇಡಿ. ಮನಿ ಪ್ಲಾಂಟ್ ಅನ್ನು ಮಣ್ಣಿನ ಪಾತ್ರೆ ಅಥವಾ ಗಾಜಿನ ಬಾಟಲಿಯಲ್ಲಿ ನೆಡಬೇಕು. ಅದನ್ನು ಎಂದಿಗೂ ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಬೇಡಿ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News