Palmistry: ಅಂಗೈಯಲ್ಲಿ ಈ ರೇಖೆಯಿದ್ದರೆ ಹಣದ ಕೊರತೆ ಎಂದಿಗೂ ಆಗುವುದಿಲ್ಲ.!

Palmistry Money Line: ಜ್ಯೋತಿಷ್ಯದಂತೆ, ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯದ ಜೀವನದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತೆ. ಜ್ಯೋತಿಷ್ಯದಲ್ಲಿ ಜಾತಕವನ್ನು ನೋಡಲಾಗುತ್ತದೆ. ಆದರೆ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈ ರೇಖೆಗಳನ್ನು ನೋಡುತ್ತಾರೆ. 

Written by - Chetana Devarmani | Last Updated : Sep 24, 2022, 02:07 PM IST
  • ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯದ ಜೀವನದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತೆ
  • ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈ ರೇಖೆಗಳನ್ನು ನೋಡುತ್ತಾರೆ
  • ಅಂಗೈಯಲ್ಲಿ ಈ ರೇಖೆಯಿದ್ದರೆ ಹಣದ ಕೊರತೆ ಎಂದಿಗೂ ಆಗುವುದಿಲ್ಲ
Palmistry: ಅಂಗೈಯಲ್ಲಿ ಈ ರೇಖೆಯಿದ್ದರೆ ಹಣದ ಕೊರತೆ ಎಂದಿಗೂ ಆಗುವುದಿಲ್ಲ.! title=
ಹಸ್ತಸಾಮುದ್ರಿಕ ಶಾಸ್ತ್ರ

Money Line on Palm: ಜಾತಕದಂತೆ, ಹಸ್ತದ ರೇಖೆಗಳು ಮತ್ತು ಚಿಹ್ನೆಗಳನ್ನು ನೋಡುವ ಮೂಲಕ ವ್ಯಕ್ತಿಯ ಬಗ್ಗೆ ಬಹಳಷ್ಟು ಊಹಿಸಬಹುದು. ಹಸ್ತದ ರೇಖೆಗಳು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗ್ಗೆ ತಿಳಿಸುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಶ್ರೀಮಂತನಾಗುವ ಬಗ್ಗೆ ಅಥವಾ ಹಣಕಾಸಿನ ಬಗ್ಗೆ ಅಂಗೈ ರೇಖೆಗಳು ಸೂಚನೆ ನೀಡುತ್ತವೆ. 

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಉಂಗುರದ ಬೆರಳಿನ ಕೆಳಗಿನ ನೇರ ಲಂಬ ರೇಖೆಯನ್ನು ಹಣದ ರೇಖೆ ಎಂದು ಕರೆಯಲಾಗುತ್ತದೆ. ತಮ್ಮ ಅಂಗೈಯಲ್ಲಿ ಈ ರೇಖೆಗಳನ್ನು ಹೊಂದಿರುವ ಜನರು, ಅವರ ಜೀವನದಲ್ಲಿ ಬಹಳಷ್ಟು ಹಣಗಳಿಸುತ್ತಾರೆ ಎಂದರ್ಥ. ಅಂದರೆ ಅವರು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಇದನ್ನೂ ಓದಿ : ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ಪ್ರಾಪ್ತಿಯ ರಹಸ್ಯ

ಯಾರ ಅಂಗೈಯಲ್ಲಿ ಈ ರೇಖೆಗಳು ಶುದ್ಧ ಮತ್ತು ನೇರವಾಗಿರುತ್ತವೆ, ಅಂತಹ ಜನರು ಬಹಳಷ್ಟು ಹಣವನ್ನು ಗಳಿಸುತ್ತಾರೆ. ಇದರೊಂದಿಗೆ, ನೀವು ಜೀವನದಲ್ಲಿ ಸಾಕಷ್ಟು ಸಾಧನೆಗ ಮಾಡುತ್ತೀರಿ. ಸಮಾಜದಲ್ಲಿ ಅವರು ಸಾಕಷ್ಟು ಹೆಸರುಗಳಿಸುತ್ತಾರೆ. ಯಾರ ಕೈಯಲ್ಲಿ ಸೂರ್ಯನ ರೇಖೆಯು ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅಂತಹ ಜನರು ಹಣ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ.

ಯಾರ ಅಂಗೈಯಲ್ಲಿ ಒಂದು ರೇಖೆಯು ಸೂರ್ಯನ ರೇಖೆಯಿಂದ ಹೊರಹೊಮ್ಮುತ್ತದೆ ಮತ್ತು ಹಣದ ರೇಖೆಯನ್ನು ದಾಟುತ್ತದೆ, ಅಂತಹ ಜನರು ಜೀವನದಲ್ಲಿ ಬಹಳ ಶ್ರೀಮಂತರಾಗುತ್ತಾರೆ. ಈ ಜನರಿಗೆ, ಇದ್ದಕ್ಕಿದ್ದಂತೆ ಆದಾಯದ ಮೂಲವು ಎಲ್ಲಿಂದಲೋ ತೆರೆಯಲು ಪ್ರಾರಂಭಿಸುತ್ತದೆ ಮತ್ತು ಅವರು ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಪ್ರಾರಂಭಿಸುತ್ತಾರೆ. ಅವರ ಜೀವನದಲ್ಲಿ ಇದ್ದಕ್ಕಿದ್ದಂತೆ ಹಣ ಗಳಿಸುವ ಅವಕಾಶಗಳಿವೆ.

ಇದನ್ನೂ ಓದಿ : Budh Margi 2022 : ಬುಧ ಗ್ರಹದ ಸ್ಥಾನ ಪಲ್ಲಟ, ಎಚ್ಚರದಿಂದರಬೇಕು ಈ ರಾಶಿಯವರು, ಇಲ್ಲಿದೆ ಪರಿಹಾರಗಳು!

ಯಾರ ಅಂಗೈಯಲ್ಲಿ ಮೆದುಳಿನ ರೇಖೆ, ಅದೃಷ್ಟ ರೇಖೆ ಮತ್ತು ಜೀವ ರೇಖೆಯು ಒಟ್ಟಿಗೆ ತ್ರಿಕೋನದ ಆಕಾರವನ್ನು ರೂಪಿಸುತ್ತದೆ, ಅವರು ಜೀವನದಲ್ಲಿ ಸಂಪತ್ತು, ಹಣ ಮತ್ತು ಖ್ಯಾತಿ ಎಲ್ಲವನ್ನೂ ಪಡೆಯುತ್ತಾರೆ. ಅವರಿಗೆ ಸಮಾಜದಲ್ಲಿ ಸಾಕಷ್ಟು ಸ್ಥಾನಮಾನ ದೊರೆಯುತ್ತದೆ. ಸಮಾಜದಲ್ಲಿ ಸಾಕಷ್ಟು ಪ್ರತಿಷ್ಠೆ ಸಿಗುತ್ತದೆ.

(Disclaimer: ಈ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News