ನಕ್ಷತ್ರ ಬದಲಿಸಿದ ಸೂರ್ಯ ಬೆಳಗಲಿದ್ದಾನೆ ಈ ಮೂರು ರಾಶಿಯವರ ಅದೃಷ್ಟ

ಸೂರ್ಯನ ಸಂಕ್ರಮಣದಂತೆ ಸೂರ್ಯನ ನಕ್ಷತ್ರಪುಂಜದ ಬದಲಾವಣೆಯು ಕೂಡಾ ವ್ಯಕ್ತಿಯ ಜೀವನದಲ್ಲಿ ಬಹಳಷ್ಟು ಪರಿಣಾಮವನ್ನು ಬೀರುತ್ತದೆ. ಇದೀಗ ಸೂರ್ಯ ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಸೂರ್ಯನ ಈ ನಕ್ಷತ್ರ ಬದಲಾವಣೆಯು 3 ರಾಶಿಗಳ ಜನರಿಗೆ ಧನ ಲಾಭ ನೀಡಲಿದೆ. 

Written by - Ranjitha R K | Last Updated : Jun 23, 2022, 11:45 AM IST
  • ಸೂರ್ಯನ ನಕ್ಷತ್ರಪುಂಜದ ಬದಲಾವಣೆ
  • ಮೂರು ರಾಶಿಯವರಿಗೆ ಭಾರೀ ಧನಲಾಭ
  • ಕೈಗೂಡುವುದು ಎಲ್ಲಾ ಕೆಲಸ
 ನಕ್ಷತ್ರ ಬದಲಿಸಿದ ಸೂರ್ಯ ಬೆಳಗಲಿದ್ದಾನೆ ಈ ಮೂರು ರಾಶಿಯವರ ಅದೃಷ್ಟ  title=
Surya Nakshatra Parivartan 2022 Effect (file photo)

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಜೂನ್ 22 ರಂದು ಸೂರ್ಯನು ನಕ್ಷತ್ರಪುಂಜವನ್ನು ಬದಲಾಯಿಸಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯಂತೆ ನಕ್ಷತ್ರಪುಂಜದಲ್ಲಿನ ಬದಲಾವಣೆ ಕೂಡಾ ವ್ಯಕ್ತಿಯ ಜಾತಕದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಸೂರ್ಯನು ಆರ್ದ್ರಾ ನಕ್ಷತ್ರದಲ್ಲಿದ್ದಾನೆ. ಜುಲೈ 6 ರವರೆಗೆ ಸೂರ್ಯ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ಈ ಸಮಯದಲ್ಲಿ,  ಮೂರು ರಾಶಿಯವರ ಮೇಲೆ ಸೂರ್ಯ ವಿಶೇಷ ಆಶೀರ್ವಾದ ಬೀರಲಿದ್ದಾನೆ. 

ಸೂರ್ಯನ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರ ಅದೃಷ್ಟ ಬೆಳಗಲಿದೆ :  
ಸೂರ್ಯನು ಆರ್ದ್ರಾ ನಕ್ಷತ್ರದಲ್ಲಿದ್ದಾಗ, ಅದು ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಶಿವ ಮತ್ತು ವಿಷ್ಣುವನ್ನು ಪೂಜಿಸಿ ಬೋಗವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಶುಭ ಫಲಗಳು ಹೆಚ್ಚುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎನ್ನಲಾಗಿದೆ. 

ಇದನ್ನೂ ಓದಿ :  ಹಿಮ್ಮುಖವಾಗಿ ಚಲಿಸಲಿರುವ ಗುರು ಈ ರಾಶಿಯವರಿಗೆ ನೀಡಲಿದ್ದಾನೆ ಧನ ಯೋಗ

ಮಿಥುನ ರಾಶಿ : ಆರ್ದ್ರಾ ನಕ್ಷತ್ರದ ಸೂರ್ಯ ಮಿಥುನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತಾನೆ. ಇದರ ಪರಿಣಾಮವಾಗಿ ಈ ರಾಶಿಯವರ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಬಡ್ತಿ-ವೇತನ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.  ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಅದೃಷ್ಟದ ಸಹಾಯದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. 

ಸಿಂಹ : ಸೂರ್ಯನ ನಕ್ಷತ್ರಪುಂಜದಲ್ಲಿನ ಬದಲಾವಣೆಯು ಸಿಂಹ ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿ ಸಾಬೀತಾಗಲಿದೆ. ಅರ್ಧಕ್ಕೆ ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವೇತನ ಹೆಚ್ಚಳವಾಗುವ ಎಲ್ಲಾ ಅವಕಾಶಗಳಿವೆ. ಹೊಸ ಮನೆ ಅಥವಾ ಕಾರು ಖರೀದಿಸಲು ಬಯಸುವವರಿಗೆ ಇದು ಒಳ್ಳೆಯ ಸಮಯ.

ಇದನ್ನೂ ಓದಿ : Most Powerful Zodiac Sign:ದ್ವಾದಶ ರಾಶಿಗಳಲ್ಲಿ ಈ ಎರಡು ರಾಶಿಯವರು ಬಹಳ ಶಕ್ತಿಶಾಲಿಗಳಂತೆ ..!

ಕನ್ಯಾರಾಶಿ : ಸೂರ್ಯನ  ನಕ್ಷತ್ರ ಬದಲಾವಣೆಯು ಕನ್ಯಾರಾಶಿಯ ಜನರಿಗೆ ಪ್ರಯೋಜನಕಾರಿಯಾಗಿರಲಿದೆ. ಜುಲೈ 6 ರ ಮೊದಲು ಅವರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಲಾಭ ಹೆಚ್ಚಾಗಲಿದೆ. ಸರ್ಕಾರಿ ನೌಕರಿ ಪಡೆಯುವ ಕನಸು ನನಸಾಗಲಿದೆ. 

 

 
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆ ಮತ್ತು  ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News