Kalap Village: ಪಾಂಡವ, ಕೌರವರ ವಂಶಸ್ಥರು ಭಾರತದ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರಂತೆ!

ಉತ್ತರಾಖಂಡದ ಮೇಲಿನ ಗರ್ವಾಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಕಲಾಪ್ ಗ್ರಾಮ (Kalap) ದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೆಚ್ಚು ಜನಪ್ರಿಯವಾಗದಿದ್ದರೂ ಮತ್ತು ಜನಸಂಖ್ಯೆ ಬಹಳ ಕಡಿಮೆ ಇದ್ದರೂ ಕಲಾಪ್ ಗ್ರಾಮವು ಬಹಳ ವಿಶೇಷವಾಗಿದೆ ಮತ್ತು ಇದು ಪೌರಾಣಿಕ ಯುಗದ ಆಳವಾದ ರಹಸ್ಯವನ್ನೂ ಸಹ ಒಳಗೊಂಡಿದೆ. ಕಲಾಪ್ ಗ್ರಾಮವು ಉತ್ತರಾಖಂಡದ ಟನ್ಸ್ ಕಣಿವೆಯಲ್ಲಿದೆ ಮತ್ತು ಈ ಸಂಪೂರ್ಣ ಕಣಿವೆಯನ್ನು ಮಹಾಭಾರತದ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ.

Written by - Yashaswini V | Last Updated : Mar 6, 2021, 07:25 PM IST
  • ಉತ್ತರಾಖಂಡ್ (Uttarakhand) ಅನ್ನು 'ದೇವಭೂಮಿ' ಎಂದೂ ಕರೆಯುತ್ತಾರೆ
  • ರಾಮಾಯಣ ಮತ್ತು ಮಹಾಭಾರತದ ಇತಿಹಾಸವು ಕಲಾಪ್ ಗ್ರಾಮದೊಂದಿಗೆ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ
  • ಇಲ್ಲಿ ಗಸಗಸೆ, ಬೆಲ್ಲ ಮತ್ತು ಗೋಧಿ ಹಿಟ್ಟನ್ನು ಬೆರೆಸಿ ವಿಶೇಷ ಖಾದ್ಯವನ್ನು ತಯಾರಿಸಲಾಗುತ್ತದೆ
Kalap Village: ಪಾಂಡವ, ಕೌರವರ ವಂಶಸ್ಥರು ಭಾರತದ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರಂತೆ! title=
Kalap Village

ನವದೆಹಲಿ: ಪರ್ವತಗಳಿಂದ ಆವೃತವಾದ ರಾಜ್ಯ, ಉತ್ತರಾಖಂಡ್ (Uttarakhand) ಅನ್ನು 'ದೇವಭೂಮಿ' ಎಂದೂ ಕರೆಯುತ್ತಾರೆ. ಪ್ರತಿ ಋತುವಿನಲ್ಲಿ ಪ್ರವಾಸಿಗರ ಗುಂಪು ಇರುತ್ತದೆ. ಹವಾಮಾನ ಏನೇ ಇರಲಿ, ಉತ್ತರಾಖಂಡದ ಸೌಂದರ್ಯ ವಿಭಿನ್ನವಾಗಿದೆ. ಹೇಗಾದರೂ, ಪ್ರತಿ ದೇಶ, ರಾಜ್ಯ ಮತ್ತು ನಗರದಂತೆ, ಇಲ್ಲಿ ಕೆಲವು ಸ್ಥಳಗಳಿವೆ, ಅದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಉತ್ತರಾಖಂಡದಲ್ಲಿ ಅಂತಹ ಒಂದು ವಿಶೇಷ ಹಳ್ಳಿಯ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ನೀವು ಸಾಧ್ಯವಾದರೆ ಒಮ್ಮೆಯಾದರೂ ಈ ಸ್ಥಳಕ್ಕೆ ಭೇಟಿ ನೀಡಿ.

ಕೌರವ-ಪಾಂಡವ ವಂಶಸ್ಥರ ಗ್ರಾಮ :
ಉತ್ತರಾಖಂಡದ ಮೇಲಿನ ಗರ್ವಾಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಕಲಾಪ್ ಗ್ರಾಮ (Kalap) ದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೆಚ್ಚು ಜನಪ್ರಿಯವಾಗದಿದ್ದರೂ ಮತ್ತು ಜನಸಂಖ್ಯೆ ಬಹಳ ಕಡಿಮೆ ಇದ್ದರೂ ಕಲಾಪ್ ಗ್ರಾಮವು ಬಹಳ ವಿಶೇಷವಾಗಿದೆ ಮತ್ತು ಇದು ಪೌರಾಣಿಕ ಯುಗದ ಆಳವಾದ ರಹಸ್ಯವನ್ನೂ ಸಹ ಒಳಗೊಂಡಿದೆ. ಕಲಾಪ್ ಗ್ರಾಮವು ಉತ್ತರಾಖಂಡದ (Uttarakhand) ಟನ್ಸ್ ಕಣಿವೆಯಲ್ಲಿದೆ ಮತ್ತು ಈ ಸಂಪೂರ್ಣ ಕಣಿವೆಯನ್ನು ಮಹಾಭಾರತದ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ರಾಮಾಯಣ ಮತ್ತು ಮಹಾಭಾರತದ ಇತಿಹಾಸವು ಈ ಹಳ್ಳಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಇಲ್ಲಿನ ಜನರು ತಮ್ಮನ್ನು ಕೌರವರು ಮತ್ತು ಪಾಂಡವರ ವಂಶಸ್ಥರು ಎಂದು ಕರೆಯುತ್ತಾರೆ.

ಕಲಾಪ್ ಗ್ರಾಮವು ಸೌಂದರ್ಯದ ಪರಾಕಾಷ್ಠೆಯಾಗಿದೆ :
ಈ ಗ್ರಾಮದ ಜನರ ಜೀವನವೂ ತುಂಬಾ ಕಷ್ಟಕರವಾಗಿದೆ. ಜನಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಮತ್ತು ಇತರ ಪ್ರದೇಶಗಳಿಂದ ದೂರವಿರುವುದರಿಂದ, ಇಲ್ಲಿ ವಾಸಿಸುವವರ ಆದಾಯಕ್ಕೆ ಮುಖ್ಯ ಬೆಂಬಲ ಕೃಷಿ. ಇದಲ್ಲದೆ ಅವರು ಕುರಿ ಮತ್ತು ಮೇಕೆಗಳನ್ನೂ ಸಾಕುತ್ತಾರೆ. ಈ ಹಳ್ಳಿಯ ಅದ್ಭುತ ಸೌಂದರ್ಯ ಮತ್ತು ರಾಮಾಯಣ (Ramayana) ಮತ್ತು ಮಹಾಭಾರತದ ವಿಶೇಷ ಸಂಪರ್ಕದಿಂದಾಗಿ ಇದನ್ನು ಪ್ರಯಾಣ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇದನ್ನೂ ಓದಿ - Mahashivaratri 2021- ನಿಮ್ಮ ರಾಶಿಗೆ ಅನುಗುಣವಾಗಿ ಶಿವನನ್ನು ಆರಾಧಿಸಿ, ಅಪೇಕ್ಷಿತ ಫಲ ಪಡೆಯಿರಿ

ಹಬ್ಬಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳು :
ಕಲಾಪ್ ಗ್ರಾಮದಲ್ಲಿ ಕರ್ಣ ದೇವಾಲಯವಿದೆ ಮತ್ತು ಆದ್ದರಿಂದ ಕರ್ಣ ಮಹಾರಾಜ್ ಉತ್ಸವವನ್ನೂ ಇಲ್ಲಿ ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬವನ್ನು 10 ವರ್ಷಗಳ ಮಧ್ಯಂತರದಲ್ಲಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಜನವರಿಯಲ್ಲಿ ಪಾಂಡವ ನೃತ್ಯವನ್ನು ಇಲ್ಲಿ ನಡೆಸಲಾಗುತ್ತದೆ, ಇದರಲ್ಲಿ ಮಹಾಭಾರತದ ವಿವಿಧ ಕಥೆಗಳನ್ನು ಪ್ರದರ್ಶಿಸಲಾಗುತ್ತದೆ. ಇದೊಂದು ಕುಗ್ರಾಮವಾಗಿದೆ. ಇಲ್ಲಿನ ಉಡುಗೆ, ತೊಡುಗೆ, ಆಹಾರ ಎಲ್ಲವೂ ಕೊಂಚ ವಿಭಿನ್ನವಾಗಿದೆ. ಕಲಾಪ್ ಗ್ರಾಮದಲ್ಲಿ ಗಸಗಸೆ, ಬೆಲ್ಲ ಮತ್ತು ಗೋಧಿ ಹಿಟ್ಟನ್ನು ಬೆರೆಸಿ ವಿಶೇಷ ಖಾದ್ಯ ತಯಾರಿಸಲಾಗುತ್ತದೆ. ಅದನ್ನೂ ಕೂಡ ಹಬ್ಬಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ.

ಇದನ್ನೂ ಓದಿ - Mahashivratri 2021 : ಮಹಾ ಶಿವರಾತ್ರಿ ಉಪವಾಸದ ಮಹತ್ವ ಏನು

ಕಲಾಪ್ ದೆಹಲಿಯಿಂದ 540 ಕಿ.ಮೀ ದೂರದಲ್ಲಿದ್ದರೆ, ಡೆಹ್ರಾಡೂನ್‌ನಿಂದ ಕೇವಲ 210 ಕಿ.ಮೀ. ಇದನ್ನು ವರ್ಷದ ಯಾವುದೇ ಸಮಯದಲ್ಲಿ ಭೇಟಿ ಮಾಡಬಹುದು. ಇಲ್ಲಿಂದ ಹಿಮಪಾತದ ಉತ್ತಮ ನೋಟವೂ ನಿಮಗೆ ಕಂಡು ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News