ಈ ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಧನ ಹಾನಿಯ ಸಂಕೇತ

ಆಕಸ್ಮಿಕವಾಗಿ ಕೈಯಿಂದ ಏನಾದರೂ ಬೀಳುವುದು ಸಹಜವೇ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ವಸ್ತುಗಳು ಕೈಯಿಂದ ಕೆಳಗೆ ಬೀಳುವುದನ್ನು ಶುಭ ಶಕುನ ಎಂದು ಹೇಳಲಾಗುವುದಿಲ್ಲ. ನಿಮ್ಮ ಕೈಯಿಂದಲೂ ಈ ವಸ್ತುಗಳು ಕೆಳಗೆ ಬಿದ್ದಿದ್ದರೆ ಇದರ ಪರಿಣಾಮ ಏನು ಎಂದು ತಿಳಿಯಿರಿ.

Written by - Yashaswini V | Last Updated : Mar 16, 2023, 01:55 PM IST
  • ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಮುಂದಾಗಬಹುದಾದ ಶುಭ-ಅಶುಭ ಪರಿಣಾಮಗಳ ಬಗ್ಗೆ ಸೂಚಿಸುತ್ತವೆ
  • ಈ ವಸ್ತುಗಳು ಎಂದಾದರೂ ನಿಮ್ಮ ಕೈಯಿಂದ ಕೆಳಗೆ ಬಿದ್ದಿದೆಯೇ?
  • ಒಂದೊಮ್ಮೆ ಹೌದು, ಎಂದಾದರೆ, ಯಾವ ವಸ್ತುಗಳು ಕೆಳಗೆ ಬೀಳುವುದನ್ನು ಅಶುಭ ಎಂದು ಹೇಳಲಾಗುತ್ತದೆ.
ಈ ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಧನ ಹಾನಿಯ ಸಂಕೇತ  title=
Inauspicious Signs

ಬೆಂಗಳೂರು: ಹಿಂದೂ ಧರ್ಮದಲ್ಲಿ ಶಕುನ-ಅಪಶಕುನಗಳ ಬಗ್ಗೆಯೂ ಹಲವರು ನಂಬುತ್ತಾರೆ. ಆಕಸ್ಮಿಕವಾಗಿ ಕೆಲವು ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಸಹಜವೇ ಆದರೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಇವು ಮುಂದಾಗಬಹುದಾದ ಶುಭ-ಅಶುಭ ಫಲಗಳ ಬಗ್ಗೆ ಸೂಚಿಸುವ ಸಂಕೇತ ಎಂದು ಹೇಳಲಾಗುತ್ತದೆ.  ಈ ವಸ್ತುಗಳು ಎಂದಾದರೂ ನಿಮ್ಮ ಕೈಯಿಂದ ಕೆಳಗೆ ಬಿದ್ದಿದೆಯೇ? ಒಂದೊಮ್ಮೆ ಹೌದು, ಎಂದಾದರೆ, ಯಾವ ವಸ್ತುಗಳು ಕೆಳಗೆ ಬೀಳುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಅದರ ಪರಿಣಾಮಗಳೇನು ಎಂದು ತಿಳಿಯೋಣ...

ಈ ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಅಮಂಗಳಕರ:
* ಅಕ್ಕಿ:

ಮಾತೆ ಅನ್ನಪೂರ್ಣೆಯ ಸಂಕೇತವಾಗಿರುವ ಅಕ್ಕಿಯನ್ನು ಲಕ್ಷ್ಮಿ ಸ್ವರೂಪಿಣಿ ಎಂತಲೂ ಕರೆಯಲಾಗುತ್ತದೆ. ಅಕ್ಕಿ ನಿಮ್ಮ ಕೈಯಿಂದ ಕೆಳಗೆ ಬೀಳುವುದನ್ನು ಧನ ಹಾನಿಯ ಸಂಕೇತ ಎಂದು ಹೇಳಲಾಗುತ್ತದೆ.

* ತುಪ್ಪದ ದೀಪ:
ಸಾಮಾನ್ಯವಾಗಿ ಶುಭ ಸಂದರ್ಭಗಳಲ್ಲಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ಇಂತಹ ತುಪ್ಪದ ದೀಪ ಕೆಳಗೆ ಬಿದ್ದರೆ ಅದು ಮುಂದಾಗಬಹುದಾದ ಅಹಿತಕರ ಘಟನೆಯ ಬಗ್ಗೆ ನಿಮಗೆ ಸೂಚಿಸುತ್ತಿದೆ ಎಂದರ್ಥ. 

ಇದನ್ನೂ ಓದಿ- Chanakya Niti : ಈ 5 ವಿಷಯಗಳನ್ನು ಯಾವಾಗಲು ನೆನಪಿನಲ್ಲಿಡಿ, ಯಶಸ್ಸು - ಪ್ರಗತಿ ನಿಮ್ಮದಾಗಿರುತ್ತೆ!

* ಎಣ್ಣೆ ಪಾತ್ರೆ:
ಎಣ್ಣೆ ಪಾತ್ರೆ ಕೈಯಿಂದ ಜಾರಿ ಬಿದ್ದರೆ ಅದು ನಿಮ್ಮ ಆತ್ಮೀಯರು ಕಷ್ಟದಲ್ಲಿದ್ದಾರೆ ಅಥವಾ ನಿಮ್ಮ ಆತ್ಮೀಯರಿಗೆ ಏನಾದರೂ ಕೆಡುಕಾಗಬಹುದು ಎಂಬುದರ ಸಂಕೇತ ಎನ್ನಲಾಗುವುದು.

* ಉಪ್ಪು:
ಊಟದ ರುಚಿಯನ್ನು ಹೆಚ್ಚಿಸಬಲ್ಲ ಉಪ್ಪಿಗೂ ಸಹ ಶಾಸ್ತ್ರಗಳಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪ್ಪು ಕೈತಪ್ಪಿ ಕೆಳಗೆ ಚೆಲ್ಲುವುದು ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂಬುದರ ಸಂಕೇತ ಎಂದು ಬಣ್ಣಿಸಲಾಗುತ್ತದೆ. 

ಇದನ್ನೂ ಓದಿ- Tulsi Niyam: ಮನೆಯಲ್ಲಿ ತುಳಸಿ ನೆಡುವಾಗ ಈ ತಪ್ಪನ್ನು ಮಾಡಬೇಡಿ, ಬಡವರಾಗುತ್ತಾರೆ!

* ಅರಿಶಿನ- ಕುಂಕುಮ:
ಹಿಂದೂ ಧರ್ಮದಲ್ಲಿ ಅರಿಶಿನ-ಕುಂಕುಮವನ್ನು ಮಂಗಳಕರ, ಹೆಣ್ಣು ಮಕ್ಕಳಿಗೆ ಅದು ಸೌಭಾಗ್ಯದ ಸಂಕೇತ ಎಂಬ ನಂಬಿಕೆ ಇದೆ. ಅಂತಹ ಮಂಗಳಕರ ಅರಿಶಿನ-ಕುಂಕುಮವು ಕೆಳಗೆ ಬೀಳುವುದು ಶೀಘ್ರದಲ್ಲೇ ನಿಮ್ಮ ಕುಟುಂಬದಲ್ಲಿ ಏನಾದರೂ ಅನಾಹುತವಾಗಲಿದೆ, ಅಶುಭ ಸುದ್ದಿ ಕೇಳುವ ಸಂಭವವಿದೆ ಎಂಬುದನ್ನು ಇದು ಸೂಚಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News