ಈ ರಾಶಿಯವರು ಸದಾ ಶ್ರೀಮಂತರಾಗಿಯೇ ಇರುತ್ತಾರೆ, ಮಹಾಲಕ್ಷ್ಮೀ ಯ ವಿಶೇಷ ಅನುಗ್ರಹ ಇವರ ಮೇಲಿರುತ್ತದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಸಂಪತ್ತಿನ ವಿಷಯದಲ್ಲಿ ತುಂಬಾ ಅದೃಷ್ಟವಂತರು.  ತಾಯಿ ಲಕ್ಷ್ಮೀಯ ವಿಶೇಷ ಕೃಪೆಯಿಂದಾಗಿ ಅವರು ಶ್ರೀಮಂತರಾಗುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. 

Written by - Zee Kannada News Desk | Last Updated : Mar 11, 2022, 01:54 PM IST
  • ಈ ಜನರ ಮೇಲೆ ಲಕ್ಷ್ಮೀಯ ವಿಶೇಷ ಅನುಗ್ರಹ ಇರುತ್ತದೆ.
  • ಈ ರಾಶಿಯವರು ಸಿರಿವಂತಿಕೆಯ ಜೀವನ ನಡೆಸುತ್ತಾರೆ
  • ಯಾವಾಗಲೂ ಐಷಾರಾಮಿ ಜೀವನ ನಡೆಸುತ್ತಾರೆ
 ಈ ರಾಶಿಯವರು ಸದಾ ಶ್ರೀಮಂತರಾಗಿಯೇ ಇರುತ್ತಾರೆ,  ಮಹಾಲಕ್ಷ್ಮೀ ಯ ವಿಶೇಷ ಅನುಗ್ರಹ ಇವರ ಮೇಲಿರುತ್ತದೆ title=
ಈ ಜನರ ಮೇಲೆ ಲಕ್ಷ್ಮೀಯ ವಿಶೇಷ ಅನುಗ್ರಹ ಇರುತ್ತದೆ. (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ ಕೆಲವರು ಹುಟ್ಟುತ್ತಲೇ ಅದೃಷ್ಟವಂತರು. ಅವರ ಮೇಲೆ ದೇವರ ವಿಶೇಷ ಅನುಗ್ರಹವಿರುತ್ತದೆ. ಅವರು ತಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸುತ್ತಾರೆ. ಸಾಕಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ.  ಐಷಾರಾಮಿ ಜೀವನ ನಡೆಸುತ್ತಾರೆ. ಅವರ ಜೀವನದಲ್ಲಿ ಯಾವುದೇ ಅನುಕೂಲಗಳಿಗೂ ಕೊರತೆಯಿರುವುದಿಲ್ಲ. ಜ್ಯೋತಿಷ್ಯದಲ್ಲಿ, ಸಂಪತ್ತಿನ ದೇವತೆಯಾದ  ಲಕ್ಷ್ಮೀ ದೇವಿಯ (Godess Lakshmi) ವಿಶೇಷ ಅನುಗ್ರಹವನ್ನು ಹೊಂದಿರುವ  ಮೂರು ರಾಶಿಚಕ್ರ ಚಿಹ್ನೆಗಳ (Zodiac sign)ಬಗ್ಗೆ ಹೇಳಲಾಗಿದೆ. ಈ ಕಾರಣದಿಂದಾಗಿ, ಅವರು ತಮ್ಮ ಜೀವನದುದ್ದಕ್ಕೂ ಹಣ ಮತ್ತು ಸಂಪತ್ತಿನ ಕೊರತೆಯನ್ನು ಎದುರಿಸುವುದೇ ಇಲ್ಲ. 

ಈ 3 ರಾಶಿಯವರ ಬಾಲಿ ಸದಾ ಐಶ್ವರ್ಯ ನೆಲೆಸಿರುತ್ತದೆ : 
ಮೇಷ ರಾಶಿ  :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯು (Godess Lakshmi)ಮೇಷ ರಾಶಿಯವರ (Aries)ಮೇಲೆ ವಿಶೇಷ ಅನುಗ್ರಹ ಹರಿಸುತ್ತಾಳೆ. ಇದರಿಂದಾಗಿ ಅವರಿಗೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ಇವರು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಈ ರಾಶಿಯವರು ಹಿಡಿದ ಕೆಲಸವನ್ನು ಸಾಧಿಸದೇ ಬಿಡುವುದಿಲ್ಲ. ಪ್ರತಿ ಅಡೆತಡೆಗಳನ್ನು ನಿವಾರಿಸಿ ಮುನ್ನಡೆಯುತ್ತಾರೆ.  ಈ ರಾಶಿಯಾರು ತಮ್ಮ ಗುಣದಿಂದ ಅತ್ಯಂತ ಯಶಸ್ವಿ ಮತ್ತು ಶ್ರೀಮಂತರಾಗುತ್ತಾರೆ. 

ಇದನ್ನೂ ಓದಿ : Guru Uday: ಗುರುವಿನ ಉದಯದಿಂದ ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ವೃಷಭ ರಾಶಿ  :
ವೃಷಭ ರಾಶಿಯ (Taurus)ಜನರು ತುಂಬಾ ಶ್ರಮಪಡುತ್ತಾರೆ.  ಇವರು ಯಾವುದೇ ಕೆಲಸದ ಬಗ್ಗೆ  ಪ್ರಾಮಾಣಿಕತೆ ಮತ್ತು ಬದ್ಧತೆ ಹೊಂದಿರುತ್ತಾರೆ. ಅವರ ವಾಕ್ಚಾತುರ್ಯ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರನ್ನೂ ಸುಲಭವಾಗಿ ಆಕರ್ಷಿಸುತ್ತದೆ (Nature by zodiac). ಅವರ ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ಅವರನ್ನು ಬೆಂಬಲಿಸುತ್ತದೆ. ಇದರಿಂದಾಗಿ ಅವರು ಬಹಳ ಯಶಸ್ವಿಯಾಗುತಾರೆ. ಕೆಲವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಾರೆ. ಈ ರಾಶಿಯ ಜನರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. 

ಕರ್ಕಾಟಕ :
ಕರ್ಕಾಟಕ  ರಾಶಿಯವರ (Cancer) ಮೇಲೆ ಮಹಾಲಕ್ಷ್ಮೀ ವಿಶೇಷ ಕರುಣೆ ತೋರುತ್ತಾಳೆ (Blessings of godess Lakshmi).  ಈ  ಅವರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅತೀ ಬುದ್ಧಿವಂತರಾಗಿರುತ್ತಾರೆ. ಇದರೊಂದಿಗೆ ಕರ್ಕಾಟಕ ರಾಶಿಯವರೂ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಅವರ  ಬೆನ್ನ ಹಿಂದೆಯೇ ಇರುತ್ತದೆ. ಈ ಕಾರಣಗಳಿಂದ ಅವರು ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ ಮತ್ತು ಸಿರಿವಂತಿಕೆಯ ಜೀವನವನ್ನು ನಡೆಸುತ್ತಾರೆ. 

ಇದನ್ನೂ ಓದಿ: ರಾಕ್ಷಸ ಗಣದವರಲ್ಲಿರುತ್ತದೆ ಈ ವಿಶೇಷ ಗುಣ, ಮದುವೆ ವೇಳೆ ಈ ವಿಚಾರದ ಬಗ್ಗೆ ಇರಲಿ ಎಚ್ಚರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News