Gemstone: ಈ ರತ್ನದ ಪವಾಡದಿಂದ ನಿಮ್ಮ ಜೀವನವೇ ಬದಲಾಗುತ್ತದೆ

ಯಾವುದೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಗ್ರಹವು ದುರ್ಬಲವಾಗಿದ್ದರೆ, ಅದಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಆದರೆ ತಜ್ಞರ ಸಲಹೆಯ ಮೇರೆಗೆ ರತ್ನವನ್ನು ಧರಿಸಬೇಕು, ಇಲ್ಲದಿದ್ದರೆ ನಕಾರಾತ್ಮಕ ಫಲಿತಾಂಶಗಳ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.  

Written by - Puttaraj K Alur | Last Updated : Dec 4, 2022, 12:19 PM IST
  • ಯಾರ ಜಾತಕದಲ್ಲಿ ಮಾಂಗಲಿಕ ದೋಷವಿರುತ್ತದೋ ಅವರು ಹವಳದ ರತ್ನ ಧರಿಸಬೇಕು
  • ವ್ಯಕ್ತಿಯ ಜಾತಕದಲ್ಲಿ ಮಂಗಳವು ದುರ್ಬಲ ಸ್ಥಾನದಲ್ಲಿದ್ದರೆ ಹವಳದ ರತ್ನ ಧರಿಸಬೇಕು
  • ಅದ್ಭುತ ಹವಳ ರತ್ನವನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾಗಲಿದೆ
Gemstone: ಈ ರತ್ನದ ಪವಾಡದಿಂದ ನಿಮ್ಮ ಜೀವನವೇ ಬದಲಾಗುತ್ತದೆ  title=
ಹವಳದ ರತ್ನದ ಪ್ರಯೋಜನಗಳು

ನವದೆಹಲಿ: ರತ್ನ ಶಾಸ್ತ್ರದಲ್ಲಿ 12 ರತ್ನಗಳು ಮತ್ತು ಅವುಗಳ ಉಪರತ್ನಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಪ್ರತಿಯೊಂದು ರತ್ನವು ಗ್ರಹಗಳಿಗೆ ಸಂಬಂಧಿಸಿರುತ್ತವೆ. ಯಾವುದೇ ಒಬ್ಬ ವ್ಯಕ್ತಿಯ ಜಾತಕದಲ್ಲಿ ಗ್ರಹವು ದುರ್ಬಲ ಸ್ಥಿತಿಯಲ್ಲಿದ್ದಾಗ, ಆ ವ್ಯಕ್ತಿಗೆ ಸಂಬಂಧಿಸಿದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಇಂದಿನ ಲೇಖನದಲ್ಲಿ ನಾವು ಹವಳದ ರತ್ನದ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಮಂಗಳ ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಯಾವುದೇ ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಂಗಳವು ಅಶುಭ ಅಥವಾ ದುರ್ಬಲವಾಗಿದ್ದರೆ ಹವಳದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ.

ಮಾಂಗಲಿಕ ದೋಷ

ಜ್ಯೋತಿಷ್ಯ ಮತ್ತು ವಾಸ್ತುವಿನಂತೆಯೇ ರತ್ನ ಶಾಸ್ತ್ರವೂ ಬಹಳ ಮುಖ್ಯ. ಇದರಲ್ಲಿ ಪ್ರತಿಯೊಂದು ರತ್ನದ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಹವಳದ ಬಗ್ಗೆ ಹೇಳುವುದಾದರೆ, ಇದು ಕೆಂಪು, ಸಿಂಧೂರ, ಅರಿಶಿನ, ಕಪ್ಪು ಮತ್ತು ಬಿಳಿ ಬಣ್ಣವನ್ನು ಹೊಂದಿದೆ. ಯಾರೊಬ್ಬರ ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ ಅವರು ಹವಳದ ರತ್ನವನ್ನು ಧರಿಸಬೇಕು.

ಇದನ್ನೂ ಓದಿ: Astro Tips: ಭಾನುವಾರ ರಾತ್ರಿ ಈ ಒಂದು ಕೆಲಸ ಮಾಡಿದ್ರೆ ಸಾಕು ಜೀವನವಿಡೀ ಹಣದ ಮಳೆಯಾಗಲಿದೆ!

ಮಂಗಳ ದುರ್ಬಲ ಸ್ಥಾನದಲ್ಲಿದ್ದರೆ

ಮತ್ತೊಂದೆಡೆ ವ್ಯಕ್ತಿಯ ಜಾತಕದಲ್ಲಿ ಮಂಗಳವು ದುರ್ಬಲ ಸ್ಥಾನದಲ್ಲಿದ್ದರೆ, ಅವರು ಹವಳದ ರತ್ನವನ್ನು ಧರಿಸಬೇಕು. ಇದನ್ನು ಧರಿಸುವುದರಿಂದ ಮಂಗಳಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅದೇ ರೀತಿ ಜ್ಯೋತಿಷ್ಯದ ಸಲಹೆಯಿಂದ ಅನೇಕ ರೀತಿಯ ಸಮಸ್ಯೆಗಳನ್ನು ಸಹ ನಿವಾರಿಸಬಹುದು.

ಅದೃಷ್ಟವನ್ನು ತರುತ್ತದೆ

ಹವಳವನ್ನು ಅದ್ಭುತ ರತ್ನವೆಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ವ್ಯಕ್ತಿಗೆ ಅದೃಷ್ಟ ದೊರೆಯುತ್ತದೆ. ಅಲ್ಲದೇ ಅನೇಕ ಶುಭ ಫಲಿತಾಂಶಗಳು ಸಹ ದೊರೆಯುತ್ತವೆ. ಇದನ್ನು ಧರಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Mangal Margi 2023: ವೃಷಭ ರಾಶಿಯೆಡೆಗೆ ಮಂಗಳ ಮಾರ್ಗಿ, ಈ ರಾಶಿಗಳಿಗೆ ಸುಖ-ಸಂಪತ್ತು ಸಿಗಲಿದೆ!

ಬಲಗೈ ಉಂಗುರದ ಬೆರಳಿಗೆ ಧರಿಸಬೇಕು

ಮಂಗಳವನ್ನು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಹವಳದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಬಲಗೈಯ ಉಂಗುರದ ಬೆರಳಿಗೆ ಚಿನ್ನ, ಬೆಳ್ಳಿ ಅಥವಾ ತಾಮ್ರ ಲೋಹದಿಂದ ಮಾಡಿದ ಉಂಗುರದಲ್ಲಿ ಹವಳವನ್ನು ಧರಿಸುವುದು ಉತ್ತಮವೆಂದು ಹೇಳಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News