Vastu Tips: ಸಾಯಂಕಾಲ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ!

ವಾಸ್ತು ಶಾಸ್ತ್ರ, ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸಂಜೆ ವೇಳೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎನ್ನುವುದರ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸದಿದ್ದರೆ ಜೀವನವು ಕಷ್ಟಗಳಿಂದ ಸುತ್ತುವರಿಯಲಿದೆ.  

Written by - Puttaraj K Alur | Last Updated : May 9, 2022, 11:37 PM IST
  • ಸೂರ್ಯಾಸ್ತದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಲಗಬಾರದು
  • ಸೂರ್ಯಾಸ್ತದ ಸಂದರ್ಭದಲ್ಲಿ ಯಾರೂ ಕೂಡ ಆಹಾರ ಸೇವಿಸಬಾರದು
  • ಸಂಜೆ ಯಾರಿಗೂ ಸಾಲ ನೀಡಬಾರದು, ನೀಡಿದರೆ ಲಕ್ಷ್ಮಿದೇವಿ ಕೋಪಿಸಿಕೊಳ್ಳುತ್ತಾಳೆ
Vastu Tips: ಸಾಯಂಕಾಲ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ! title=
ಯಾವುದೇ ಕಾರಣಕ್ಕೂ ಸಂಜೆ ಈ ಕೆಲಸ ಮಾಡಬೇಡಿ

ನವದೆಹಲಿ: ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ತುಂಬಾ ವಿಶೇಷವಾಗಿದೆ. ಆದ್ದರಿಂದ ಈ ವೇಳೆ ಕೆಲವು ಪ್ರಮುಖ ಕೆಲಸ ಮಾಡದಂತೆ ಸಲಹೆ ನೀಡಲಾಗಿದೆ. ಹಿಂದೂ ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದ ಬಗ್ಗೆ ಕೆಲ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ನಿಯಮಗಳು ಬೆಳಗ್ಗೆ ಮತ್ತು ಸಂಜೆ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತಾಗಿವೆ.

ಸಾಯಂಕಾಲದಲ್ಲಿ ಮಾಡಲು ನಿಷಿದ್ಧವೆಂದು ಹೇಳಲಾಗುವ ಇಂತಹ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಈ ಕೆಲಸಗಳನ್ನು ಸಂಜೆ ವೇಳೆ ಮಾಡಿದರೆ ಅನೇಕ ತೊಂದರೆಗಳು ಎದುರಾಗುತ್ತವೆ. ಇದನ್ನು ಪಾಲಿಸದ ಯಾವುದೇ ವ್ಯಕ್ತಿ ದರಿದ್ರನಾಗುತ್ತಾನೆ. ಅಲ್ಲದೆ ಪಾಪದಲ್ಲಿ ಪಾಲುಗಾರನಾಗಿ ಗೌರವ ಕಳೆದುಕೊಳ್ಳುತ್ತಾನೆಂದು ಹೇಳಲಾಗಿದೆ.

ಇದನ್ನೂ ಓದಿ: Zodiac Matches: ಈ ರಾಶಿಯ ಜನರು ಲೈಫ್‌ ಲಾಂಗ್‌ ಬೆಸ್ಟ್‌ ಫ್ರೆಂಡ್ಸ್‌ ಆಗಿರುತ್ತಾರೆ

ಯಾವುದೇ ಕಾರಣಕ್ಕೂ ಸಂಜೆ ಈ ಕೆಲಸ ಮಾಡಬೇಡಿ

  • ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಲು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದ್ದರಿಂದ ಈ ಕೆಲಸಗಳನ್ನು ಆದಷ್ಟು ತಪ್ಪಿಸಬೇಕು.
  • ಸೂರ್ಯಾಸ್ತದ ಸಮಯದಲ್ಲಿ ಯಾರೂ ಮಲಗಬಾರದು. ನೀವು ಅನಾರೋಗ್ಯ ಅಥವಾ ವಯಸ್ಸಾದವರಾಗಿದ್ದರೆ ಇದರಿಂದ ವಿನಾಯಿತಿ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಆರೋಗ್ಯವಂತ ಜನರು ಸಂಜೆ ಮಲಗಬಾರದು. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
  • ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸಬಾರದು. ಹೀಗೆ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾರಂತೆ.
  • ಸಂಜೆ ಯಾರಿಗೂ ಹಾಲು, ಮೊಸರು, ಉಪ್ಪನ್ನು ದಾನ ಮಾಡಬಾರದಂತೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ದೂರವಾಗುತ್ತಾಳಂತೆ.
  • ಸಂಜೆ ವೇಳೆ ಯಾರಿಗೂ ಸಾಲ ನೀಡಬಾರದಂತೆ. ಒಂದು ವೇಳೆ ಈ ಸಮಯದಲ್ಲಿ ಸಾಲ ಕೊಟ್ಟರೆ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
  • ಸಂಜೆ ಅಧ್ಯಯನ ಮಾಡುವ ಬದಲು ಪ್ರಾರ್ಥನೆ ಮಾಡುವುದು ಉತ್ತಮ. ಹೀಗಾಗಿ ಈ ಸಮಯದಲ್ಲಿ ಮಂತ್ರ ಜಪ ಅಥವಾ ಆರತಿ ಮಾಡಲಾಗುತ್ತದೆ.
  • ಪತಿ-ಪತ್ನಿ ಸಂಧ್ಯಾಕಾಲದಲ್ಲಿ ಎಂದಿಗೂ ಸಂಬಂಧವನ್ನು ಹೊಂದಬಾರದು. ಗರುಡ ಪುರಾಣದ ಪ್ರಕಾರ ಹೀಗೆ ಮಾಡುವುದು ಸಂಸ್ಕಾರಹೀನವಂತೆ.
  • ಸಂಜೆ ಅಪ್ಪಿತಪ್ಪಿಯೂ ಗುಡಿಸುವುದು, ಒರೆಸುವುದು ಮಾಡಬಾರದು. ಹೀಗೆ ಮಾಡುವುದರಿಂದ ಹಣದ ನಷ್ಟ ಮತ್ತು ದುಂದುಗಾರಿಕೆ ಹೆಚ್ಚಾಗುತ್ತದಂತೆ.

ಇದನ್ನೂ ಓದಿ: ಈ ರಾಶಿಯವರು ತುಂಬಾ ತಮಾಷಿಗರು ಮತ್ತೆ ಅಷ್ಟೆ ಕೋಪಿಷ್ಟರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News