ಮಗನನ್ನ ಬಿಟ್ಟು ಮೇಘನಾ ಮೋಜು ಮಸ್ತಿ ಮಾಡ್ತೀದ್ದಾರೆ..! ಸುಂದರ್‌ ರಾಜ್‌ ಬೇಸರ

ನಟಿ ಮೇಘನಾ ರಾಜ್‌ ಕುರಿತು ನೆಟ್ಟಿಗರಿಂದ ಇಲ್ಲ ಸಲ್ಲದ ಮಾತುಗಳು ಕೇಳಿ ಬರುತ್ತಿವೆ. ಸ್ನೇಹಿತರ ಜೊತೆ ಥೈಲ್ಯಾಂಡ್‌ ಪ್ರವಾಸದಲ್ಲಿರುವ ನಟಿಗೆ ಮಗುವನ್ನು ಬಿಟ್ಟು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಕೆಲವು ಕಿಡಿಗೇಡಿಗಳು ಕಾಮೆಂಟ್‌ ಮಾಡಿದ್ದಾರೆ. ಈ ಕುರಿತು ಮೇಘನಾ ಅವರ ತಂದೆ ಸುಂದರ್‌ ರಾಜ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Nov 17, 2022, 12:50 PM IST
  • ಮಗನನ್ನ ಬಿಟ್ಟು ಮೇಘನಾ ಮೋಜು ಮಸ್ತಿ ಮಾಡ್ತೀದ್ದಾರೆ
  • ಒಂದು ನೋವಿನಿಂದ ಹೊರ ಬರುತ್ತಿದ್ದೇವೆ, ಈ ರೀತಿ ಮಾತನಾಡುವುದು ಸರಿಯಲ್ಲ
  • ಮಗಳನ್ನು ಟ್ರೋಲ್‌ ಮಾಡಿದವರ ವಿರುದ್ಧ ಸುಂದರ್‌ ರಾಜ್‌ ಅಸಮಾಧಾನ
ಮಗನನ್ನ ಬಿಟ್ಟು ಮೇಘನಾ ಮೋಜು ಮಸ್ತಿ ಮಾಡ್ತೀದ್ದಾರೆ..! ಸುಂದರ್‌ ರಾಜ್‌ ಬೇಸರ title=

Meghana Raj : ನಟಿ ಮೇಘನಾ ರಾಜ್‌ ಕುರಿತು ನೆಟ್ಟಿಗರಿಂದ ಇಲ್ಲ ಸಲ್ಲದ ಮಾತುಗಳು ಕೇಳಿ ಬರುತ್ತಿವೆ. ಸ್ನೇಹಿತರ ಜೊತೆ ಥೈಲ್ಯಾಂಡ್‌ ಪ್ರವಾಸದಲ್ಲಿರುವ ನಟಿಗೆ ಮಗುವನ್ನು ಬಿಟ್ಟು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಕೆಲವು ಕಿಡಿಗೇಡಿಗಳು ಕಾಮೆಂಟ್‌ ಮಾಡಿದ್ದಾರೆ. ಈ ಕುರಿತು ಮೇಘನಾ ಅವರ ತಂದೆ ಸುಂದರ್‌ ರಾಜ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು.. ನೆಟ್ಟಿಗರಿಗೆ ಮಾತನಾಡೋಕೆ ಒಂದು ವಿಷಯ ಬೇಕು ಅಷ್ಟೇ, ಹಿಂದೆ ಮುಂದೆ ತಿಳಿಯದೆ ಬಾಯಿಗೆ ಬಂದಂಗೆ ಕಾಮೆಂಟ್‌ ಮಾಡ್ತಾರೆ. ಇದೀಗ ಸಾಕಷ್ಟು ನೋವುಗಳನ್ನು ಅನುಭವಿಸಿದ ಬಳಿಕ ಮೆಘನಾ ರಾಜ್‌ ಅವರ ಮುಖದಲ್ಲಿ ನಗು ಕಾಣುತ್ತಿದೆ. ಅವರು ತಮ್ಮ ಗೆಳೆಯರ ಜೊತೆ ಥೈಲ್ಯಾಂಡ್‌ಗೆ ಹೋಗಿದ್ದು, ಸಂತೋಷದ ಸಮಯವನ್ನು ಕಳೆಯುತ್ತಿದ್ದಾರೆ. ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Aishwarya Rai : ಭುವನ ಸುಂದರಿ ಐಶ್ವರ್ಯಾ ರೈ ಲಿಪ್‌ ಲಾಕ್‌ ಫೋಟೋ ವೈರಲ್‌...!

ಸದ್ಯ ಆ ಫೋಟೋಗಳೇ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿವೆ. ಮಗುವನ್ನು ಬಿಟ್ಟು ಮೋಜು ಮಸ್ತಿ ಮಾಡಲು ಮೇಘನಾ ಅವರು ಹೋಗಿದ್ದಾರೆ ಎಂದು ಅಪಾರ್ಥವಾಗಿ ಮಾತನಾಡುತ್ತಿದ್ದಾರೆ. ಈ ಕುರಿತು ಮೆಘನಾ ರಾಜ್‌ ಅವರ ತಂದೆ ಸುಂದರ್‌ ರಾಜ್‌ ಅವರು ಅಸಮಾಧಾನ ಹೊರಹಾಕಿದ್ದಾರೆ. ಮಕ್ಕಳ ದಿನಾಚರಣೆ ಪ್ರಯುಕ್ತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಬಾಲನಟ-ನಟಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ನಟ ಅನೀಶ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ

ನನ್ನ ಮಗಳು ಫ್ರೆಂಡ್ಸ್‌ ಜೊತೆ ಥೈಲ್ಯಾಂಡ್‌ಗೆ ಹೋಗಿದ್ದಾಳೆ. ಅವಳು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಳು. ತಕ್ಷಣವೇ ಅದಕ್ಕೆ ಒಂದು ಶೀರ್ಪಿಕೆ ಹಾಕಿ, ತಂದೆ-ತಾಯಿಯ ಬಳಿ ಮಗುವನ್ನು ಬಿಟ್ಟು ಮೋಜು-ಮಸ್ತಿ ಮಾಡುವುದಕ್ಕೆ ಹೋಗಿದ್ದಾರೆ ಮೇಘನಾ ಅಂತ ಬರೆದಿದ್ದಾರೆ. ಇದು ಸರಿಯಲ್ಲ, ನಮ್ಮ ಮನೆಯಲ್ಲಿ ಒಂದು ಘಟನೆ ಆಗಿ ಹೋಗಿದೆ. ಅದನ್ನು ನಾವು ಮರೆಯುತ್ತಿದ್ದೇವೆ ಇಂತಹ ಸಂದರ್ಭದಲ್ಲಿ ಈ ರೀತಿಯ ಇಲ್ಲ ಸಲ್ಲದ ಮಾತುಗಳು ಸಮಂಜಸವಲ್ಲ ಎಂದು ಕಿಡಿಗೇಡಿಗಳ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News