ರಿಷಬ್ ಶೆಟ್ಟಿ ಮುಂದಿನ ನಡೆ ಯಾವ ಸಿನಿಮಾ ಕಡೆ ಅನ್ನೋ ಗುಟ್ಟು ಇದೀಗ ರಟ್ಟು..!

ಕೆಜಿಎಫ್ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗ ದತ್ತ ತಿರುಗಿ ನೋಡುವಂತೆ  ಮಾಡಿತ್ತು.. ಕೆಜಿಎಫ್ ಗೆಲುವು ಚಿತ್ರರಂಗಕ್ಕೆ ಹೊಸ ಹಾದಿ ಬುನಾದಿ ಹಾಕಿ ಕೊಟ್ಟಿತ್ತು.. ಆದರು ಕೆಜಿಎಫ್ ಗೆಲುವು ಆಕಸ್ಮಿಕ ಅಂದ ಮಂದಿಯೇ ಜಾಸ್ತಿ.. ಅದರೆ ಕೆಜಿಎಫ್ ನಂತರ ಬಂದ ಮತ್ತೊಂದಷ್ಟು  ಕನ್ನಡ ಚಿತ್ರಗಳು ಕಾಲ್ ಎಳೆಯೋ ಮಂದಿಗೆ ಗೋಲಿ ಹೊಡೆದು ಬಾಕ್ಸ್ ಆಫೀಸ್ ನ ಚಿಂದಿ ಚಿತ್ರಾನ್ನ ಮಾಡಿದ್ವು.. ಅದರಲ್ಲೂ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಕನ್ನಡ ಸಿನಿಮಾಗಳಂದ್ರೆ ಅಸಡ್ಡೆಯಿಂದ ಮಾತಾಡೋ ಮಂದಿ ತಲೆತಿರುಗುವಂತೆ  ಮಾಡಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಯೇ ಇಲ್ಲ...

Written by - YASHODHA POOJARI | Edited by - Yashaswini V | Last Updated : Nov 28, 2022, 12:22 PM IST
  • ಕೆಜಿಎಫ್ ನಂತ್ರ ಕಾಂತಾರ ಗೆಲುವು ಹೊಂಬಾಳೆ ಫಿಲಂಸ್ ನ ಟಾಪ್ ಲೆವೆಲ್ ಗೆ ಕರ್ಕೊಂಡ್ ಹೋಗಿ ನಿಲ್ಲಿಸಿದೆ.
  • ಕರ್ನಾಟದಲ್ಲಿ ಒಂದು ಕೋಟಿ ಟಿಕೆಟ್ ಗಳು ಈಗಾಗಲೇ ಸೇಲ್ ಆಗಿದ್ದು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ ಕಾಂತಾರ.
  • ಈ ಬೆನ್ನಲ್ಲಿ ಈಗ ಹೊಂಬಾಳೆ ಫಿಲಂಸ್ ಸಿನಿಮಾ ಪ್ಲಾನ್ ಯಾರು ಮಾಡೊಕೆ ಆಗಲ್ಲ. ಅವರು ನಡೆದಿದ್ದೆ ಹಾದಿ ಅನ್ನುವಂತಾಗಿದೆ.
ರಿಷಬ್ ಶೆಟ್ಟಿ ಮುಂದಿನ ನಡೆ ಯಾವ ಸಿನಿಮಾ ಕಡೆ ಅನ್ನೋ ಗುಟ್ಟು ಇದೀಗ ರಟ್ಟು..!  title=
Kantara

ಬೆಂಗಳೂರು: ಒಂದು 'ಕಾಂತಾರ' ಕಾಸರಗೋಡಿನ‌‌ ರಿಷಬ್ ಶೆಟ್ಟಿ ಅವರನ್ನ ಕ್ಯಾಲಿಫೋರ್ನಿಯಾವರೆಗೂ ಕರ್ಕೊಂಡ್ ಹೋಗಿದೆ. ಅಲ್ಲದೆ ರಿಷಬ್ ಶೆಟ್ರು ಕಾಂತಾರ ನಂತರ ಏನ್ ಮಾಡ್ತಾರೆ ಅಂತ ಪಗಡೆ ಹಾಕೋಕೆ ಶುರು ಮಾಡಿದ್ದಾರೆ.. ಅದರೆ ನಮ್ ಶೆಟ್ರು ಮಾತ್ರ ಇನ್ನು ಗುಟ್ಟು ಬಿಟ್ಕೊಟ್ಟಿಲ್ಲ. ರಿಷಬ್ ಮುಂದಿನ ನಡೆ ಯಾವ ಸಿನಿಮಾ ಕಡೆ ಅನ್ನೋ ಗುಟ್ಟು ಸಿಕ್ಕಿದ್ದು,ಕೆಜಿಎಫ್ ನ ನರಾಚಿ ಲೋಕದ ಸೃಷ್ಟಿ ಕರ್ತ ನೀಲ್ ಹಾದಿಯಲ್ಲೆ ಸಾಗಲು ಸಜ್ಜಾಗಿದ್ದಾರೆ. ಅಲ್ಲದೆ ರಾಕಿಭಾಯ್ ತರ ಸಾಮ್ರಾಟನಾಗೋ ಸೂಚನೆ ಕೊಟ್ಟಿದ್ದಾರೆ. ಅಷ್ಟಕ್ಕೂ ಕೆಜಿಎಫ್  ನೀಲ್ ಗೂ ಕಾಂತಾರ ಶೆಟ್ರುಗೂ ಏನ್ ನಂಟು ಅಂತೀರಾ ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ...

ಕೆಜಿಎಫ್ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗ ದತ್ತ ತಿರುಗಿ ನೋಡುವಂತೆ  ಮಾಡಿತ್ತು.. ಕೆಜಿಎಫ್ ಗೆಲುವು ಚಿತ್ರರಂಗಕ್ಕೆ ಹೊಸ ಹಾದಿ ಬುನಾದಿ ಹಾಕಿ ಕೊಟ್ಟಿತ್ತು.. ಆದರು ಕೆಜಿಎಫ್ ಗೆಲುವು ಆಕಸ್ಮಿಕ ಅಂದ ಮಂದಿಯೇ ಜಾಸ್ತಿ.. ಅದರೆ ಕೆಜಿಎಫ್ ನಂತರ ಬಂದ ಮತ್ತೊಂದಷ್ಟು  ಕನ್ನಡ ಚಿತ್ರಗಳು ಕಾಲ್ ಎಳೆಯೋ ಮಂದಿಗೆ ಗೋಲಿ ಹೊಡೆದು ಬಾಕ್ಸ್ ಆಫೀಸ್ ನ ಚಿಂದಿ ಚಿತ್ರಾನ್ನ ಮಾಡಿದ್ವು.. ಅದರಲ್ಲೂ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಕನ್ನಡ ಸಿನಿಮಾಗಳಂದ್ರೆ ಅಸಡ್ಡೆಯಿಂದ ಮಾತಾಡೋ ಮಂದಿ ತಲೆತಿರುಗುವಂತೆ  ಮಾಡಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಯೇ ಇಲ್ಲ...

ಇದನ್ನೂ ಓದಿ- ಸಾಹಸಸಿಂಹನ ಕನಸಿನ ಮನೆ "ವಲ್ಮೀಕ".. ವಲ್ಮೀಕ ಅಂದ್ರೆ ಏನು ಗೊತ್ತಾ...?

ಕೆಜಿಎಫ್ ನಂತ್ರ ಕಾಂತಾರ ಗೆಲುವು ಹೊಂಬಾಳೆ ಫಿಲಂಸ್ ನ  ಟಾಪ್ ಲೆವೆಲ್ ಗೆ ಕರ್ಕೊಂಡ್ ಹೋಗಿ ನಿಲ್ಲಿಸಿದೆ. ಕರ್ನಾಟದಲ್ಲಿ ಒಂದು ಕೋಟಿ ಟಿಕೆಟ್ ಗಳು ಈಗಾಗಲೇ ಸೇಲ್ ಆಗಿದ್ದು  ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ ಕಾಂತಾರ. ಈ ಬೆನ್ನಲ್ಲಿ ಈಗ ಹೊಂಬಾಳೆ  ಫಿಲಂಸ್ ಸಿನಿಮಾ ಪ್ಲಾನ್ ಯಾರು ಮಾಡೊಕೆ ಆಗಲ್ಲ. ಅವರು ನಡೆದಿದ್ದೆ ಹಾದಿ ಅನ್ನುವಂತಾಗಿದೆ. ಇದಕ್ಕೆ ಕಾರಣ ಕಾಂತಾರ ನಂತ್ರ ರಿಷಬ್ ಗೆ ಬಲೆ ಬೀಸಿರುವ ಹೊಂಬಾಳೆ ಫಿಲಂಸ್ ಮತ್ತೆ ಶೆಟ್ರು ಜೊತೆ ಸಿನಿಮಾ ಮಾಡೊ ಪ್ಲಾನ್ ಮಾಡಿದ್ದಾರೆ.. ವಿಶೇಷ ಅಂದ್ರೆ  ಹೊಂಬಾಳೆ ಫಿಲಂಸ್ ಕೆಜಿಎಪ್ ಸಿನಿಮಾಗೆ ಬಳಸಿದ್ದ ಐಡಿಯಾಲಜಿಯನ್ನು ಕಾಂತಾರಗೂ ಅಪ್ಲೈ ಮಾಡೊಕೆ ಸಜ್ಜಾಗಿದ್ದಾರೆ.. ಕೆಜಿಎಫ್  ಟ್ರೈಲರ್ ನೋಡಿಯೇ ಚಿತ್ರದ ಬಗ್ಗೆ ಜಡ್ಜ್ ಮಾಡಿದ್ದ ಹೊಂಬಾಳೆ ಬಳಗ ಸಖತ್ ಗೇಮ್ ಪ್ಲಾನ್ ಮಾಡಿ ಕೆಜಿಎಫ್ 2 ಮಾಡಿದ್ರು.. ಜೊತೆಗೆ ಯಾರೂ ಊಹೆ ಮಾಡದ ರೀತಿ ಗೆದ್ದು ಬೀಗಿದ್ರು..ಈಗ ಅದೇ ರೀತಿ ಕಾಂತಾರ ಗೆಲುವಿನ ನಂತರ ರಿಷಬ್ ಶೆಟ್ಟಿ ಜೊತೆಕಾಂತಾರ 2 ಮಾಡಲು ಹೊಂಬಾಳೆ ಮತ್ತು ರಿಷಬ್ ತೆರೆ ಮರೆಯಲ್ಲೇ ತಯಾರಿ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಯೆಸ್, ಕೆಜಿಎಫ್ ಹಾದಿಯಲ್ಲೇ ಸಾಗಲು ನಿರ್ಧರಿಸಿರೋ ಹೊಂಬಾಳೆ ಬಳಗ ಸಕ್ಸಸ್ ಪುಲ್ ಟೈಟಲ್ ಕಾಂತಾರವನ್ನು ಕೈಬಿಡದಿರಲು ನಿರ್ಧರಿಸಿ  ಶೆಟ್ರು ಕಾಲ್ ಶೀಟ್ ಲಾಕ್ ಮಾಡಿಕೊಂಡು ಕಾಂತಾರ 2 ಮಾಡುವಂತೆ ಆಫರ್ ಕೊಟ್ಟಿದ್ದಾರಂತೆ. ಅಲ್ಲದೆ ಹೊಂಬಾಳೆಯ ಈ ಆಫರ್ ನ ಅಕ್ಸೆಪ್ಟ್ ಮಾಡಿರುವ ರಿಷಬ್ ಕೂಡ ಕಾಂತಾರ 2 ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದ್ರೆ ಚಿತ್ರದ ಕತೆ ಏನು.. ಕಾಂತಾರ 2  ಕಾಂತಾರ ಸಿಕ್ವೇಲ್ಲಾ ಇಲ್ಲ ಹೊಸ ಕತೆಗೆ ಸಕ್ಸಸ್ ಟೈಟಲ್ ಫಿಕ್ಸ್ ಮಾಡಿ ಸಿನಿಮಾ ಮಾಡ್ತಾರ ಅನ್ನೋ ಗುಟ್ಟು ಇನ್ನು ಬಿಟ್ಟು ಕೊಟ್ಟಿಲ್ಲ ಶೆಟ್ರು.. ಆದರೆ ಕಾಂತಾರ ನಂತ್ರ ಹೊಂಬಾಳೆ ಜೊತೆ ಟೈಯಪ್ ಆಗಿರುವ ಶೆಟ್ರು ಕಾಂತಾರ 2 ಮಾಡೊದು ಪಕ್ಕಾ ಅಂತಿವೆ  ಬಲ್ಲ ಮೂಲಗಳು...

ಇದನ್ನೂ ಓದಿ- ಚಿಕ್ಕಪ್ಪ "ಪುನೀತ್" ಸ್ಕ್ರಿಪ್ಟ್ "ಯುವರಾಜ್ ಕುಮಾರ್ ಗೆ".. ಶೂಟಿಂಗ್ ಯಾವಾಗಿಂದ ಶುರು ಗೊತ್ತಾ...?

ಸದ್ಯ ಕಾಂತಾರ ಪ್ರಮೋಶನ್ ನಲ್ಲಿ ಕಳೆದೋಗಿರುವ ರಿಷಬ್ ಆದಷ್ಟು ಬೇಗ ಕಾಂತಾರ 2 ಕ್ಲೂ ಬಿಟ್ಟು ಕೊಟ್ಟು ಕಥೆಗಾಗಿ ತಮ್ಮ ಬಳಗದ ಜೊತೆ ಅಜ್ಞಾತ ಸ್ಥಳ ಸೇರೊದಂತು ಕನ್ಪರ್ಮ್ ಆಗಿದೆ.. ಅದರೆ ಕಾಂತಾರ ದಲ್ಲಿ ದೈವದ ಕತೆಯನ್ನು ಧೈರ್ಯವಾಗಿ ಮಾಡಿ ಗೆದ್ದಿರುವ ಶೆಟ್ರು ಮತ್ತೆ ಕರಾವಳಿಯ ಸೊಗಡಿನ ಯಾವ ಸಿನಿಮಾ ಮಾಡಿ ಮೋಡಿ ಮಾಡ್ತಾರಾ ಎಂದು ಕಾದುನೋಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News