ಚಿಕ್ಕಪ್ಪ "ಪುನೀತ್" ಸ್ಕ್ರಿಪ್ಟ್ "ಯುವರಾಜ್ ಕುಮಾರ್ ಗೆ".. ಶೂಟಿಂಗ್ ಯಾವಾಗಿಂದ ಶುರು ಗೊತ್ತಾ...?

ಅಭಿಮಾನಿ ದೇವರುಗಳ ಪ್ರೀತಿಯ ಅಪ್ಪು ಉತ್ತರಾಧಿಕಾರಿಯಾಗಿ ದರ್ಬಾರ್ ಮಾಡೊಕೆ ರಾಘಣ್ಣ ಕಿರಿಯ ಪುತ್ರ ಯುವರಾಜ್ ಸಜ್ಜಾಗಿದ್ದಾರೆ. ಈಗಾಗಲೇ ಹೊಂಬಾಳೆಯಲ್ಲಿ ಯುವ ಮೊದಲ ಸಿನಿಮಾ ಅನೌನ್ಸ್ ಆಗಿದೆ.

Written by - YASHODHA POOJARI | Last Updated : Nov 28, 2022, 10:44 AM IST
  • ಹೊಂಬಾಳೆಯಲ್ಲಿ ಯುವ ಮೊದಲ ಸಿನಿಮಾ ಅನೌನ್ಸ್
  • ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಮುಹೂರ್ತ
  • ಅಭಿಮಾನಿಗಳು ಥ್ರಿಲ್ ಆಗೋದಂತು ಗ್ಯಾರಂಟಿ
ಚಿಕ್ಕಪ್ಪ "ಪುನೀತ್" ಸ್ಕ್ರಿಪ್ಟ್ "ಯುವರಾಜ್ ಕುಮಾರ್ ಗೆ".. ಶೂಟಿಂಗ್ ಯಾವಾಗಿಂದ ಶುರು ಗೊತ್ತಾ...? title=

ಬೆಂಗಳೂರು : ಅಭಿಮಾನಿ ದೇವರುಗಳ ಪ್ರೀತಿಯ ಅಪ್ಪು ಉತ್ತರಾಧಿಕಾರಿಯಾಗಿ ದರ್ಬಾರ್ ಮಾಡೊಕೆ ರಾಘಣ್ಣ ಕಿರಿಯ ಪುತ್ರ ಯುವರಾಜ್ ಸಜ್ಜಾಗಿದ್ದಾರೆ. ಈಗಾಗಲೇ ಹೊಂಬಾಳೆಯಲ್ಲಿ ಯುವ ಮೊದಲ ಸಿನಿಮಾ ಅನೌನ್ಸ್ ಆಗಿದೆ. ಆ ದ್ರೆ ಯಾವಾಗ ಈ ಚಿತ್ರದ ಶೂಟಿಂಗ್ ಶುರುವಾಗುತ್ತೆ, ಚಿತ್ರಕ್ಕೆ ಯಾವ ಟೈಟಲ್ ಫಿಕ್ಸ್ ಮಾಡ್ತಾರೆ ಅನ್ನೋ ಕುತೂಹ ದೊಡ್ಮನೆ ಅಭಿಮಾನಿಗಳಲ್ಲಿದ್ದು,  ಈಗ ಆ ಕುತೂಹಲ ತಣಿಸೊ ಶುಭ ಸಮಾಚರವೊಂದು ನಿಮಗಾಗಿ ಕಾದಿದೆ.  

ಅಭಿಮಾನಿಗಳು ಥ್ರಿಲ್ ಆಗೋದಂತು ಗ್ಯಾರಂಟಿ :
ಭಗವಂತ ಒಂದು ಕಿತ್ಕೊಂಡ್ರೆ ಮತ್ತೊಂದು ಕೊಟ್ಟೆ ಕೊಡ್ತಾನೆ ಅನ್ನೋ ನಂಬಿಕೆ ನಮ್ಮಲಿದೆ. ಅದೇ ರೀತಿ  ಅಭಿಮಾನಿ ದೇವರುಗಳಿಂದ ಪವರ್ ಸ್ಟಾರ್  ಪುನೀತ್ ರಾಜ್‍ಕುಮಾರ್ ಅವರನ್ನ ಕಿತ್ಕೊಂಡ ವಿಧಿ ಈಗ ಅಪ್ಪು ಅಭಿಮಾನಿಗಳಿಗೆ ಯುವನನ್ನು ಕೊಟ್ಟಿದ್ದಾನೆ ಅಂದ್ರೆ ತಪ್ಪಲ್ಲ.ಯಾಕಂದ್ರೆ  ಅಪ್ಪು  ಅಗಲಿಕೆ ನಂತರ ಅಪ್ಪುಗೆ ಕೊಟ್ಟಿದ್ದ ಪ್ರೀತಿಯನ್ನು ಯುವನಿಗೆ ಉಣ ಬಡಿಸಲು  ದೊಡ್ಮನೆ ದೇವರುಗಳು ಸಜ್ಜಾಗಿದ್ದಾರೆ. ಜೊತೆಗೆ ಅಪ್ಪುಗಾಗಿ ಸಿದ್ದವಾಗಿದ್ದ ಸ್ಕ್ರಿಪ್ಟ್ ನಲ್ಲಿ ಯುವ ಮೊದಲ ಸಿನಿಮಾ ತಯಾರಾಗಲಿದ್ದು, ಈ ಚಿತ್ರವನ್ನು
ಅಪ್ಪುಗಾಗಿ ಕನಸು ಕಂಡಿದ್ದ  ಸಂತೋಷ್ ಆನಂದ್ ರಾಮ್ ಡೈರೆಕ್ಷನ್ ಮಾಡುತ್ತಿದ್ದು, ಹೊಂಬಾಳೆ ಫಿಲಂಸ್  ಯುವ ಮೊದಲ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಇದನ್ನೂ ಓದಿ : ಕುತೂಹಲ ಮೂಡಿಸಿದೆ‌ "ಇನಾಮ್ದಾರ್" ಚಿತ್ರದ ಟೀಸರ್

ಅಪ್ಪು ಎಂಬ ಶಕ್ತಿ ಅಭಿಮಾನಿಗಳಿಂದ ದೂರವಾದ ಮೇಲೆ ಯುವರಾಜ್ ನಲ್ಲಿ ಅಪ್ಪು ನಾ ಕಾಣ್ತಿದ್ದಾರೆ ದೊಡ್ಮನೆ ಅಭಿಮಾನಿಗಳು. ಅಪ್ಪು ಸ್ಥಾನವನ್ಜು ತುಂಬೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು  ದೊಡ್ಮನೆ ಮಂದಿಯೇ ಹೇಳಿದ್ದಾರೆ. ಆದ್ರೆ  ಅಭಿಮಾನಿಗಳು ಅಪ್ಪುಗೆ ಕೊಟ್ಟಿದ್ದ ಅಭಿಮಾನದ ಪ್ರೀತಿಯನ್ನು ರಾಘಣ್ಣನ ಕಿರಿಯ ಪುತ್ರ ಯುವರಾಜ್ ಕುಮಾರ್ ಗೆ ಪಟ್ಟಾಭಿಷೇಕ ಮಾಡೊಕೆ ಸಜ್ಜಾಗಿದ್ದಾರೆ. ಅದಕ್ಕೆಸಾಕ್ಷಿ  ಯುವ ಮೊದಲ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ  ದೊಡ್ಮನೆ ಅಭಿಮಾನಿಗಳು ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದು. ಜೊತೆಗೆ ಯಾವಾಗ ಈ‌ ಸಿನಿಮಾ ಶೂಟಿಂಗ್ ಶುರುವಾಗುತ್ತೆ? ಯಾವಾಗ ಯುವ ಅಪ್ಪು ಮಾಡಬೇಕಿದ್ದ ಪಾತ್ರಕ್ಕೆ ಬಣ್ಣ ಹಚ್ತಾರೆ ಅನ್ನೋ ಕಾತರ ಯುವ ಫ್ಯಾನ್ಸ್  ಗಳಲ್ಲಿದೆ.

ಯುವ ಮೊದಲ ಸಿನಿಮಾ ಅನೌನ್ಸ್ ಆದ ಮೇಲೆ ಶೂಟಿಂಗ್ ಅಪ್ಡೇಟ್  ಆಗಲಿ..ಟೈಟಲ್ ಬಗ್ಗೆಯಾಗಲಿ  ಹೊಂಬಾಳೆಯವರಾಗಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಗಲಿ ಗುಟ್ಟು ಬಿಟ್ಟು ಕೊಟ್ಟಿಲ್ಲ.  ಅದ್ರೆ ಯುವ ಮೊದಲ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಯಾವಾಗ ಎಂಟ್ರಿ ಕೊಡ್ತಾರೆ ಅನ್ನೋ ಮಾಹಿತಿ ನಿಮಗಾಗಿ ಈಗ ಸಿಕ್ಕಿದೆ. ಸಿಂಪಲ್ ಆಗಿ ಸಿನಿಮಾ ಅನೌನ್ಸ್ ಮಾಡಿರುವ ಹೊಂಬಾಳೆ ಫಿಲಂಸ್ ಯುವ ಮೊದಲ  ಸಿನಿಮಾದ ಮುಹೂರ್ತವನ್ನು ಡಿಸೆಂಬರ್ ಮೊದಲ ವಾರದಲ್ಲಿ ಅದ್ದೂರಿಯಾಗಿ ಮಾಡಲು ಸಕಲ ಸಿದ್ದತೆ ಮಾಡಿ ಕೊಂಡಿದ್ದಾರೆ. 

ಇದನ್ನೂ ಓದಿ : Disha Patani Viral Video: ದಿಶಾ ಪಾಟ್ನಿಯ ಇಂತಹ ಅವತಾರ ನೀವು ಈ ಹಿಂದೆ ಎಂದಿಗೂ ನೋಡಿರಲು ಸಾಧ್ಯವೇ ಇಲ್ಲ

ಅಲ್ಲದೆ  ಧನುರ್ಮಾಸ ಮುಗಿದ ಮೇಲೆ ಶೂಟಿಂಗ್ ಶುರು ಮಾಡಲು ಸಂತೋಷ್ ಆನಂದ್ ರಾಮ್ ಶೆಡ್ಯೂಲ್ ಸ್ಕೆಚ್ ಹಾಕಿದ್ದಾರೆ ಅನ್ನೋ ಮಾಹಿತಿ ಯುವ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಸಂತೋಷ್ ಆನಂದ್ ರಾಮ್ ಈಗಾಗಲೇ  ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿದ್ದಾರೆ.. ಯುವನಿಗಾಗಿ ತಂದೆ ಮಗನ ವಾತ್ಸಲ್ಯದೆ ಕತೆ ಮಾಡಿರುವ ಸಂತೊಷ್ ಸದ್ಯ ರಾಘವೇಂದ್ರ ಸ್ಟೋರ್  ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ರಾಘವೇಂದ್ರ ಸ್ಟೋರ್ ಚಿತ್ರವನ್ನು ರಿಲೀಸ್ ಮಾಡಿದ ನಂತರ ಯುವ ಚಿತ್ರದ ಟೈಟಲ್ ಫೈನಲ್ ಮಾಡ್ಕೊಂಡು ಜವರಿಯಲ್ಲಿ ಯುವರಾಜ್  ಜೊತೆ  ಶೂಟಿಂಗ್ ಅಖಾಡಕ್ಕೆ ಇಳಿಯೋಕೆ ಎಲ್ಲಾ  ತಯಾರಿ  ಮಾಡಿಕೊಳ್ತಿದ್ದಾರೆ. ಅಲ್ಲದೆ ಹೊಂಬಾಳೆಯಲ್ಲಿ " ಮಯೂರ" ಟೈಟಲ್ ರಿಜಿಸ್ಟರ್ ಆಗಿದ್ದು, ಈ ಚಿತ್ರಕ್ಕೆ ಮಯೂರ ಟೈಟಲ್ ಇಡ್ತಾರ ಅನ್ನೋ ಕುತೂಹಲ ಯುವ ಅಭಿಮಾನಿಗಳಲಿದೆ. ಆ ಕುತೂಹಲ ತಣಿ ಬೇಕಾದ್ರೆ ಜನವರಿ ಮೂರನೇ ವಾರದವರೆಗೂ ಕಾಯಬೇಕು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News