Shani Dev Upay: ಶನಿ ಮುನಿಸಿಕೊಂಡರೆ ಜೀವನವೇ ನರಕಾಗುತ್ತದೆ, ಈ ಉಪಾಯ ಅನುಸರಿಸಿ

Shani Dosh Upay: ಶನಿಯ ಕೆಟ್ಟ ದೃಷ್ಟಿಯಿಂದ ಪ್ರತಿಯೊಬ್ಬರೂ ತಪ್ಪಿಸಿಕೊಳ್ಳಲು ಬಯುಸುತ್ತಾರೆ. ಇದಕ್ಕಾಗಿ ಜನರು ವಿಭಿನ್ನ ರೀತಿಯ ಉಪಾಯಗಳನ್ನು ಮಾಡುತ್ತಾರೆ. ಇಂದು ನಾವು ಜೋತಿಷ್ಯ ಶಾಸ್ತ್ರದ ಪರಿಣಾಮಕಾರಿ ಉಪಾಯಗಳ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸಿ ನೀವು ಶನಿಯ ಪ್ರಕೊಪದಿಂದ ಪಾರಾಗಬಹುದು.  

Written by - Nitin Tabib | Last Updated : Jan 12, 2023, 08:20 PM IST
  • ಶನಿದೇವರು ಅಪ್ಪಿತಪ್ಪಿಯೂ ಒಂದು ವೇಳೆ ಕೋಪಗೊಂಡರೆ,
  • ಆತ ನಿಮಗೆ ನಿದ್ರೆಯಿಲ್ಲದ ರಾತ್ರಿಗಳನ್ನು ದಯಪಾಲಿಸುತ್ತಾನೇ.
  • ಇಂತಹ ಪರಿಸ್ಥಿತಿಯಲ್ಲಿ, ಕೆಲವು ಉಪಾಯಗಳನ್ನೂ ತೆಗೆದುಕೊಳ್ಳುವ ಮೂಲಕ ಆತನನ್ನು ಸಂತೋಷಪಡಿಸುವುದು ಅವಶ್ಯಕ
Shani Dev Upay: ಶನಿ ಮುನಿಸಿಕೊಂಡರೆ ಜೀವನವೇ ನರಕಾಗುತ್ತದೆ, ಈ ಉಪಾಯ ಅನುಸರಿಸಿ title=
Shani Dev Upay

Shani Dev Upay 2023:ನ್ಯಾಯದ ದೇವರು ಎಂದೇ ಪರಿಗಣಿಸಲಾಗುವ ಮತ್ತು ಜನರ ಕರ್ಮಗಳ ಆಧಾರದ ಮೇಲೆ ಫಲಗಳನ್ನು ನೀಡುವ ಶನಿ ಮಹಾರಾಜ, ಜನರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಕೆಟ್ಟ ಕರ್ಮಗಳಿಗೆ ವಿಶೇಷವಾಗಿ ಸಾಡೇಸಾತಿ ಮತ್ತು ಎರಡೂ ವರೆವರ್ಷಗಳ ಕಾಟದ ಸಮಯದಲ್ಲಿ ಬೆಲೆ ತೆರೆಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಶನಿದೇವನನ್ನು ಯಾವಾಗಲೂ ಸಂತೋಷವಾಗಿರಿಸಿಕೊಳ್ಳುವುದು ತುಂಬಾ ಮುಖ್ಯ. ಆತನ ಪ್ರಕೊಪದಿಂದ ಒಬ್ಬ ವ್ಯಕ್ತಿಯು ಅನೇಕ ರೀತಿಯ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ಶನಿ ಪ್ರಸಂನನಾದರೆ, ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಸಂತೋಷ ಇರುತ್ತದೆ.

ಉಪಾಯಗಳು
ಶನಿದೇವರು ಅಪ್ಪಿತಪ್ಪಿಯೂ ಒಂದು ವೇಳೆ ಕೋಪಗೊಂಡರೆ, ಆತ ನಿಮಗೆ ನಿದ್ರೆಯಿಲ್ಲದ ರಾತ್ರಿಗಳನ್ನು ದಯಪಾಲಿಸುತ್ತಾನೇ. ಇಂತಹ ಪರಿಸ್ಥಿತಿಯಲ್ಲಿ, ಕೆಲವು ಉಪಾಯಗಳನ್ನೂ ತೆಗೆದುಕೊಳ್ಳುವ ಮೂಲಕ ಆತನನ್ನು ಸಂತೋಷಪಡಿಸುವುದು ಅವಶ್ಯಕ. ಇದಕ್ಕಾಗಿ ಶನಿವಾರದಂದು ಶನಿ ಚಾಲೀಸವನ್ನು ಪಠಿಸಬಹುದು. ಮತ್ತೊಂದೆಡೆ, ಈ ದಿನ ಶನಿ ದೇವಸ್ಥಾನದಲ್ಲಿ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಶನಿದೇವ ಪ್ರಸಂನನಾಗುತ್ತಾನೆ. ಮತ್ತೊಂದೆಡೆ, ಶನಿವಾರದಂದು ಶನಿ ತಂದೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಸಹ ಲಾಭವನ್ನು ನೀಡುತ್ತದೆ.

ಶನಿಯ ಮಂತ್ರಗಳು
>> ಓಂ ಪ್ರಾಂ ಪ್ರಿಂ ಪ್ರಂ ಸಃ ಶನೈಶ್ಚರಾಯ ನಮಃ ।
>> ಓಂ ಶನ ಶನಿಶ್ಚರಾಯ ನಮಃ.
>> ಓಂ ನೀಲಾಂಜನ ಸಮಾಭಾಸನ್ ರವಿಪುತ್ರಂ ಯಮಾಗ್ರಜಂ.
>> ಛಾಯಾಮರ್ತಂಡ ಸಂಭೂತಮ್ ತಥಾ ನಮಾಮಿ ಶನೈಶ್ಚರಮ್ ॥

ಇದನ್ನೂ ಓದಿ-Sankranti 2023: ಮಕರ ಸಂಕ್ರಾಂತಿಯಿಂದ ಯಾವ ರಾಶಿಗಳ ಜನರ ಜೀವನದಲ್ಲಿ ಏನು ಬದಲಾವಣೆಗಳಾಗಲಿವೆ?

ಶನಿಯ ಕೆಟ್ಟ ಸ್ಥಾನ
ಶನಿಯು ವ್ಯಕ್ತಿಯ ಜೀವನದಲ್ಲಿ ಕೆಟ್ಟ ಸ್ಥಾನದಲ್ಲಿದ್ದಾಗ, ವ್ಯಕ್ತಿಯು ತೊಂದರೆಗಳಿಂದ ಸುತ್ತುವರೆಯುತ್ತಾನೆ. ಯಾವ ಕೆಲಸದಲ್ಲೂ ಆತನಿಗೆ ಯಶಸ್ಸು ಸಿಗುವುದಿಲ್ಲ. ಕೆಲಸ ಅಥವಾ ಕೆಲಸದ ಸ್ಥಳದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ ಮತ್ತು ಉದ್ಯೋಗವನ್ನು ಕಳೆದುಕೊಳ್ಳುವ ಭಯದಿಂದ ವ್ಯಕ್ತಿ ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. ಸಂಬಂಧಿಕರೊಂದಿಗಿನ ಸಂಬಂಧಗಳು ಹಾಳಾಗುತ್ತವೆ. ಹಣದ ನಷ್ಟದಿಂದ ಬಡತನ ಬರಲು ಪ್ರಾರಂಭವಾಗುತ್ತದೆ.

ಇದನ್ನೂ ಓದಿ-Rahu Gochar 2023: ಮಂಗಳನ ರಾಶಿಯಲ್ಲಿ ರಾಹು ಗೋಚರ, ಈ ರಾಶಿಗಳ ಜನರ ಜೀವನದಲ್ಲಿ ಹಣದ ಸುರಿಮಳೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News