Chandana Ananthakrishna: ಭರ್ಜರಿ ಬ್ಯಾಚುಲರ್ಸ್ ಶೋ ಗೆ ಗುಡ್ ಬೈ ಹೇಳಿದ ನಟಿ ಚಂದನ..ಕಾರಣವೇನು ಗೊತ್ತಾ..?

Bharjari Bachelors : ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರವ ಭರ್ಜರಿ ಬ್ಯಾಚುಲರ್ಸ್‌ ಶೋಗೆ ಖ್ಯಾತ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಕಂಟೆಸ್ಟಂಟ್‌ ಆಗಿ ಭಾಗವಹಿಸಿದ್ದರು. ಸದ್ಯ ನಟಿ ಈ ಶೋನಿಂದ ಹೊರನಡೆದಿದ್ದಾರೆ. ನಟಿ ದಿಢೀರನೆ ಶೋಗೆ ಗುಡ್ ಬೈ ಹೇಳಲು ಕಾರಣವೇನಿರಬಹುದು  ಅಂತೀರಾ ಇಲ್ಲಿದೆ ಫುಲ್‌ ಡಿಟೇಲ್ಸ್‌...

Written by - Savita M B | Last Updated : Aug 31, 2023, 12:24 PM IST
  • ಇತ್ತೀಚಿನ ದಿನಗಳಲ್ಲಿ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ ಅನ್ನೋದು ದೊಡ್ಡ ಕಂಪ್ಲೆಂಟ್‌
  • ಪ್ರತಿ ಗಂಡಿಗೆ ಸೂಕ್ತವಾದ ಹೆಣ್ಣು ಸಿಗುವುದಂತೂ ಇನ್ನೂ ಕಷ್ಟ
  • ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋ ಬೇರೆ ಬೇರೆ ಟ್ಯಾಲೆಂಟ್ ಗಳನ್ನು ವೇದಿಕೆ ಮೇಲೆ ತಂದಿದೆ
Chandana Ananthakrishna: ಭರ್ಜರಿ ಬ್ಯಾಚುಲರ್ಸ್ ಶೋ ಗೆ ಗುಡ್ ಬೈ ಹೇಳಿದ ನಟಿ ಚಂದನ..ಕಾರಣವೇನು ಗೊತ್ತಾ..?  title=

Chandana Ananthakrishna: ಇತ್ತೀಚಿನ ದಿನಗಳಲ್ಲಿ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ ಅನ್ನೋದು ದೊಡ್ಡ ಕಂಪ್ಲೆಂಟ್. ಪ್ರತಿ ಗಂಡಿಗೆ ಸೂಕ್ತವಾದ ಹೆಣ್ಣು ಸಿಗುವುದಂತೂ ಇನ್ನೂ ಕಷ್ಟ. ಇಂತಹ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ಭರ್ಜರಿ ಬ್ಯಾಚುಲರ್ಸ್‌ ಎನ್ನುವ ರಿಯಾಲಿಟಿ ಶೋ ಮೂಲಕ ಬೇರೆ ಬೇರೆ ಟ್ಯಾಲೆಂಟ್ ಇರುವ ಮತ್ತು ಟಿವಿ ಮಾಧ್ಯಮದಲ್ಲಿ ಸಕ್ರಿಯರಾಗಿರುವವರನ್ನು ವೇದಿಕೆ ಮೇಲೆ ಕರೆತಂದಿದೆ. 

ಮದುವೆ ವಯಸ್ಸಿನ ಮತ್ತು ಪ್ರತಿಭೆಯುಳ್ಳ ಹುಡುಗರಿಗೆ ತಮ್ಮ ಶೋನಲ್ಲಿ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟು ಅವರ ಅನೇಕ ಪ್ರತಿಭೆಗಳನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ.  ಅಲ್ಲದೇ ಇಂತಹ ವಿಭಿನ್ನ ಶೈಲಿಯ ರಿಯಾಲಿಟಿ ಶೋ ಹಿಂದೆಂದೂ ಬಂದಿರಲಿಲ್ಲ. 

ಇದನ್ನೂ ಓದಿ-ದರ್ಶನ್‌ ʼತಂಗಿಗಾಗಿʼ ಚಿತ್ರ ನಟಿ ಪೂನಂ ಬಾಜ್ವಾ ಹಾಟ್‌ ಫೋಟೋಸ್‌ ವೈರಲ್‌..!

ಇನ್ನು ಈಗಾಗಲೇ ಈ ಜನಪ್ರಿಯ ರಿಯಾಲಿಟಿ ಶೋ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಭರ್ಜರಿಯಾಗಿ ಸಾಗುತ್ತಿದೆ. ಇದರಲ್ಲಿ ಕನ್ನಡದ ಖ್ಯಾತ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಸಹ ಭಾವಹಿಸಿದ್ದರು. 

ಹಲವು ವಾರಗಳಿಂದ ಭರ್ಜರಿ ಬ್ಯಾಚುರ್ಲಸ್‌ನಲ್ಲಿ ಸಕ್ರಿಯವಾಗಿರುವ ಚಂದನಾ ಅನಂತಕೃಷ್ಣ ಸದ್ಯ  ಶೋಗೆ ಗುಡ್ ಬೈ ಹೇಳಿದ್ದಾರೆ. ಈ ಶೋನಲ್ಲಿ ರುದ್ರ ಮಾಸ್ಟರ್‌ಗೆ ಪಾರ್ಟ್ನರ್‌ ಆಗಿ ಅವರು ಭಾಗವಹಿಸಿದ್ದರು. ಕಳೆದ ವಾರ ನಟಿ 'ಭರ್ಜರಿ ಬ್ಯಾಚುಲರ್ಸ್' ಶೋನಿಂದ ಹೊರನಡೆದು ಭಾವುಕವರಾದರು. 

ಹಾಗಾದರೆ ನಟಿ ಇದ್ದಕ್ಕಿಂದಯೇ ಈ ಶೋನಿಂದ ಹೊರನಡೆದಿದ್ದೇಕೆ ಅಂತೀರಾ...? ಉತ್ತರ ಇಲ್ಲಿದೆ. ಅದೇ ವಾಹಿನಿಯಲ್ಲಿ ಪ್ರಸಾರವಾಗಲಿರುವ  ಹೊಸ ಧಾರಾವಾಹಿಯಲ್ಲಿ ನಟಿ ಚಂದನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆದ್ದರಿಂದ ಆ ಧಾರಾವಾಹಿಯ ಸಿದ್ಧತೆಗಾಗಿ ಶೋಗೆ ಗುಡ್‌ ಬಾಯ್‌ ಹೇಳಿದ್ದಾರೆ. ಇನ್ನು ಈ ಬಗ್ಗೆ ಉಳಿದೆಲ್ಲ ಕಂಟೆಸ್ಟಂಟ್ಸ್‌ಗೆ ಬೇಸರವಿದ್ದರೂ ಅನಿವಾರ್ಯವಾದ ಕಾರಣ ಅವರನ್ನು ಖುಷಿಯಿಂದ ಕಳಿಸಿಕೊಟ್ಟಿದ್ದಾರೆ. 

ಇದನ್ನೂ ಓದಿ-ಹೊಲಗೇರಿ ಪದ ಬಳಕೆ : ನಟ ಉಪೇಂದ್ರ ಮೇಲೆ ಸಾಕ್ಷಿ ನಾಶ ಮತ್ತು ಸಂಧಾನಕ್ಕೆ ಯತ್ನ ಆರೋಪ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News