ಹಣ ಪಡೆದು ಬಟ್ಟೆಗಳ ಬಾಕ್ಸ್ ನೀಡದ ಹುಬ್ಬಳ್ಳಿಯ ರೆಡಿಮೇಡ್ ಬಟ್ಟೆ ಕಂಪನಿಗೆ ರೂ.53,640/-ದಂಡ

  ಜಿಲ್ಲೆಯ ಕಲಘಟಗಿ ಅಕ್ಕಿ ಓಣಿಯ ನಿವಾಸಿ ಅರುಣ್ ಕುಂಬಾರ ಎಂಬುವವರು ದಿನಾಂಕ:28/09/2022 ರಂದು ಒಬ್ಬ ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿಯ ಸ್ಯಾಮ್ ಔಟ್‍ಫಿಟ್ ಪ್ಯಾಶನ್ ಪ್ರೈವೇಟ್ ಲಿ. ಇವರಿಂದ ರೂ.38,640/- ಮೌಲ್ಯದ ಬಟ್ಟೆಗಳ ಬಾಕ್ಸ್‍ಗಳನ್ನು ಖರೀದಿಸಿದ್ದರು.

Written by - Manjunath N | Last Updated : Nov 7, 2023, 07:20 PM IST
  • ಒಪ್ಪಂದದಂತೆ ಎದುರುದಾರರು ದೂರುದಾರನಿಗೆ ಬಟ್ಟೆಗಳ ಬಾಕ್ಸ್ ಸರಬರಾಜು ಮಾಡಿರಲಿಲ್ಲ
  • ಆ ಕುರಿತು 2ನೇ ಎದುರುದಾರನನ್ನು ವಿಚಾರಿಸಿದಾಗ ದಿ.20/09/2022 ರಂದು ಕೇವಲ ರೂ.9,396/-ಗೆ ಒಂದು ರಸೀದಿ ಕೊಟ್ಟಿದ್ದರು
 ಹಣ ಪಡೆದು ಬಟ್ಟೆಗಳ ಬಾಕ್ಸ್ ನೀಡದ ಹುಬ್ಬಳ್ಳಿಯ ರೆಡಿಮೇಡ್ ಬಟ್ಟೆ ಕಂಪನಿಗೆ ರೂ.53,640/-ದಂಡ title=

ಧಾರವಾಡ:  ಜಿಲ್ಲೆಯ ಕಲಘಟಗಿ ಅಕ್ಕಿ ಓಣಿಯ ನಿವಾಸಿ ಅರುಣ್ ಕುಂಬಾರ ಎಂಬುವವರು ದಿನಾಂಕ:28/09/2022 ರಂದು ಒಬ್ಬ ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿಯ ಸ್ಯಾಮ್ ಔಟ್‍ಫಿಟ್ ಪ್ಯಾಶನ್ ಪ್ರೈವೇಟ್ ಲಿ. ಇವರಿಂದ ರೂ.38,640/- ಮೌಲ್ಯದ ಬಟ್ಟೆಗಳ ಬಾಕ್ಸ್‍ಗಳನ್ನು ಖರೀದಿಸಿದ್ದರು.

ಇದನ್ನೂ ಓದಿ- ಸಂಘಟನೆ ಬಲಿಷ್ಠವಾಗಿದ್ದರೆ ಮಾತ್ರ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ 

ಒಪ್ಪಂದದಂತೆ ಎದುರುದಾರರು ದೂರುದಾರನಿಗೆ ಬಟ್ಟೆಗಳ ಬಾಕ್ಸ್ ಸರಬರಾಜು ಮಾಡಿರಲಿಲ್ಲ.ಆ ಕುರಿತು 2ನೇ ಎದುರುದಾರನನ್ನು ವಿಚಾರಿಸಿದಾಗ ದಿ.20/09/2022 ರಂದು ಕೇವಲ ರೂ.9,396/-ಗೆ ಒಂದು ರಸೀದಿ ಕೊಟ್ಟಿದ್ದರು. ಇಬ್ಬರು ಹಲವು ಬಾರಿ ವಿಚಾರಿಸಿದರೂ ಇಬ್ಬರು ಎದುರುದಾರರು ದೂರುದಾರನಿಗೆ ಬಟ್ಟೆಗಳ ಬಾಕ್ಸ್ ಕೊಟ್ಟಿರಲಿಲ್ಲ. ಅದರಿಂದ ತನಗೆ ಮೋಸವಾಗಿದೆ.ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಅರುಣ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:28/06/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ- "ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ" 

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರ ಅರುಣರವರಿಂದ ರೂ.38,640/- ಬಟ್ಟೆಗಳ ಬಾಕ್ಸ್ ಕೊಡಲು ಹಣ ಪಡೆದ ವಿಷಯವನ್ನು ಎದುರುದಾರರು ಅಲ್ಲಗಳಿದಿರುವುದಿಲ್ಲ. ಎದುರುದಾರರು ದೂರುದಾರನಿಂದ ಹಣ ಪಡೆದ ನಂತರ ಆ ಮೊತ್ತದ ಬಟ್ಟೆಗಳ ಬಾಕ್ಸ್‍ನ್ನು ಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಬಟ್ಟೆಗಳ ಬಾಕ್ಸ್‍ನ್ನು ಸರಬರಾಜು ಮಾಡದೇ ದೂರುದಾರನಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರ ಸಂದಾಯ ಮಾಡಿದ ರೂ.38,640/-ಗಳನ್ನು ದಿ:28/09/2022 ರಿಂದ ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಹಣ ಸಂದಾಯ ಮಾಡುವಂತೆ ಎದುರುದಾರರಿಗೆ ಆಯೋಗ ಆದೇಶಿಸಿದೆ. ದೂರುದಾರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು ರೂ.10,000/- ಪರಿಹಾರ ಮತ್ತು ರೂ.5,000/- ಪ್ರಕರಣ ನಡೆಸಿದ ಖರ್ಚು ವೆಚ್ಚ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News