ನಿರ್ಮಲಾನಂದ ಶ್ರೀಗಳಿಂದ ಜೇಡರಳ್ಳಿ ಕೃಷ್ಣಪ್ಪಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ 

ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್‌ ರೆಡ್ಡಿ ಮಾತನಾಡಿ, ದೂರದೂರಿನಿಂದ ಇಲ್ಲಿ ಬಂದು ಬದಕನ್ನ ಕಟ್ಟಿಕೊಂಡಿರುವ ಕನ್ನಡಿಗರು ನಿಜಕ್ಕೂ ಕನ್ನಡವನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ.

Written by - Zee Kannada News Desk | Last Updated : Oct 4, 2024, 08:20 PM IST
  • ಇಡೀ ವಿಶ್ವವೇ ಉದ್ಯಮ, ವ್ಯಾಪಾರ ವಹಿವಾಟು, ಉದ್ದಿಮೆ ಕಾರಣಕಾಗ್ಗಿ ಬೆಂಗಳೂರಿಗೆ ಬರುತ್ತಿದೆ.
  • ವಿಶ್ವಮಾನವ ತತ್ವ ಹೊಂದಿರುವ ಕರ್ನಾಟಕದ ಕಂಪು ಇಂದು ಎಲ್ಲೆಡೆ ಪಸರಿಸುತ್ತಿದೆ.
  • ಬೆಂಗಳೂರು ಮಹಾನಗರದ ನಿರ್ಮಾತೃ ಕೆಂಪೇಗೌಡರ ಕಲ್ಪನೆಯನ್ನು ಇಂದು ವಿಶ್ವವೇ ಪ್ರಶಂಸಿಸುವ ಮಟ್ಟಕ್ಕೆ ಮನ್ನಣೆ ಪಡೆದಿದೆ.
 ನಿರ್ಮಲಾನಂದ ಶ್ರೀಗಳಿಂದ ಜೇಡರಳ್ಳಿ ಕೃಷ್ಣಪ್ಪಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ  title=

ಲಂಡನ್‌ : ವಿಶ್ವ ಒಕ್ಕಲಿಗರ ಮಹಾ ವೇದಿಕೆಯು ಲಂಡನ್‌ನ ಕ್ಯಾಂಬೆರ್‌ವೆಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ  3ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ ಮತ್ತು ಕನ್ನಡ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಮೀಡಿಯಾ ಕನೆಕ್ಟ್‌ ಸಿಇಒ ಹಾಗೂ ಸಂಸ್ಥಾಪಕರಾದ ದಿವ್ಯ ರಂಗೇನಹಳ್ಳಿ ಸೇರಿದಂತೆ ಹಲವು ಸಾಧಕರಿಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಭೂತಕಾಲವನ್ನು ಭವಿಷ್ಯದ ಜೊತೆ ಜೋಡಿಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಿದೆ. ಈ ಕಾರ್ಯಕ್ರಮದ ಮೂಲಕ ಭಾರತದ ಸಂಸ್ಕೃತಿಯನ್ನು ವಿದೇಶಿ ನೆಲದಲ್ಲಿ  ಪ್ರತಿಬಿಂಬಿಸುವ ಪ್ರಯತ್ನವಾಗಿದೆ. ಈ ಮೂಲಕ ನಾವು ನಮ್ಮ ಪೂರ್ವಜರ ಹೆಜ್ಜೆಗಳನ್ನು ತಿಳಿಯಬೇಕು ಜೊತೆಗೆ ಮುಂದಿನ ಪೀಳಿಗೆಗೂ ತಿಳಿಸಬೇಕು. ಇಂದು ಜಾಗತಿಕ ನಗರವಾಗಿ ಬೆಳೆದಿರುವ ಬೆಂಗಳೂರಿಗೆ ಐದು ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಅಡಿಪಾಯ ಹಾಕಿದರು. ಸರ್ವಧರ್ಮ ಸಮನ್ವಯಗಳ ಕಲ್ಪನೆ ಹೊಂದಿದ್ದ ಅವರನ್ನು ನಾವು ಯಾವುದೇ ಜಾತಿಯನ್ನು ಆಧರಿಸಿ ನೋಡುತ್ತಿಲ್ಲ, ಇಂದು ವಿಶ್ವವೇ ಅವರ ಕೌಶಲ್ಯವನ್ನು ತಿಳಿಯುತ್ತಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರದರ್ಶಿಸಲು ಸಂಘಟಕರ ಬದ್ಧತೆಯನ್ನು ತೋರುತ್ತಿದೆ. ಪ್ರಪಂಚದಾದ್ಯಂತ ಕನ್ನಡಿಗರು ವಾಸಿಸುತ್ತಿದ್ದು, ಅವರ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕವನ್ನು ಮುಂದುವರೆಸಿ ಎಂದು ಪ್ರೋತ್ಸಾಹದ ನುಡಿಗಳನ್ನು ಆಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಶಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷನೆಂದರೆ 7 ಕೋಟಿ ಕನ್ನಡಿಗರ ಧ್ವನಿಯಾಗಿ ಇಲ್ಲಿ ವಿಶ್ವ ಒಕ್ಕಲಿಗರ ವೇದಿಕೆಯಲ್ಲಿ ಪಾಲ್ಗೊಂಡಿದ್ದೇನೆ. ಬೆಂಗಳೂರು ನಗರದ ಪಿತಾಮಹ, 1000 ಕೆರೆಗಳ ಸರದಾರ, ಮುನ್ನೋಟದ ಕನಸುಗಾರ, ಕರುನಾಡು ಹೆಮ್ಮೆಯ ಕುವರ, ಗೌಡರ ಒಕ್ಕಲಿಗರ ಕುಲತಿಲಕ, ಸರ್ವಧರ್ಮಗಳ ಸಮನ್ವಯದ ಹರಿಕಾರ ಕೆಂಪೇಗೌಡರ ಹೆಸರನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಶ್ರೀಗಳ ಆದಿಯಾಗಿ ವಿಶ್ವ ಒಕ್ಕಲಿಗರ ವೇದಿಕೆಯೇ ಕಾರಣ. ಜಗತ್ತಿನ ಅತೀ ಶ್ರೇಷ್ಠ ಸಂಸ್ಕೃತಿ ಎಂದರೆ ಕೃಷಿ. ಕೃಷಿಕರು, ಮಣ್ಣಿನ ಮಕ್ಕಳು ಎಂದರೆ ಒಕ್ಕಲಿಗರು. ವಿದೇಶದಲ್ಲಿ ನೆಲೆಸಿ ಕನ್ನಡದ ಅಭಿಮಾನವನ್ನು ಪಸರಿಸುತ್ತಿರುವ ಕನ್ನಡಿಗರನ್ನು ಪ್ರಶಂಸಿಸಿದರು.

ಇದನ್ನೂ ಓದಿ: ದಿನಾ ಬೆಳಿಗ್ಗೆ ಈ ಒಣಹಣ್ಣಿನ ರಸ ಕುಡಿಯೋದಕ್ಕೆ ಇಷ್ಟೊಂದು ಫಿಟ್ ಆಗಿದ್ದಾರಂತೆ ವಿರಾಟ್ ಕೊಹ್ಲಿ! ಸಣ್ಣ ಆಗೋಕೆ ಪರದಾಡೋರಿಗೆ ಸ್ವತಃ ಅವರೇ ಹೇಳಿದ ಟಿಪ್ಸ್ ಇದು

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಮೇಯರ್‌ ನೈಮ ಆಲಿ ಮಾತನಾಡಿ,  ಕನ್ನಡ ಸಮುದಾಯ ಮತ್ತು ಯುಕೆಗೆ ಕನ್ನಡಿಗರ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಸಂಸ್ಕೃತಿ ಮತ್ತು ಭಾಷೆಯ ಆಚರಣೆಯಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತಂದಿದೆ. ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರದಂತಹ ಉದ್ಯಮಗಳಲ್ಲಿ ಯುಕೆಯ ಯಶಸ್ಸಿನ ಪ್ರಮುಖ ಭಾಗವಾಗಿರುವುದು ಕನ್ನಡ ಮಾತನಾಡುವ ಸಮುದಾಯ. ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಗಳಿಗೆ ಅವರ ಕಠಿಣ ಪರಿಶ್ರಮವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್‌ ರೆಡ್ಡಿ ಮಾತನಾಡಿ, ದೂರದೂರಿನಿಂದ ಇಲ್ಲಿ ಬಂದು ಬದಕನ್ನ ಕಟ್ಟಿಕೊಂಡಿರುವ ಕನ್ನಡಿಗರು ನಿಜಕ್ಕೂ ಕನ್ನಡವನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ. ಇಂದು ಬೆಂಗಳೂರು ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ ಅದಕ್ಕೆ  ಕಾರಣ ಕೆಂಪೇಗೌಡರು. ಪ್ರಸಿದ್ಧ ದೇಶಗಳಂತೆ ಬೆಂಗಳೂರು ಉತ್ತಮ ವಾತಾವಾರಣವನ್ನು ಹೊಂದಿದೆ. ಅಲ್ಲದೆ ಸ್ವಾಮೀಜಿಯವರ ಸಂಸ್ಥೆಯಲ್ಲಿ ಅನೇಕರು ಶಿಕ್ಷಣ ಪಡೆದು ಇಂದು ವಿಶ್ವದೆಲ್ಲೆಡೆ ಉತ್ತಮ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅದಕ್ಕೆ ಕಾರಣ ಅವರ ಆಶೀರ್ವಾದ. ಈ ವೇಳೆ ಭಾರತ ಕಂಡ ನೆಚ್ಚಿನ ಪ್ರಧಾನಿ ಮೋದಿಯವರನ್ನು ಅವರು ನೆನೆದರು. 

ಕಾರ್ಯಕ್ರಮದಲ್ಲಿ ಶ್ರೀ ಜಯರಾಮ್‌ ರಾಯಪುರ (ಭಾರತೀಯ ಕಂದಾಯ ಸೇವೆ (ಐ.ಆರ್.ಎಸ್)‌ ಬೆಂಗಳೂರು) ಮಾತನಾಡಿ, ಇಡೀ ಪ್ರಪಂಚವೇ ಬೆಂಗಳೂರಿನತ್ತ ಇಂದು ಧಾವಿಸುತ್ತಿದೆ. ಅಂತಹ ಬೆಂಗಳೂರಿನ ಕೋಟೆಯನ್ನು ಕಟ್ಟಿದ ಕೆಂಪೇಗೌಡರ ಜಯಂತಿಯನ್ನು ವಿಶ್ವದೆಲ್ಲೆಡೆ ಆಚರಿಸಲು ಪಣತೊಟ್ಟಿರುವ ವಿಶ್ವ ಒಕ್ಕಲಿಗರ ಮಹಾವೇದಿಕೆಯ ಪಯತ್ನ ನಿಜಕ್ಕೂ ಶ್ಲಾಘನೀಯ. ಏಕೆಂದರೆ ಇಡೀ ವಿಶ್ವವೇ ಉದ್ಯಮ, ವ್ಯಾಪಾರ ವಹಿವಾಟು, ಉದ್ದಿಮೆ ಕಾರಣಕಾಗ್ಗಿ ಬೆಂಗಳೂರಿಗೆ ಬರುತ್ತಿದೆ. ವಿಶ್ವಮಾನವ ತತ್ವ ಹೊಂದಿರುವ ಕರ್ನಾಟಕದ ಕಂಪು ಇಂದು ಎಲ್ಲೆಡೆ ಪಸರಿಸುತ್ತಿದೆ. ಬೆಂಗಳೂರು ಮಹಾನಗರದ ನಿರ್ಮಾತೃ ಕೆಂಪೇಗೌಡರ ಕಲ್ಪನೆಯನ್ನು ಇಂದು ವಿಶ್ವವೇ ಪ್ರಶಂಸಿಸುವ ಮಟ್ಟಕ್ಕೆ ಮನ್ನಣೆ ಪಡೆದಿದೆ. ನಾವೂ ಕೂಡ ಇಂದು ಬಹುರಾಷ್ಟ್ರೀಯ ಕಂಪನಿಗಳನ್ನು ಕಟ್ಟುವಂತಾಗಬೇಕು. ನಮ್ಮ ಕರ್ನಾಟಕದಲ್ಲಿನ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ನಾವು ದೊಡ್ಡ ಉದ್ದಿಮೆಗಳನ್ನು ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವ ಒಕ್ಕಲಿಗರ ಮಹಾ ವೇದಿಯ ಅಧ್ಯಕ್ಷರಾದ ವೈ.ಡಿ ರವಿಶಂಕರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷರಾದ ಭಾರತಿ ಶಂಕರ್‌, ಯುಕೆ ಆಲ್‌ ಕೌಂಟಿ ಕನ್ನಡ ಅಸೋಸಿಯೆಶನ್‌ ಬಳಗದ ಪರವಾಗಿ ಸುರೇಶ್‌ ಘಟ್ಟಾಪುರ  ಮತ್ತು ಹರೀಶ್‌ ರಾಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್‌ ಅವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಇದೇ ವೇಳೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿಯನ್ನು ದಿವ್ಯ ರಂಗೇನಹಳ್ಳಿ (ಮೀಡಿಯಾ ಕನೆಕ್ಟ್‌ ಸಿಇಒ ಹಾಗೂ ಸಂಸ್ಥಾಪಕರು), ಡಾ. ಎಸ್‌.ರಾಮಾನುಜ, ಡಾ. ಹೆಚ್‌.ಎಂ.ಕೃಷ್ಣಮೂರ್ತಿ(ಜೇಡರಳ್ಳಿ ಕೃಷ್ಣಪ್ಪ), ಶ್ರೀಮತಿ ವಿಜಯ ರಮೇಶ್, ಯುವನ್‌ ದೇವ್‌, ಹರೀಶ್‌ ರಾಮಯ್ಯರವರಿಗೆ ನೀಡಲಾಯಿತು. ಹಾಗೆಯೇ  ಜಯರಾಮ್‌ ರಾಯಪುರ, ರಮೇಶ್‌ ಸಂಗಾ, ಮೊಹಮ್ಮದ್‌ ರಫಿ ಪಾಶ ಮತ್ತು ಸುರೇಶ್‌ ಘಟ್ಟಾಪುರ ಅವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದು ಒಕ್ಕಲಿಗ ಸಮುದಾಯದ ಪರಂಪರೆ, ಸಂಸ್ಕೃತಿ ಮತ್ತು ಕೊಡುಗೆಗಳನ್ನು ಪ್ರದರ್ಶಿಸುವ ಆಚರಣೆಯಾಗಿ ಮೂಡಿಬಂದಿತು. ಈ ಕಾರ್ಯಕ್ರಮವು ಹಲವಾರು ಕನ್ನಡಿಗರನ್ನು ಒಟ್ಟುಗೂಡಿಸುವ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News