ಕರೋನಾ ಕಂಟಕ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 25 ನಿಮಿಷಕ್ಕೆ ಒಂದು ಸಾವು

ದೆಹಲಿಯ ಅತಿದೊಡ್ಡ ಕಿರಾಣಿ ಮಾರುಕಟ್ಟೆಯಾದ ಖಾರಿ ಬಾವೊಲಿಯಲ್ಲಿ 100 ಉದ್ಯಮಿಗಳಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿದೆ.

Last Updated : Jun 12, 2020, 08:54 AM IST
ಕರೋನಾ ಕಂಟಕ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 25 ನಿಮಿಷಕ್ಕೆ ಒಂದು ಸಾವು  title=

ನವದೆಹಲಿ: ಕೊರೊನಾವೈರಸ್ ಸೋಂಕಿನಿಂದ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಭೀಕರವಾಗಿದೆ. ದೆಹಲಿಯಲ್ಲಿ ಪ್ರತಿದಿನ ಕರೋನಾವೈರಸ್ (Coronavirus) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಗುರುವಾರ ದೆಹಲಿಯಲ್ಲಿ 65 ಜನರು ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿ 25 ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ. ದೆಹಲಿಯಲ್ಲಿ ಕರೋನಾದಿಂದ ಮೃತಪಟ್ಟವರ ಅಂತಿಮ ವಿಧಿಗಳಿಗಾಗಿ 4 ಶವಾಗಾರ ಮತ್ತು 2 ಸ್ಮಶಾನಗಳನ್ನು ಹೆಚ್ಚಿಸಲಾಗಿದೆ.

ಮತ್ತೊಂದೆಡೆ ದೆಹಲಿಯ ಅತಿದೊಡ್ಡ ಕಿರಾಣಿ ಮಾರುಕಟ್ಟೆಯಾದ ಖಾರಿ ಬಾವೊಲಿಯಲ್ಲಿ 100 ಉದ್ಯಮಿಗಳಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿದೆ. ಅಂಗಡಿಯವರ ಕುಟುಂಬಗಳ ಅನೇಕ ಸದಸ್ಯರು ಕರೋನಾ ಪಾಸಿಟಿವ್ ಆಗಿದ್ದಾರೆ. 

ಖಾರಿ ಬಾವೊಲಿ ಈಗಾಗಲೇ ಜೂನ್ 14 ರವರೆಗೆ ಮುಚ್ಚಲ್ಪಟ್ಟಿದೆ. ಬೀಜಗಳು ಮತ್ತು ಮಸಾಲೆಗಳ ಸಗಟು ಮಾರುಕಟ್ಟೆಗೆ ಖಾರಿ ಬಾವೋಲಿ ಮಾರುಕಟ್ಟೆ ದೇಶಾದ್ಯಂತ ಪ್ರಸಿದ್ಧವಾಗಿದೆ. ಈ ಮಾರುಕಟ್ಟೆ ಅಗತ್ಯ ವಸ್ತುಗಳಲ್ಲಿ ಬರುತ್ತದೆ, ಅದಕ್ಕಾಗಿಯೇ ಇದು ಲಾಕ್‌ಡೌನ್‌ನಲ್ಲಿಯೂ ಸಹ ತೆರೆದಿತ್ತು.

ದೇಶದ ರಾಜಧಾನಿಯಾದ ದೆಹಲಿಯು ಈಗ ಕರೋನಾದ ಸುಳಿಗೆ ಹೋಗುತ್ತಿರುವುದರಿಂದ ಈಗ ದೆಹಲಿಯ ಬೆದರಿಸುವ ಅಂಕಿ ಅಂಶಗಳು ಹೊರಬರುತ್ತಿವೆ. ಕರೋನಾದ ಒಟ್ಟು ಪ್ರಕರಣಗಳು ಸಹ 34 ಸಾವಿರಗಳಷ್ಟು ಮುಂದಕ್ಕೆ ಹೋಗಿವೆ ಮತ್ತು ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಕರೋನಾದಿಂದ ಸಾವನ್ನಪ್ಪಿದವರ ಬಗ್ಗೆ ದೆಹಲಿ ಸರ್ಕಾರ ಮತ್ತು ಎಂಸಿಡಿ ಹೇಳಿಕೆಗಳು ವಿಭಿನ್ನವಾಗಿವೆ.

ದೆಹಲಿಯಲ್ಲಿ ಕರೋನಾ ಪ್ರಕರಣಗಳು:
1 ಜೂನ್ - 990 ಪ್ರಕರಣ
2 ಜೂನ್ 1298 ಪ್ರಕರಣ
3 ಜೂನ್ 1513 ಪ್ರಕರಣ
4 ಜೂನ್ 1359 ಪ್ರಕರಣ
5 ಜೂನ್ 1330 ಪ್ರಕರಣ
ಜೂನ್ 6 - 1320 ಪ್ರಕರಣ
7 ಜೂನ್ 1282 ಪ್ರಕರಣ
8 ಜೂನ್ - 1007 ಪ್ರಕರಣ 
9 ಜೂನ್ 1366 ಪ್ರಕರಣ
10 ಜೂನ್ 1501 ಪ್ರಕರಣ
11 ಜೂನ್ 1877 ಪ್ರಕರಣ

ಏತನ್ಮಧ್ಯೆ ಕರೋನಾ ರೋಗಿಗಳು ದೆಹಲಿಯ LNJP ಆಸ್ಪತ್ರೆಯಲ್ಲಿ ಮೃತ ದೇಹಗಳ ನಡುವೆ ವಾಸಿಸುವ ಪರಿಸ್ಥಿತಿ ಎದುರಾಗಿದೆ. ಆದರೆ  ಪ್ರತಿ ಆಸ್ಪತ್ರೆಗಳಲ್ಲಿ  ಕೋವಿಡ್ -19 (Covid-19) ರೋಗಿಗಳಿಗಾಗಿ ಹಾಸಿಗೆಯನ್ನು ಕಡ್ಡಾಯಗೊಳಿಸಬೇಕು ಎಂದು ದೆಹಲಿ ಸರ್ಕಾರ ಆದೇಶಿಸಿದೆ.

Trending News