ರೈತರ ಬಂಡಾಯ: ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತ

ಪೊಲೀಸರು ಮತ್ತು ರೈತರ ನಡುವಿನ ಘರ್ಷಣೆಯ ಮಧ್ಯೆ ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Last Updated : Jan 26, 2021, 06:38 PM IST
  • ಗಣರಾಜ್ಯೋತ್ಸವದ ಮೆರವಣಿಗೆಯ ಮುಕ್ತಾಯದ ನಂತರ ರ್ಯಾಲಿಯು ಬೆಳಿಗ್ಗೆ 11.30 ರ ಸುಮಾರಿಗೆ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ನಿರ್ಧರಿಸಲಾಗಿತ್ತು, ಆದರೆ ನಿಗದಿತ ಸಮಯಕ್ಕಿಂತ ಕೆಲವೇ ಗಂಟೆಗಳ ಮೊದಲು ನೂರಾರು ರೈತರು ನಗರವನ್ನು ಪ್ರವೇಶಿಸಿದ್ದರು.
  • ಈ ನಾಟಕೀಯ ದೃಶ್ಯಗಳಲ್ಲಿ ರೈತರು ತಮ್ಮ ಟ್ರಾಕ್ಟರುಗಳಲ್ಲಿನ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸುವುದನ್ನು ತೋರಿಸಿದವು.
ರೈತರ ಬಂಡಾಯ: ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತ  title=
Photo Courtesy: PTI

ನವದೆಹಲಿ: ಪೊಲೀಸರು ಮತ್ತು ರೈತರ ನಡುವಿನ ಘರ್ಷಣೆಯ ಮಧ್ಯೆ ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರೈತರ ಟ್ರಾಕ್ಟರ್ ರ್ಯಾಲಿ (Farmer Tractor Rally)ಯು ಅಪ್ರತಿಮ ಕೆಂಪು ಕೋಟೆ ಸೇರಿದಂತೆ ನಗರದ ಹಲವಾರು ಪ್ರದೇಶಗಳಿಗೆ ಪ್ರವೇಶಿಸಿದೆ.ಅನೇಕ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸ್ವೀಕರಿಸಿದ ಪಠ್ಯ ಸಂದೇಶದ ಸಾಮಾಜಿಕ ಮಾಧ್ಯಮ ಸ್ಕ್ರೀನ್‌ಶಾಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. "ಸರ್ಕಾರದ ಸೂಚನೆಯಂತೆ, ಮುಂದಿನ ಸೂಚನೆ ಬರುವವರೆಗೂ ನಿಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ನಿಲ್ಲಿಸಲಾಗಿದೆ" ಎಂದು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Farmers Protest: ಟ್ರಾಕ್ಟರ್ ರ‍್ಯಾಲಿ ಬೆನ್ನೆಲೆ ಮತ್ತೊಂದು 'ರ‍್ಯಾಲಿ ಘೋಷಣೆ' ಮಾಡಿದ ರೈತರು..!

ಸಿಂಗು ಗಡಿಯ ಸಮೀಪವಿರುವ ಪ್ರದೇಶಗಳಾದ  ಘಾಜಿಪುರ, ಟಿಕ್ರಿ, ಮುಕರ್ಬಾ ಚೌಕ್, ಮತ್ತು ನಂಗ್ಲೋಯಿ ಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.40 ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ನ್ಯಾಯಾಲಯದ ಮೂಲಕ ಪ್ರತಿಭಟನೆಯನ್ನು ನಡೆಸಲು ಪೋಲಿಸರಿಂದ ಅನುಮತಿಯನ್ನು ಪಡೆದಿದ್ದರು. ಈ ರೈತ ಸಂಘಟನೆಗಳಲ್ಲಿ ಒಂದಾಗಿರುವ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ನಿನ್ನೆ ಸಂಜೆ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳ ಮೂಲಕ ಹಾದುಹೋಗುವ ಗೊತ್ತುಪಡಿಸಿದ ಮಾರ್ಗಕ್ಕೆ ಅಂಟಿಕೊಳ್ಳಲು ನಿರಾಕರಿಸಿತು.

ಇದನ್ನೂ ಓದಿ: Farmer's Tractor Rally : ಪೊಲೀಸರೊಂದಿಗೆ ಘರ್ಷಣೆ ; ಕೆಂಪು ಕೋಟೆಗೆ ರೈತರ ಮುತ್ತಿಗೆ

ಗಣರಾಜ್ಯೋತ್ಸವದ ಮೆರವಣಿಗೆಯ ಮುಕ್ತಾಯದ ನಂತರ ರ್ಯಾಲಿಯು ಬೆಳಿಗ್ಗೆ 11.30 ರ ಸುಮಾರಿಗೆ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ನಿರ್ಧರಿಸಲಾಗಿತ್ತು, ಆದರೆ ನಿಗದಿತ ಸಮಯಕ್ಕಿಂತ ಕೆಲವೇ ಗಂಟೆಗಳ ಮೊದಲು ನೂರಾರು ರೈತರು ನಗರವನ್ನು ಪ್ರವೇಶಿಸಿದ್ದರು. ಈ ನಾಟಕೀಯ ದೃಶ್ಯಗಳಲ್ಲಿ ರೈತರು ತಮ್ಮ ಟ್ರಾಕ್ಟರುಗಳಲ್ಲಿನ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸುವುದನ್ನು ತೋರಿಸಿದವು.

ಮಧ್ಯಾಹ್ನದ ಹೊತ್ತಿಗೆ, ನೂರಾರು ಪ್ರತಿಭಟನಾಕಾರರು ಕೆಂಪು ಕೋಟೆಯನ್ನು ತಲುಪಿ ಸ್ಮಾರಕದ ಪ್ರಾಕಾರಗಳನ್ನು ಆಕ್ರಮಿಸಿಕೊಂಡರು.ಪ್ರತಿಭಟನಾಕಾರರಲ್ಲಿ ಒಬ್ಬರು ಸ್ಮಾರಕದ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಧ್ವಜಸ್ತಂಭವನ್ನು ಹತ್ತಿ ಹಳದಿ ಭಾವುಟವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಪೋಲಿಸರು ಸ್ಥಳವನ್ನು ತೆರವುಗೊಳಿಸಲು ಲಾಠಿ ಚಾರ್ಜ್ ಗೆ ಮೊರೆಹೊಗಬೇಕಾಯಿತು.ಪಶ್ಚಿಮ ದೆಹಲಿಯ ನಾಗ್ಲೋಯ್ ಚೌಕ್‌ನಲ್ಲಿ ಪೊಲೀಸರು ಕೆಲವು ಸುತ್ತಿನ ಅಶ್ರುವಾಯು ಚಿಪ್ಪುಗಳನ್ನು ಹಾರಿಸಿದರು ಮತ್ತು ಪ್ರತಿಭಟನಾಕಾರರನ್ನು ಚದುರಿಸಲು ಬಲವನ್ನು ಬಳಸಿದರು.

'ಇಂದಿನ ರೈತ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಅಭೂತಪೂರ್ವವಾಗಿ ಭಾಗವಹಿಸಿದ್ದಕ್ಕಾಗಿ ನಾವು ರೈತರಿಗೆ ಧನ್ಯವಾದ ಅರ್ಪಿಸುತ್ತೇವೆ. ಇಂದು ನಡೆದ ಅನಪೇಕ್ಷಿತ ಮತ್ತು ಸ್ವೀಕಾರಾರ್ಹವಲ್ಲದ ಘಟನೆಗಳನ್ನು ನಾವು ಖಂಡಿಸುತ್ತೇವೆ ಮತ್ತು ವಿಷಾದಿಸುತ್ತೇವೆ ಮತ್ತು ಅಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಂದ ನಾವು ದೂರವಿದ್ದೇವೆ" ಎಂದು ರೈತ ಒಕ್ಕೂಟಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News