‘777 ಚಾರ್ಲಿ’ ನೋಡಿ ಗಳಗಳನೆ ಅತ್ತ ಸಿಎಂ ಬೊಮ್ಮಾಯಿ..!

ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ‘777 ಚಾರ್ಲಿ’ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಖುದ್ದು ಸಿನಿಮಾ ಥಿಯೇಟರ್‍ಗೆ ತೆರಳಿ ವೀಕ್ಷಿಸಿದ್ದಾರೆ.

Written by - K Karthik Rao | Edited by - Puttaraj K Alur | Last Updated : Jun 14, 2022, 01:09 PM IST
  • ‘777 ಚಾರ್ಲಿ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿಎಂ ಬಸವರಾಜ್ ಬೊಮ್ಮಾಯಿ
  • ‘ಚಾರ್ಲಿ’ ನಟನೆಗೆ ಮನಸೋತು ತಮ್ಮ ಪ್ರೀತಿಯ ಶ್ವಾನವನ್ನು ನೆನೆದ ಸಿಎಂ
  • ‘777 ಚಾರ್ಲಿ’ ಸಿನಿಮಾ ವೀಕ್ಷಿಸುವಂತೆ ಜನರಿಗೆ ಕರೆ ನೀಡಿದ ಸಿಎಂ ಬೊಮ್ಮಾಯಿ
‘777 ಚಾರ್ಲಿ’ ನೋಡಿ ಗಳಗಳನೆ ಅತ್ತ ಸಿಎಂ ಬೊಮ್ಮಾಯಿ..! title=
‘777 ಚಾರ್ಲಿ’ ವೀಕ್ಷಿಸಿ ಭಾವುಕರಾದ ಸಿಎಂ ಬೊಮ್ಮಾಯಿ

ಬೆಂಗಳೂರು: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ದೇಶದಾಂದ್ಯಂತ ಬಿಡುಗಡೆಗೊಂಡಿರುವ ‘777 ಚಾರ್ಲಿ’ ಸಿನಿಮಾ ಎಲ್ಲರ ಹೃದಯವನ್ನು ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಟೀಂ ಹಾಗೂ ನಿರ್ದೇಶಕ ಕಿರಣ್ ರಾಜ್ ಶ್ರಮದಿಂದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡದ ನಟ-ನಟಿಯರು ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ನಟ-ನಟಿಯರು ಬೆಂಬಲಕ್ಕೆ ನಿಂತು ಮತ್ತಷ್ಟು ಹುರುಪ್ಪನ್ನು ನೀಡಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಸಿನಿಮಾ ನೋಡಿ ಗಳಗಳನೆ ಅತ್ತ ಸಿಎಂ..!

ಹೌದು, ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ‘777 ಚಾರ್ಲಿ’ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಖುದ್ದು ಸಿನಿಮಾ ಥಿಯೇಟರ್‍ಗೆ ತೆರಳಿ ವೀಕ್ಷಿಸಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್ PVRನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರತಂಡದೊಂದಿಗೆ ಸಿಎಂ ಬೊಮ್ಮಾಯಿಯವರು ‘777 ಚಾರ್ಲಿ’ಯನ್ನು ವೀಕ್ಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಮತ್ತು ಚಿತ್ರದ ನಿರ್ದೇಶಕ ಕಿರಣ್ ರಾಜ್ ಹಾಗೂ ನಾಯಕ ನಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Jack Manju: ನಿರ್ಮಾಪಕ ಜಾಕ್‌ ಮಂಜು ಆಸ್ಪತ್ರೆಗೆ ದಾಖಲು

ತಾವು ಸಾಕಿದ್ದ ಶ್ವಾನವನ್ನು ನೆನೆದ ಸಿಎಂ

‘ಸಿನಿಮಾದಲ್ಲಿ ‘ಚಾರ್ಲಿ’ ಪಾತ್ರದಲ್ಲಿ ಶ್ವಾನವೊಂದು ಕಾಣಿಸಿಕೊಂಡಿದ್ದು, ನಟನೆ ಮೆಚ್ಚುವಂತದ್ದು. ಉತ್ತಮ ಕಥೆ ಹೊಂದಿರುವ ಈ ಸಿನಿಮಾ ಅತ್ಯುತ್ತಮ ಸಂದೇಶ ನೀಡಿದ್ದು, ಭಾವನಾತ್ಮಕವಾಗಿದೆ’ ಎಂದು ಸಿಎಂ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶ್ವಾನಪ್ರಿಯರಾಗಿರುವ ಬೊಮ್ಮಾಯಿಯವರು ಗೃಹಸಚಿವರಾಗಿದ್ದಾಗ ತಾವು ಸಾಕಿ ಸಲಹಿದ್ದ ಶ್ವಾನ (ಸನ್ನಿ) ಸಾವನ್ನಪ್ಪಿದಾಗ ಭಾವುಕರಾಗಿದ್ದನ್ನು ಸ್ಮರಿಸಿ ದುಃಖಿತರಾದರು. ಯಾವುದೇ ಪ್ರಾಣಿಗಳನ್ನು ದೋಷಿಸಬಾರದು ಅವುಗಳನ್ನು ಅಡಾಪ್ಟ್ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಅವರು ತಿಳಿಸಿದರು.

ನಟ ರಕ್ಷಿತ್ ಶೆಟ್ಟಿ ನಟನೆ ಜೊತೆ ‘ಚಾರ್ಲಿ’ ನಟನೆ ಹಾಗೂ ಇಡೀ ಚಿತ್ರತಂಡಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಸಿನಿಮಾ ನೋಡಲು ಬರುವಂತೆ ಚಿತ್ರತಂಡವು ಸಿಎಂಗೆ ಮನವಿ ಮಾಡಿತ್ತು, ಅವರ ಮನವಿಗೆ ಸ್ಪಂದಿಸಿ ಸಿನಿಮಾ ವೀಕ್ಷಿಸಿ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ ಸಿಎಂ ಭಾವುಕರಾಗಿ ಪ್ರಾಣಿ ಪ್ರೇಮಿಗಳಿಗೆ ಈ ಸಿನಿಮಾ ನೋಡುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ: Nayanthara: ಪತಿ ವಿಘ್ನೇಶ್ ಜೊತೆಗೆ ತವರಿಗೆ ಬಂದ ನಟಿ ನಯನತಾರಾ

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News