ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅನ್ನು ಭೇಟಿ ಮಾಡಿದ ಬಿಲ್ ಗೆಡ್ಸ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೆಡ್ಸ್ ಇಂದು ಲಕ್ನೌಗೆ ಆಗಮಿಸಿದ್ದಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಅವರು ರಾಜ್ಯದಲ್ಲಿ ಪ್ರತಿಷ್ಠಾಪಿತವಾಗುತ್ತಿರುವ ಮಿಲಿಂಡಾ ಗೇಟ್ಸ್  ಬಗ್ಗೆ ಸಮಾಲೋಚನೆ ನಡೆಸಿದರು.

Last Updated : Nov 17, 2017, 01:25 PM IST
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅನ್ನು ಭೇಟಿ ಮಾಡಿದ ಬಿಲ್ ಗೆಡ್ಸ್ title=
Pic: ANI

ನವ ದೆಹಲಿ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ಲಕ್ನೌಗೆ ಆಗಮಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದಲ್ಲಿ, ಬಿಲ್ ಗೇಟ್ಸ್ ರಾಜ್ಯದಲ್ಲಿ ನಡೆಯುತ್ತಿರುವ ಮಿಲಿಂಡಾ ಗೇಟ್ಸ್ ಪ್ರತಿಷ್ಠಾನವನ್ನು ಚರ್ಚಿಸಿದರು. ಈ ಸಮಯದಲ್ಲಿ ಯೋಗಿ ಸರ್ಕಾರದ ಹಲವು ಮಂತ್ರಿಗಳು ಸಹ ಹಾಜರಿದ್ದರು. ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಈ ಸಂಸ್ಥೆಯನ್ನು 2000 ರಲ್ಲಿ ಪ್ರಾರಂಭಿಸಿದರು. ಆರೋಗ್ಯ ಕ್ಷೇತ್ರವನ್ನು ಸುಧಾರಿಸುವುದು ಇದರ ಪ್ರಮುಖ ಗುರಿಯಾಗಿದೆ. ನಂತರ ಇದನ್ನು ಶಿಕ್ಷಣ ಕ್ಷೇತ್ರದಲ್ಲಿ ವಿಸ್ತರಿಸಲಾಯಿತು. ಇದು ವಿಶ್ವದಲ್ಲೇ ಅತಿ ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದ ಪ್ರವಾಸಕ್ಕೆ ಆಗಮಿಸಿದ ಬಿಲ್ ಗೇಟ್ಸ್, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರನ್ನು ಸಹ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಗೇಟ್ಸ್ ಭಾರತದ ವಿವಿಧ ಕಲ್ಯಾಣ ಕಾರ್ಯಗಳ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಿದ್ದಾರೆ.

ಗೃಹಸಚಿವರೊಂದಿಗೆ ಬಿಲ್ ಗೇಟ್ಸ್ ಸಭೆ ಪ್ರಮುಖ ಪಾತ್ರವನ್ನು ವಹಿಸಿದೆ. ಕಾರಣ ಭಾರತೀಯ ಎನ್ಜಿಒ, ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನವನ್ನು (PHFI) ಗೃಹ ಸಚಿವಾಲಯವು ಏಪ್ರಿಲ್ನಲ್ಲಿ ರದ್ದುಪಡಿಸಿದೆ. ಈ ಎನ್ಜಿಒ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ ಮತ್ತು ಗೇಟ್ಸ್ ಫೌಂಡೇಶನ್ ಹಣ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿದೆ. ಅಧಿಕಾರಿಗಳು ತಿಳಿಸಿರುವ ಮಾಹಿತಿಯಂತೆ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಗೃಹ ಸಚಿವರನ್ನು ಭೇಟಿಯಾಗಿದ್ದರು. 

ಮುಂದಿನ 20 ವರ್ಷಗಳಲ್ಲಿ ಭಾರತ ಸರಾಸರಿ ಬೆಳವಣಿಗೆಯ ದರವನ್ನು ಶೇ .8 ರಷ್ಟು ಗಳಿಸುತ್ತಿದ್ದರೆ, ಸಮಾನತೆಯ ಆಧಾರದ ಮೇಲೆ, ಅದು ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ ಎಂದು ಗುರುವಾರ (ನವೆಂಬರ್ 16) ಬಿಲ್ ಗೇಟ್ಸ್ ಹೇಳಿದ್ದಾರೆ. ಸರಕು ಮತ್ತು ಸೇವೆಗಳ GST ಅನುಷ್ಠಾನವು ಧನಾತ್ಮಕ ದಿಕ್ಕಿನಲ್ಲಿ ತೆಗೆದುಕೊಂಡ ಹೆಜ್ಜೆಯೆಂದು ಗೇಟ್ಸ್ ಹೇಳಿದರು. "ಮುಂದಿನ 20 ವರ್ಷಗಳಲ್ಲಿ ಭಾರತ ಶೇಕಡ ಏಳು ಸರಾಸರಿ ಬೆಳವಣಿಗೆ ದರವನ್ನು ಸಾಧಿಸಿದರೆ ಅದು ದೇಶ ಮತ್ತು ಪ್ರಪಂಚಕ್ಕೆ ಒಂದು ಅದ್ಭುತವಾಗಿದೆ." ಭಾರತದ ತೆರಿಗೆ -ಜಿಡಿಪಿ ಅನುಪಾತವು ಹೆಚ್ಚಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಗೇಟ್ಸ್ ಹೇಳಿದ್ದಾರೆ. 

ಅಂತೆಯೇ, ಭಾರತದಲ್ಲಿ ಫೌಂಡೇಶನ್ ಕೈಗೊಂಡ ವಿವಿಧ ಕಲ್ಯಾಣ ಚಟುವಟಿಕೆಗಳನ್ನು ಗೃಹ ಮಂತ್ರಿ ಮೆಚ್ಚಿದರು. ಭಾರತದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಗೇಟ್ರನ್ನು ಸಿಂಗ್ ಒತ್ತಾಯಿಸಿದರು ಮತ್ತು ಗ್ರಾಮಗಳ ಅಭಿವೃದ್ಧಿಗೆ ಸಂಘಟನೆಯು ಗಮನಹರಿಸಬೇಕು ಎಂದು ಸಲಹೆ ನೀಡಿದರು. ಅಂತೆಯೇ, ಫೌಂಡೇಶನ್ ಭಾರತಕ್ಕೆ ರಚನಾತ್ಮಕ ಬೆಂಬಲವನ್ನು ನೀಡಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ.

Trending News