ಸಂಬರ್ಗಿ ನೋಡಿದಾಗಲೆಲ್ಲ ನನಗೆ ʼವಜ್ರಮುನಿʼಯವರು ನೆನಪಾಗ್ತಾರೆ..!

ಬಿಗ್‌ ಬಾಸ್‌ ಹೌಸ್‌ಗೆ ಇಂದು ವರನಟ ರಾಜ್‌ಕುಮಾರ್‌ ಅವರ ಎಂಟ್ರಿ ಆಗಿತ್ತು. ಹೌದು.. ಆಗಂತ ಸಾಕ್ಷಾತ್‌ ಅಣ್ಣವ್ರು ಬಂದಿದ್ದಿಲ್ಲ, ಬದಲಿಗೆ ಅರುಣ್‌ ಸಾಗರ್‌ ಅವರು ಸುದೀಪ್‌ ಅವರ ಸಲಹೆ ಮೇರೆಗೆ ನಟಸಾರ್ವಭೌಮನ ಧ್ವನಿಯನ್ನು ಅನುಕರಣೆ ಮಾಡಿ ಮನೆ ಮಂದಿಗೆ ಸಲಹೆ ನೀಡಿದ್ದು ತುಂಬಾ ಇಂಟ್ರೆಸ್ಟಿಂಗ್‌ ಆಗಿತ್ತು.

Written by - Krishna N K | Last Updated : Oct 2, 2022, 02:32 PM IST
  • ಬಿಗ್‌ ಬಾಸ್‌ ಹೌಸ್‌ಗೆ ಇಂದು ವರನಟ ರಾಜ್‌ಕುಮಾರ್‌ ಅವರ ಎಂಟ್ರಿ ಆಗಿತ್ತು.
  • ಅರುಣ್‌ ಸಾಗರ್‌ ಅವರು ಸುದೀಪ್‌ ಅವರ ಸಲಹೆ ಮೇರೆಗೆ ನಟಸಾರ್ವಭೌಮನ ಧ್ವನಿಯನ್ನು ಅನುಕರಣೆ ಮಾಡಿದರು
  • ರಾಜಣ್ಣ ಅವರ ಧ್ವನಿಯಲ್ಲಿ ಮನೆ ಮಂದಿಗೆ ಸಲಹೆ ನೀಡಿದ್ದು ತುಂಬಾ ಇಂಟ್ರೆಸ್ಟಿಂಗ್‌ ಆಗಿತ್ತು.
ಸಂಬರ್ಗಿ ನೋಡಿದಾಗಲೆಲ್ಲ ನನಗೆ ʼವಜ್ರಮುನಿʼಯವರು ನೆನಪಾಗ್ತಾರೆ..! title=

BBKS9 : ಬಿಗ್‌ ಬಾಸ್‌ ಹೌಸ್‌ಗೆ ಇಂದು ವರನಟ ರಾಜ್‌ಕುಮಾರ್‌ ಅವರ ಎಂಟ್ರಿ ಆಗಿತ್ತು. ಹೌದು.. ಆಗಂತ ಸಾಕ್ಷಾತ್‌ ಅಣ್ಣವ್ರು ಬಂದಿದ್ದಿಲ್ಲ, ಬದಲಿಗೆ ಅರುಣ್‌ ಸಾಗರ್‌ ಅವರು ಸುದೀಪ್‌ ಅವರ ಸಲಹೆ ಮೇರೆಗೆ ನಟಸಾರ್ವಭೌಮನ ಧ್ವನಿಯನ್ನು ಅನುಕರಣೆ ಮಾಡಿ ಮನೆ ಮಂದಿಗೆ ಸಲಹೆ ನೀಡಿದ್ದು ತುಂಬಾ ಇಂಟ್ರೆಸ್ಟಿಂಗ್‌ ಆಗಿತ್ತು.

ಗಾಂಧಿ ಪೇಟ ಧರಿಸಿ ಕುಳಿತಿದ ಅರುಣ್‌ ಸಾಗರ್‌ ಅವರಿಗೆ ಕಿಚ್ಚ ಸುದೀಪ್‌ ಅವರು, ರಾಜ್‌ಕುಮಾರ್‌ ಅವರು ಸಲಹೆ ಕೋಡ್ಬೇಕು ಅಂದ್ರೆ ಅವರ ಶೈಲಿಯಲ್ಲಿ ಯಾರು ಯಾರಿಗೆ ನೀವು ಸಲಹೆ ಕೋಡ್ತೀರಾ ಎಂದು ಕೇಳುತ್ತಾರೆ. ಆಗ ಅರುಣ್‌ ಅವರು ಮೊದಲು ರೂಪೇಶ್‌ ರಾಜಣ್ಣ ಅವರಿಗೆ, ನಾನು ಹೋರಾಟ ಮಾಡಿದ್ದೇನೆ ಆದ್ರೆ ಜೈಲಿಗೆ ಹೋಗಿಲ್ಲ ಅಂತೀರಾ.. ಆದ್ರೆ ಇಲ್ಲಿಗೆ ಬಂದ್ಮೇಲೆ ಜೈಲಿಗೆ ಹೋಗಲೇ ಬೇಕು ಎಂದರು. ನಂತರ ಆರ್ಯವರ್ಧನ ಗುರೂಜಿಗೆ, ಕೃಷ್ಣನ ತರ ಆಟ ಆಡ್ತಾರೆ, ಇವರೇ ಚೂಟ್ತಾರೆ ನಂತರ ತಲೆನೂ ಸವರ್ತಾರೆ ಎಂದು ಗುರೂಜಿ ಕಾಲೇಳೆದರು.

ಇದನ್ನೂ ಓದಿ: BBK 9 : ಬಿಗ್‌ಬಾಸ್‌ ಮನೆಯಿಂದ ಮೊದಲ ವಾರವೇ ಐಶ್ವರ್ಯ ಪಿಸ್ಸೆ ಔಟ್.!

ಇಷ್ಟಕ್ಕೆ ಸುಮ್ಮನಾಗದ ಅರುಣ್‌ ಅವರು, ಪ್ರಶಾಂತ್ ಸಂಬರ್ಗಿಯತ್ತ ನೋಡಿ, ನನಗೆ ಸಂಬರ್ಗಿಯವರನ್ನು ನೋಡಿದಾಗ ವಜ್ರಮುನಿ ನೆನಪಾಗ್ತಾರೆ ಎಂದರು ಅಲ್ಲದೆ, ಪಗಡೆಯಾಟದಲ್ಲಿ ಶಕುನಿ ಹೇಗೆ ಆಟವಾಡ್ತಾನಲ್ಲ ಹಾಗೇ ಆಟ ಆಡ್ತಾರೆ. ಆದ್ರೆ, ಅದನ್ನ ಇಲ್ಲಿ ಮಾತ್ರ ಆಡಿ ಜೀವನದಲ್ಲಿ ಆಡ್ಬೇಡಿ ಎಂದು ಪ್ರಶಾಂತ್‌ ಅವರಗೆ ಸಲಹೆ ನೀಡಿದರು. ಅರುಣ್‌ ಅವರ ಮಾತಿಗೆ ಸುದೀಪ್‌ ಅವರು ಬಿದ್ದು ಬಿದ್ದು ನಕ್ಕರು, ಅಲ್ಲದೆ ಮನೆ ಮಂದಿಯೂ ಸಹ ಎಂಜಾಯ್‌ ಮಾಡಿದರು.

ಇನ್ನು ಬೆಳಿಗ್ಗೆ ರಾಕೇಶ್ ಪಿಡ್ಸ್ ‌ ಪ್ರ್ಯಾಂಕ್‌ಗೆ ರೊಚ್ಚಿಗೆದ್ದ ಪ್ರಶಾಂತ್‌ ಸಂಬರ್ಗಿ ರಾಕೇಶ್‌ ಶರ್ಟ್‌ ಕಾಲರ್‌ ಪಟ್ಟಿ ಹಿಡಿದರು. ರಾಕೇಶ್ ಇದು ಸರಿ ಅಲ್ಲ. ನನ್ನ ಮಗನಿಗೂ ಇದೇ ರೀತಿಯ ಕಾಯಿಲೆ ಇತ್ತು. ಚಿಕಿತ್ಸೆ ಕೊಡಿಸಿ ಕೊಡಿಸಿ ಆತನಿಗೆ ಕಾಯಿಲೆ ಈಗ ಗುಣಮುಖ ಆಗಿದೆ. ನನ್ನ ಮಗನೇ ನನಗೆ ನೆನಪಿಗೆ ಬಂದ ಎಂದು ತಮ್ಮ ಮಗನನ್ನು ನೆನೆನದು ಗಳಗಳನೇ ಅತ್ತರು.

ಬಿಗ್‌ ಬಾಸ್‌ ಹೌಸ್‌ಗೆ ಇಂದು ವರನಟ ರಾಜ್‌ಕುಮಾರ್‌ ಅವರ ಎಂಟ್ರಿ ಆಗಿತ್ತು. ಹೌದು.. ಆಗಂತ ಸಾಕ್ಷಾತ್‌ ಅಣ್ಣವ್ರು ಬಂದಿದ್ದಿಲ್ಲ, ಬದಲಿಗೆ ಅರುಣ್‌ ಸಾಗರ್‌ ಅವರು ಸುದೀಪ್‌ ಅವರ ಸಲಹೆ ಮೇರೆಗೆ ನಟಸಾರ್ವಭೌಮನ ಧ್ವನಿಯನ್ನು ಅನುಕರಣೆ ಮಾಡಿ ಮನೆ ಮಂದಿಗೆ ಸಲಹೆ ನೀಡಿದ್ದು ತುಂಬಾ ಇಂಟ್ರೆಸ್ಟಿಂಗ್‌ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News