"2007ರ ವಿಶ್ವಕಪ್‌ ಗೆಲುವಿಗಿಂತ 2024ರ ವಿಶ್ವಕಪ್‌ ಗೆಲುವು ತುಂಬಾ ವಿಶೇಷ"- ರೋಹಿತ್‌ ಶರ್ಮಾ

Rohit Sharma: ಟೀಂ ಇಂಡಿಯಾದ ವಿಜಯೋತ್ಸವ ವಿಶಿಷ್ಟ ರೀತಿಯಲ್ಲಿ ಮುಕ್ತಾಯಗೊಂಡಿತು. ಸಾವಿರಾರು ಅಭಿಮಾನಿಗಳು ಪುಷ್ಪಗಳ ಸುರಿಮಳೆಗೈದ ಭಾರತೀಯ ಆಟಗಾರರನ್ನು ವಾಂಖೆಡೆ ಸ್ಟೇಡಿಯಂಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ವಿಶ್ವಕಪ್‌ಗಾಗಿ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ರೋಹಿತ್ ಸೇನೆಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.   

Written by - Zee Kannada News Desk | Last Updated : Jul 6, 2024, 08:05 AM IST
  • ಬಿಸಿಸಿಐ ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
  • 125 ಕೋಟಿ ರೂಪಾಯಿಗಳ ಬಹುಮಾನದ ಚೆಕ್ ಅನ್ನು ಆಟಗಾರರಿಗೆ ಹಸ್ತಾಂತರಿಸಲಾಯಿತು.
  • 2007ರ ಟಿ20 ವಿಶ್ವಕಪ್ ಗಿಂತ 2024ರ ವಿಶ್ವಕಪ್ ಗೆಲ್ಲುವುದು ವಿಶೇಷ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
"2007ರ ವಿಶ್ವಕಪ್‌ ಗೆಲುವಿಗಿಂತ 2024ರ ವಿಶ್ವಕಪ್‌ ಗೆಲುವು ತುಂಬಾ ವಿಶೇಷ"- ರೋಹಿತ್‌ ಶರ್ಮಾ title=

Rohit Sharma: ಟೀಂ ಇಂಡಿಯಾದ ವಿಜಯೋತ್ಸವ ವಿಶಿಷ್ಟ ರೀತಿಯಲ್ಲಿ ಮುಕ್ತಾಯಗೊಂಡಿತು. ಸಾವಿರಾರು ಅಭಿಮಾನಿಗಳು ಪುಷ್ಪಗಳ ಸುರಿಮಳೆಗೈದ ಭಾರತೀಯ ಆಟಗಾರರನ್ನು ವಾಂಖೆಡೆ ಸ್ಟೇಡಿಯಂಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ವಿಶ್ವಕಪ್‌ಗಾಗಿ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ರೋಹಿತ್ ಸೇನೆಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು. 

ಬಿಸಿಸಿಐ ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದಲ್ಲದೆ, 125 ಕೋಟಿ ರೂಪಾಯಿಗಳ ಬಹುಮಾನದ ಚೆಕ್ ಅನ್ನು ಆಟಗಾರರಿಗೆ ಹಸ್ತಾಂತರಿಸಲಾಯಿತು. 

ಇದನ್ನೂ ಓದಿ: "ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ" ಎಂದ ಸುನಿಲ್‌ ಗವಾಸ್ಕರ್‌..!

ದೇಶಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟ ಎರಡನೇ ನಾಯರಾಗಿ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. 2007 ರಲ್ಲಿ, ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡವು ಮೊದಲ ಬಾರಿಗೆ ಕಪ್ ಗೆದ್ದಿತು. ಆದರೆ ಆ ಪಂದ್ಯದಲ್ಲಿ ರೋಹಿತ್ ತಂಡದ ಸದಸ್ಯರಾಗಿದ್ದರು. ಬ್ಯಾಟರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆದರೆ 2007ರ ಟಿ20 ವಿಶ್ವಕಪ್ ಗಿಂತ 2024ರ ವಿಶ್ವಕಪ್ ಗೆಲ್ಲುವುದು ವಿಶೇಷ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. "2007ರ ವಿಶ್ವಕಪ್‌ನ ಗೆಲುವು ವಿಭಿನ್ನ ಭಾವನೆಯಾಗಿತ್ತು. 2007ರ ಗೆಲುವನ್ನು ನಾನು ಎಂದಿಗೂ ಮರೆಯುವುದಿಲ್ಲ. ಇದು ನನ್ನ ಮೊದಲ ವಿಶ್ವಕಪ್. ಆದರೆ 2024ರ ವಿಶ್ವಕಪ್ ನನಗೆ ತುಂಬಾ ವಿಶೇಷ. ಏಕೆಂದರೆ ನಾನು ತಂಡವನ್ನು ಮುನ್ನಡೆಸಿದ್ದೆ. ಇದು ನನಗೆ ದೊಡ್ಡ ವಿಷಯ. ಇದು ಸಾಕಷ್ಟು ಉತ್ಸಾಹವನ್ನು ತರುತ್ತದೆ. ಇಡೀ ದೇಶವೇ ಹಾಗೆ ಭಾವಿಸುತ್ತಿದೆ. ಇಂತಹ ಸಾಧನೆ ಮಾಡಿರುವುದು ನಮಗೆ ಅತೀವ ಸಂತಸ ತಂದಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News