Sun Transit: ಕೇವಲ 2 ದಿನಗಳ ನಂತರ ಈ ರಾಶಿಯವರ ಅದೃಷ್ಟ ಬೆಳಗಲಿದೆ; ಅದೃಷ್ಟದ ಜೊತೆಗೆ ಬಡ್ತಿ ಸಿಗಲಿದೆ!

ಧನು ರಾಶಿ ಮತ್ತು ಲಗ್ನ ರಾಶಿಯ ಜನರು ಈ ತಿಂಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಮೇಲಧಿಕಾರಿಯ ಆಶೀರ್ವಾದ ನಿಮ್ಮ ಮೇಲಿರಲಿದೆ ಮತ್ತು ನಿಮಗೆ ಪ್ರೋತ್ಸಾಹ, ಹಬ್ಬದ ಬೋನಸ್ ಸಿಗಬಹುದು.

Written by - Puttaraj K Alur | Last Updated : Oct 15, 2022, 08:10 AM IST
  • ಧನು & ಲಗ್ನ ರಾಶಿಯ ಜನರು ಈ ತಿಂಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ
  • ಬಡ್ತಿಗಾಗಿ ಬಹಳ ದಿನಗಳ ಕಾಯುವಿಕೆ ಮುಗಿದು ನಿಮಗೆ ನೆಮ್ಮದಿ ದೊರೆಯಲಿದೆ
  • ಈ ಅವಧಿಯಲ್ಲಿ ಧನು ರಾಶಿಯವರ ಮುಖ್ಯ ಗಮನವು ಲಾಭದ ಮೇಲಿರುತ್ತದೆ
Sun Transit: ಕೇವಲ 2 ದಿನಗಳ ನಂತರ ಈ ರಾಶಿಯವರ ಅದೃಷ್ಟ ಬೆಳಗಲಿದೆ; ಅದೃಷ್ಟದ ಜೊತೆಗೆ ಬಡ್ತಿ ಸಿಗಲಿದೆ! title=
ಈ ರಾಶಿಯವರ ಅದೃಷ್ಟ ಬೆಳಗಲಿದೆ

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಸೂರ್ಯನ ರಾಶಿಚಕ್ರದ ಬದಲಾವಣೆಯು ವಿಶೇಷ ಪ್ರಾಮುಖ್ಯತೆ ಹೊಂದಿದೆ. ಈ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ನಂತರ ಸುಮಾರು 1 ತಿಂಗಳ ಕಾಲ ಅಲ್ಲಿಯೇ ಇರುತ್ತಾನೆ. ಈ ಬಾರಿ ಸೂರ್ಯದೇವನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ, ಅಂದರೆ ದೀಪಾವಳಿಗೆ ಸುಮಾರು 1 ವಾರ ಮುಂಚಿತವಾಗಿ ಅಂದರೆ ಅಕ್ಟೋಬರ್ 17ರಂದು ಇಲ್ಲಿ ಪ್ರವೇಶಿಸಿದ ತಕ್ಷಣ ಆತನ ದುರ್ಬಲನಾಗುತ್ತಾನೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವುದರಿಂದ ಧನು ರಾಶಿ ಮತ್ತು ಇತರ ಲಗ್ನ ರಾಶಿಯ ಮೇಲೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯಿರಿ.

ಧನು ರಾಶಿ ಮತ್ತು ಲಗ್ನ ರಾಶಿಯ ಜನರು ಈ ತಿಂಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಮೇಲಧಿಕಾರಿಯ ಆಶೀರ್ವಾದ ನಿಮ್ಮ ಮೇಲಿರಲಿದೆ. ನಿಮಗೆ ಪ್ರೋತ್ಸಾಹ, ಹಬ್ಬದ ಬೋನಸ್ ಸಿಗಬಹುದು. ಬಹಳ ದಿನಗಳಿಂದ ಬಡ್ತಿಗಾಗಿ ಕಾಯುತ್ತಿದ್ದವರ ಕಾಯುವಿಕೆ ಮುಗಿದು ನೆಮ್ಮದಿ ಸಿಗಲಿದೆ. ಉತ್ತಮ ಜನರೊಂದಿಗೆ ನೀವು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಸಭೆ ಅಥವಾ ಸೆಮಿನಾರ್ ಮೂಲಕ ನೀವು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಬಹುದು. ಯುವಕರು ತಮ್ಮ ಅಧ್ಯಯನ ಮುಂದುವರಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಪರಿಷ್ಕರಣೆಯತ್ತ ಗಮನ ಹರಿಸಬೇಕು. ನಿಮ್ಮ ಶ್ರಮದ ಫಲವನ್ನು ಪಡೆಯುವ ಸಮಯ ಬಂದಿದ್ದು, ಶೀಘ್ರದಲ್ಲೇ ನೀವು ಉನ್ನತ ಹುದ್ದೆಗೆ ಆಯ್ಕೆಯಾಗಬಹುದು.

ಇದನ್ನೂ ಓದಿ: Swapna Shastra : ಹಾವುಗಳು ಕನಸಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡರೆ ಏನು ಅರ್ಥ ಗೊತ್ತೇ!

ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ

ಈ ಅವಧಿಯಲ್ಲಿ ಧನು ರಾಶಿ ಜನರ ಮುಖ್ಯ ಗಮನವು ಲಾಭದ ಮೇಲೆ ಇರುತ್ತದೆ. ಹೆಚ್ಚು ಕೆಲಸ ಮಾಡುವುದರಿಂದ ನೀವು ಲಾಭ ಗಳಿಸಬಹುದು. ಈ ಮಧ್ಯೆ ನಿಮ್ಮ ಎಲ್ಲಾ ಗಮನವು ಹೆಚ್ಚಿನ ಲಾಭ ಗಳಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಬಹಳ ದಿನಗಳಿಂದ ವ್ಯವಹಾರಕ್ಕಾಗಿ ಕಾಯುತ್ತಿದ್ದ ವ್ಯಾಪಾರಿಗಳಿಗೆ ಲಾಭವಾಗಲಿದೆ. ನಿಮ್ಮ ಜನ್ಮದಿನಕ್ಕೆ ನಿಮ್ಮ ಸ್ನೇಹಿತರು, ಸಹೋದ್ಯೋಗಿ ಅಥವಾ ಮಗನಿಂದ ನೀವು ಅದ್ಭುತ ಉಡುಗೊರೆ ಪಡೆಯಬಹುದು. ಮನೆಗೆ ಹೊಸ ಅತಿಥಿಯ ಆಗಮನದ ಸಂತೋಷದ ಬಗ್ಗೆ ನೀವು ಒಳ್ಳೆಯ ಸುದ್ದಿ ಪಡೆಯಬಹುದು, ಇದು ನಿಮ್ಮ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಶತ್ರುಗಳ ಕಾಟದಿಂದ ಮುಕ್ತಿ

ಆರೋಗ್ಯದ ದೃಷ್ಟಿಯಿಂದ ಈ ಸಮಯ ತುಂಬಾ ಒಳ್ಳೆಯದು. ದೀರ್ಘಕಾಲದವರೆಗೆ ಜ್ವರ ಅಥವಾ ಯಾವುದೇ ರೀತಿಯ ಚರ್ಮದ ಅಲರ್ಜಿಯಿಂದ ತೊಂದರೆಗೊಳಗಾದವರು, ಶೀಘ್ರವೇ ಮುಕ್ತಿ ಪಡೆಯುತ್ತಾರೆ. ನೀವು ಸಮಾಜ ಸೇವೆ ಅಥವಾ ಯಾವುದೇ ಕಲ್ಯಾಣ ಕಾರ್ಯದಲ್ಲಿ ಭಾಗವಹಿಸಬಹುದು. ಇದು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ನಿಮಗೆ ಸಿಗುತ್ತದೆ. ನಿಮ್ಮ ಪ್ರಯತ್ನ ಹೇಗಿರುತ್ತದೋ ಅದೇ ರೀತಿ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಯಶಸ್ಸು ನಿಮ್ಮ ಶತ್ರುಗಳಿಗೆ ತಕ್ಕ ಉತ್ತರವಾಗಿರುತ್ತದೆ.  

ಇದನ್ನೂ ಓದಿ: Narak Chaturdashi 2022: ನರಕ ಚತುರ್ದಶಿಯ ದಿನ ಈ ಒಂದು ಕೆಲಸ ಮಾಡಿ ನರಕ ಯಾತನೆಯಿಂದ ಮುಕ್ತಿ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News