Amruthadhare Serial: ಅಮೃತಧಾರೆ ಧಾರಾವಾಹಿಗೆ ಹೊಸ ನಟಿಯ ಎಂಟ್ರಿ! ಯಾರು ಗೊತ್ತಾ ಆ ಚೆಲುವೆ?

Amruthadhare Serial Updates: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಈಗಾಗಲೇ ಎಲ್ಲರ ಮನಗೆದ್ದಿದೆ.. ಈ ಸೀರಿಯಲ್‌ನಲ್ಲಿ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂದಿದ್ದು.. ನಾಯಕನಾಗಿ ನಟರಾಜ ನಟ ರಂಗ ನಟಿಸುತ್ತಿದ್ದಾರೆ.. ಸಾಕಷ್ಟು ಇಂಟ್ರೆಸ್ಟಿಂಗ್‌ ಟ್ವಿಸ್ಟ್‌ಗಳನ್ನು ಒಳಗೊಂಡಿರುವ ಈ ಧಾರವಾಹಿಯ ಹಿಂದಿನ ಸಂಚಿಕೆ ಮಾಹಿತಿಯನ್ನು ಇದೀಗ ತಿಳಿಯೋಣ.. 

1 /5

ಗೌತಮ್‌ ಪತ್ನಿ ಭೂಮಿಕಾಳನ್ನು ಸುತ್ತಾಡಲು ಕರೆದುಕೊಂಡಿರುತ್ತಾರೆ.. ಹೇಗಾದರೂ ಮಾಡಿ ಇಂದು ತಮ್ಮ ಪ್ರೀತಿಯನ್ನು ಹೇಳಿಕೊಂಡು ಮತ್ತು ಕೊಡಬೇಕು ಎಂದು ಆನಂದ್​ ಷರತ್ತೊಂದನ್ನು​ ಹಾಕಿರುತ್ತಾನೆ..   

2 /5

ಗೌತಮ್‌ ಪಾರ್ಕ್‌ಗೆ ಹೋದ ನಂತರ ಆನಂದ್‌ಗೆ ಕಾಲ್‌ ಮಾಡಿ ನಾನು ಈಗ ಭೂಮಿಕಾ ಅವರನ್ನು ಪಾರ್ಕ್​ಗೆ ಕರೆದುಕೊಂಡು ಬಂದಿದ್ದೇನೆ.. ಮುಂದೆ ಏನು ಮಾಡೋದು.. ಏನ್‌ ಹೇಳೋದು ಅಂತಾ ನಂಗೆ ತಿಳಿಯುತ್ತಿಲ್ಲ ಎಂದು ಅವನನ್ನು ಕೇಳುತ್ತಾ ಇರುತ್ತಾನೆ.   

3 /5

ಅಷ್ಟರಲ್ಲಿ ಒಬ್ಬ ಬಂದು ಸರ್ ನಿಮ್ಮ ಕಾರ್​ನಾ ಸ್ವಲ್ಪ ಮುಂದೆ ತಗೋಳೀ ಇಲ್ಲಿ ಪಾರ್ಕ್‌ ಮಾಡುವಂತಿಲ್ಲ ಎನ್ನುತ್ತಾನೆ..  ಆಗ ಒಂದು ಕೈಯಲ್ಲಿ ಮೊಬೈಲ್‌ ಹಾಗೇ ಹಿಡಿದುಕೊಂಡು ಕಾರ್‌ ಟರ್ನ್‌ ಮಾಡುವಾಗ ಯಾರೋ ಡಿಕ್ಕಿ ಹೊಡೆಯುತ್ತಾರೆ..   

4 /5

ಆ ಕಾರ್‌ಗೆ ಡಿಕ್ಕಿಯಾಗಿದ್ದು ಬೇರೆ ಯಾರೂ ಅಲ್ಲ.. ಮಾನ್ಯ.. ಆಗ ಯಾರೋ ಅಲ್ಲ ಮಾನ್ಯ ಬಿದ್ದಿದ್ದಾಳೆ ಎನ್ನುವ ಆತಂಕ ಗೌತಮ್‌ಗೆ ಹೆಚ್ಚಾಗುತ್ತದೆ.. ನಂತರ ಅವಳನ್ನು ಕಾರ್‌ ಮೇಲೆ ಕೂರಿಸುವಷ್ಟರಲ್ಲಿ ಭೂಮಿಕಾ ಅಲ್ಲಿಗೆ ಬಂದಿರುತ್ತಾಳೆ.. ಆದರೂ ಗೌತಮ್‌ ಆಘಾತಗೊಂಡಿರುತ್ತಾರೆ..   

5 /5

ನಂತರ ಮಾನ್ಯಾಳನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಎಚ್ಚರ ಆದ ತಕ್ಷಣ ನಾವು ಹೊರಡೋಣ ಅಂತ ಭೂಮಿಕಾ ಗೌತಮ್‌ ಗೆ ಹೇಳುತ್ತಾಳೆ. ಆದರೆ ಅದಕ್ಕೂ ಮೊದಲು ನಾವು ಇಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ಯೋಚಿಸಿ ಶಕುಂತಲಾಗೆ ಕಾಲ್ ಮಾಡಿ ನಡೆದ ವಿಷಯ ತಿಳಿಸುತ್ತಾನೆ.. ಎಲ್ಲಾರು ಗಾಬರಿಯಾಗಿರುತ್ತಾರೆ.. ಆದ್ರೆ ಇಲ್ಲಿ ಟ್ವಿಸ್ಟ್‌ ಏನಪ್ಪ ಅಂದ್ರೆ ಈ ಮಾನ್ಯ ಅನ್ನೋ ಕ್ಯಾರೆಕ್ಟರ್‌ ಯಾರು?