Coriander Remedy: ಮನೆಯಲ್ಲಿರುವ ಕೊತ್ತಂಬರಿ ಬೀಜಕ್ಕೆ ನಿಮ್ಮ ಅದೃಷ್ಟನ್ನೇ ಬದಲಾಯಿಸುವ ತಾಕತ್ತಿದೆ

Coriander Upay: ನಮ್ಮ ಮನೆಯ ಅಡುಗೆ ಮನೆಯಲ್ಲಿ ಸಿಗುವ ಕೆಲ ಸಾಂಬಾರ ಪದಾರ್ಥಗಳು ಕೂಡ ನಮ್ಮ ಅದೃಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? 

Coriander Upay: ನಮ್ಮ ಮನೆಯ ಅಡುಗೆ ಮನೆಯಲ್ಲಿ ಸಿಗುವ ಕೆಲ ಸಾಂಬಾರ ಪದಾರ್ಥಗಳು ಕೂಡ ನಮ್ಮ ಅದೃಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಅವುಗಳನ್ನು ಬಳಸುವುದರಿಂದ ಮನುಷ್ಯನ ಜೀವನದಲ್ಲಿ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ. ಇಂತಹ ಪದಾರ್ಥಗಳಲ್ಲಿ ಸಂಪೂರ್ಣ ಒಣ ಕೊತ್ತಂಬರಿ ಬೀಜಗಳು ಅಥವಾ ಹಸಿರು ಕೊತ್ತಂಬರಿ ಶಾಮೀಲಾಗಿದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಮನೆಯ ಏಳ್ಗೆಗೆ ಕಾರಣವಾಗುತ್ತದೆ.

 

ಇದನ್ನೂ ಓದಿ-Vastu Tips: ಜಾತಕದಲ್ಲಿನ ರಾಹು, ಕೇತು ಹಾಗೂ ಶನಿ ದೋಷದಿಂದ ಮುಕ್ತಿ ಪಡೆಯಲು ಈ ಉಪಾಯ ಅನುಸರಿಸಿ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /5

1. ದೀರ್ಘ ಕಾಲದಿಂದ ನಿಮಗೆ ಬರಬೇಕಿದ್ದ ಹಣ, ಎಲ್ಲಿಯೋ ಸಿಲುಕಿಕೊಂಡಿದ್ದರೆ, ನೀವು ಕೊತ್ತಂಬರಿ ಸೊಪ್ಪಿನ ಪರಿಹಾರವನ್ನು ಅನುಸರಿಸಬಹುದು. ಶುಕ್ರವಾರದಂದು ನಿಮಗೆ ಯಾರಿಂದ ಹಣ ಬರಬೇಕಾಗಿದೆಯೋ ಅವರ ಹೆಸರನ್ನು ಕಾಗದದ ಮೇಲೆ ಬರೆದು, ಅದರಲ್ಲಿ  ಒಣ ಕೊತ್ತಂಬರಿ ಬೀಜಗಳನ್ನು ಹಾಕಿ ಅದನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಬಳಿ ಮರಳುತ್ತದೆ.  

2 /5

2. ಧನಾಗಮನವನ್ನು ಹೆಚ್ಚಿಸಲು, ಯಾವುದೇ ತಿಂಗಳ ಶುಕ್ಲ ಪಕ್ಷದಂದು ಒಣ ಕೊತ್ತಂಬರಿ ಬೀಜಗಳನ್ನು ಮಣ್ಣಿನ ಪಾತ್ರೆಯಲ್ಲಿ ಇರಿಸಿ. ಅದರಲ್ಲಿ ಕೆಲವು ನಾಣ್ಯಗಳನ್ನು ಹಾಕಿ ಉತ್ತರ ದಿಕ್ಕಿನಲ್ಲಿಡಿ. ಮಡಕೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ಪ್ರಾರಂಭಿಸಿದಾಗ, ಅದರಲ್ಲಿ ಇರಿಸಲಾದ ನಾಣ್ಯಗಳನ್ನು ಹೊರತೆಗೆದು ಅದನ್ನು ತಿಜೋರಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗತೊಡಗುತ್ತದೆ.  

3 /5

3. ಮನೆಯಲ್ಲಿ ಆಗಾಗ ಮನಸ್ತಾಪ ಉಂಟಾಗಿ ಕುಟುಂಬ ಸದಸ್ಯರಲ್ಲಿ ಯಾವಾಗಲು ವೈಮನಸ್ಯದ ವಾತಾವರಣವಿದ್ದರೆ, ಸ್ವಲ್ಪ ಒಣ ಕೊತ್ತಂಬರಿ ಬೀಜಗಳನ್ನು ಮನೆಯ ಪೂರ್ವ ದಿಕ್ಕಿಗೆ ಇಡಿ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಹಾಗೂ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.  

4 /5

4. ಕೆಂಪು ಬಟ್ಟೆಯಲ್ಲಿ ಕಟ್ಟಿದ ಒಣ ಕೊತ್ತಂಬರಿ ಸೊಪ್ಪನ್ನು ಹನುಮಂತನಿಗೆ ಅರ್ಪಿಸಿದರೆ ಎಲ್ಲಾ ರೀತಿಯ ತೊಂದರೆಗಳಿಂದ ಪರಿಹಾರ ಸಿಗುತ್ತದೆ. ಇದೆ ವೇಳೆ, ಈ ಪರಿಹಾರದೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿ. ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.  

5 /5

5. ಮನೆಯ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೊತ್ತಂಬರಿ ಸೊಪ್ಪನ್ನು ಸಹ ಬಳಸಬಹುದು. ಬುಧವಾರ ಹಸುವಿಗೆ ಹಸಿರು ಕೊತ್ತಂಬರಿ ಸೊಪ್ಪನ್ನು ತಿನ್ನಿಸುವುದರಿಂದ ಹಣದ ಬಾಧೆ ದೂರವಾಗಿ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.