Good Luck Sign: ಬೆಳಗ್ಗೆ ಈ ವಸ್ತುಗಳು ಕಾಣಿಸಿಕೊಂಡರೆ ಅದೃಷ್ಟ, ಯಶಸ್ಸಿನ ಜೊತೆಗೆ ಧನಲಾಭ!

Good Luck Sign of Morning: ಬೆಳಗ್ಗೆ ನಾವು ನೋಡುವ ಕೆಲವು ದೃಶ್ಯಗಳು ಅಥವಾ ಚಿಹ್ನೆಗಳು ಅದೃಷ್ಟವನ್ನು ತರುತ್ತವೆ.​ ಮುಂದಿನ ದಿನಗಳಲ್ಲಿ ಉತ್ತಮ ಯಶಸ್ಸು, ಸಂಪತ್ತು ಅಥವಾ ಒಳ್ಳೆಯ ಸುದ್ದಿಯನ್ನು ಸೂಚಿಸುತ್ತವೆ.

Good Luck Sign: ದಿನದ ಆರಂಭವು ಚೆನ್ನಾಗಿದ್ದರೆ ಇಡೀ ದಿನವು ಉತ್ತಮವಾಗಿರುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಇರುತ್ತದೆ, ಧನ ಲಾಭವಾಗುತ್ತದೆ. ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಬೆಳಗ್ಗೆ ಕಂಡುಬರುವ ಕೆಲವು ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಚಿಹ್ನೆಗಳು ಮುಂದಿನ ದಿನಗಳಲ್ಲಿ ಉತ್ತಮ ಯಶಸ್ಸು, ಸಂಪತ್ತು ಅಥವಾ ಒಳ್ಳೆಯ ಸುದ್ದಿಯನ್ನು ಸೂಚಿಸುತ್ತವೆ. ಬೆಳಗ್ಗೆ ಯಾವ ವಿಶೇಷ ಚಿಹ್ನೆಗಳು ನಿಮಗೆ ಶುಭದಾಯಕವೆಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮದುವೆಯಾದ ಮಹಿಳೆಯನ್ನು ಮುಂಜಾನೆ ಮೇಕಪ್ ಹಾಕಿಕೊಂಡು ನೋಡುವುದು ಅಥವಾ ಪೂಜೆಯ ತಟ್ಟೆಯೊಂದಿಗೆ ದೇವಸ್ಥಾನಕ್ಕೆ ಬಂದು ಹೋಗುವುದನ್ನು ನೋಡುವುದು ತುಂಬಾ ಶ್ರೇಯಸ್ಕರ. ನೀವು ಶೀಘ್ರದಲ್ಲೇ ದೊಡ್ಡ ಲಾಭವನ್ನು ಪಡೆಯಲಿದ್ದೀರಿ ಎಂಬುದನ್ನು ಇದು ಹೇಳುತ್ತದೆ.

2 /5

ಬೆಳಗ್ಗೆ ಕಣ್ಣು ತೆರೆದ ತಕ್ಷಣ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿದರೆ ಅದು ತುಂಬಾ ಶುಭ ಸೂಚನೆ. ನೀವೂ ಸಹ ಹಕ್ಕಿಳ ಚಿಲಿಪಿಲಿ ಸದ್ದು ಕೇಳಿದರೆ ಇಡೀ ದಿನವು ಉತ್ತಮವಾಗಿ ನಡೆಯುವುದಲ್ಲದೆ, ಕೆಲಸದಲ್ಲಿ ಯಶಸ್ಸು ಇರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.  

3 /5

ಮುಂಜಾನೆ ಮನೆಯಿಂದ ಹೊರ ಬಂದ ಕೂಡಲೇ ಯಾರಾದರೂ ನೆಲ ಗುಡಿಸುತ್ತಿರುವುದನ್ನು ಕಂಡರೆ ಬೇಗ ಹಣ ಸಿಗುತ್ತದೆ ಎಂದು ಸೂಚಿಸುತ್ತದೆ. ಇದು ಲಕ್ಷ್ಮಿದೇವಿಯ ಆಶೀರ್ವಾದದ ಸಂಕೇತವಾಗಿದೆ. ಮಹಿಳೆ ಕಸ ಗುಡಿಸುವದನ್ನು ನೀವು ನೋಡಿದರೆ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

4 /5

ನೀವು ಬೆಳಗ್ಗೆ ಮನೆಯಿಂದ ಹೊರಡುವ ತಕ್ಷಣ ಹಾಲು ತುಂಬಿದ ಪಾತ್ರೆಯನ್ನು ನೋಡಿದರೆ, ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಸ್ಪಷ್ಟವಾಗಿ ತಾಯಿ ಲಕ್ಷ್ಮಿದೇವಿಯ ಕೃಪೆಯ ಸಂಕೇತವಾಗಿದೆ. ಈ ರೀತಿ ಇರುವುದರಿಂದ ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಪಡೆಯುವ ಸಾಧ್ಯತೆಯಿದೆ. ಇದು ನಿಮ್ಮ ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ತರುತ್ತದೆ.

5 /5

ಬೆಳಗ್ಗೆ ತೆಂಗಿನಕಾಯಿ ಅಥವಾ ಶಂಖವನ್ನು ನೋಡುವುದು ತುಂಬಾ ಮಂಗಳಕರ. ಶಂಖವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ, ವಿಷ್ಣುವು ಯಾವಾಗಲೂ ಶಂಖವನ್ನು ಧರಿಸುತ್ತಾನೆ. ಅದೇ ರೀತಿ ತಾಯಿ ಲಕ್ಷ್ಮಿದೇವಿಯೂ ಶಂಖವನ್ನು ತುಂಬಾ ಪ್ರೀತಿಸುತ್ತಾಳೆ. ಬೆಳಗ್ಗೆ ಶಂಖವನ್ನು ನೋಡಿದರೆ, ವಿಷ್ಣು ಮತ್ತು ಲಕ್ಷ್ಮಿದೇವಿಯ ಅನುಗ್ರಹದಿಂದ ಅದೃಷ್ಟವು ತೆರೆದುಕೊಳ್ಳುತ್ತದೆ. ಅಪಾರ ಯಶಸ್ಸು, ಸಂಪತ್ತು ಮತ್ತು ಸಂತೋಷವನ್ನು ಪಡೆಯುವ ಸಾಧ್ಯತೆಗಳಿವೆ. (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)