Photos: ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ!

ಚಾಲಕರ ಅತಿಯಾದ ವೇಗ ಹಾಗೂ ನಿದ್ದೆ ಮಪರಿನಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 
 

  • Mar 23, 2019, 10:56 AM IST

ಲಾರಿ ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ  ಸಾವನ್ನಪ್ಪಿದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಬಳಿ ಶನಿವಾರ ಮುಂಜಾನೆ ನಡೆದಿದೆ. 
 

1 /4

ಸಾಗರದ ಕಡೆ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ, ಶಿವಮೊಗ್ಗ ಕಡೆ ತೆರಳುತ್ತಿದ್ದ ಡಾಂಬರ್ ತುಂಬಿದ ಲಾರಿ ಸಾಗರ ತಾಲೂಕಿನ ಐಗಿನಬೈಲು ಕ್ರಾಸ್ ಬಳಿ ಮುಖಾ ಮುಖಿ ಡಿಕ್ಕಿಯಾಗಿದ್ದು, ಲಾರಿಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. (Photos Courtesy: ANI)

2 /4

ಚಾಲಕರ ಅತಿಯಾದ ವೇಗ ಹಾಗೂ ನಿದ್ದೆ ಮಪರಿನಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.   

3 /4

ಅಪಘಾತದಲ್ಲಿ ಲಾರಿ ಚಾಲಕ ಸಚಿನ್, ಕ್ಲಿನರ್ ಮಲಕಪ್ಪ ಹಾಗೂ ಟ್ಯಾಂಕರ್ ಚಾಲಕ ಲೋಕೇಶ್ ಎಂದು ಗುರುತಿಸಲಾಗಿದ್ದು, ಗಂಭಿರವಾಗಿ ಗಾಯಗೊಂಡ ಉಮೇಶ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

4 /4

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.