ಕೋಟಿಗಳ ಸರದಾರರು ಈ 7 ಭಾರತೀಯ ಕ್ರಿಕೆಟಿಗರು , ಆದರೂ ಮಾಡುತ್ತಿದ್ದಾರೆ ಸರ್ಕಾರಿ ನೌಕರಿ

ತಿದಿನ ಕೋಟಿಗಟ್ಟಲೆ ಸಂಪಾದಿಸುವ ಈ ಕ್ರಿಕೆಟಿಗರು, ಸರ್ಕಾರಿ ಉದ್ಯೋಗಗಳನ್ನೂ ಮಾಡುತ್ತಾರೆ. ಇದಷ್ಟೇ ಅಲ್ಲ, ತಮ್ಮ ಆಟದ ಜೊತೆಗೆ ಈ ಜವಾಬ್ದಾರಿಯನ್ನು ನಿರ್ವಹಿಸುವ ಇತರ ಆಟಗಾರರೂ ಇದ್ದಾರೆ. 
 

ನವದೆಹಲಿ : ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಅವರ ಆಟದಿಂದ ಪ್ರಪಂಚದಲ್ಲಿ ಪ್ರಸಿದ್ಧರಾಗಿದ್ದಾರೆ. ಆಟದ ಮೂಲಕ ಖ್ಯಾತಿ ಪಡೆದಿರುವುದಲ್ಲದೆ, ಅವರ ಗಳಿಕೆಯಿಂದಾಗಿಯೂ ಚರ್ಚೆಯಲ್ಲಿದ್ದಾರೆ. ಪ್ರತಿದಿನ ಕೋಟಿಗಟ್ಟಲೆ ಸಂಪಾದಿಸುವ ಈ ಕ್ರಿಕೆಟಿಗರು, ಸರ್ಕಾರಿ ಉದ್ಯೋಗಗಳನ್ನೂ ಮಾಡುತ್ತಾರೆ. ಇದಷ್ಟೇ ಅಲ್ಲ, ತಮ್ಮ ಆಟದ ಜೊತೆಗೆ ಈ ಜವಾಬ್ದಾರಿಯನ್ನು ನಿರ್ವಹಿಸುವ ಇತರ ಆಟಗಾರರೂ ಇದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಬಹಳ ಕಡಿಮೆ ಸಮಯದಲ್ಲಿ, ಯುಜ್ವೇಂದ್ರ ಚಾಹಲ್ ಇಡೀ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ತನ್ನ ಸ್ಪಿನ್‌ನ ಮ್ಯಾಜಿಕ್‌ನಿಂದ, ಚಹಲ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಚಹಲ್ ಕ್ರಿಕೆಟ್ ಆಡುವುದರೊಂದಿಗೆ, ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 

2 /7

ಉಮೇಶ್ ಯಾದವ್ ಹಲವು ಬಾರಿ ಟೀಂ ಇಂಡಿಯಾವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಲ್ಯದಿಂದಲೂ, ಉಮೇಶ್ ಪೊಲೀಸ್ ಮತ್ತು ಸೇನೆಯಲ್ಲಿ ಕೆಲಸ ಮಾಡಲು ಬಯಸಿದ್ದರು.  ಆದರೆ ಅದು ಸಾಧ್ಯವಾಗಲಿಲ್ಲ. ಅವರಿಗೆ 2017 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಯನ್ನು ನೀಡಲಾಯಿತು.  

3 /7

ಭಾರತ ಮೊದಲ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಕಪಿಲ್ ದೇವ್ ನಾಯಕರಾಗಿದ್ದರು. ಅವರಿಗೆ ಭಾರತೀಯ ಸೇನೆಯಲ್ಲಿ 2008 ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಯಿತು. ಇದಲ್ಲದೇ, ಕಪಿಲ್ ದೇವ್ 2019 ರಲ್ಲಿ ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ನೇಮಕಗೊಂಡಿದ್ದಾರೆ .   

4 /7

2007 ರ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿದ್ದಾಗ, ಜೋಗಿಂದರ್ ಶರ್ಮಾ ಕೊನೆಯ ಓವರ್ ಆಡಿ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ದೀರ್ಘಕಾಲ ತಂಡದ ಭಾಗವಾಗಿ ಉಳಿಯಲಿಲ್ಲ. ಆದರೆ ಈಗ ಜೋಗಿಂದರ್ ಹರಿಯಾಣ ಪೊಲೀಸ್ ನಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ.  

5 /7

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಸ್ಪಿನ್ ಬೌಲರ್‌ಗಳಲ್ಲಿ ಹರ್ಭಜನ್ ಹೆಸರು ಮೊದಲು ಬರುತ್ತದೆ. ಈ ಆಟಗಾರ ಟೆಸ್ಟ್‌ಗಳಲ್ಲಿ 700 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ ಮತ್ತು ಈ ಕೊಡುಗೆಗಾಗಿ ಅವರನ್ನು ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿಯನ್ನಾಗಿ ಮಾಡಲಾಗಿದೆ.  

6 /7

ಸಚಿನ್ ತೆಂಡೂಲ್ಕರ್ ಅವರ ಹೆಸರು ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಮೊದಲ ಸ್ಥಾನದಲ್ಲಿದೆ. ಸಚಿನ್ ಅವರ ಯಶಸ್ಸಿಗೆ ಭಾರತೀಯ ವಾಯುಪಡೆ ವತಿಯಿಂದ ಗೌರವ ಸಲ್ಲಿಸಲಾಯಿತು. 2010 ರಲ್ಲಿ ಸಚಿನ್ ಅವರನ್ನು ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಲಾಯಿತು.   

7 /7

ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ, ಬಾಲ್ಯದಿಂದಲೂ ಸೈನ್ಯಕ್ಕೆ ಸೇರಲು ಬಯಸಿದ್ದರು.  2015 ರಲ್ಲಿ, ಧೋನಿಯನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಿಸಲಾಯಿತು. ಮಹಿ ತನ್ನ ಬಿಡುವಿನ ವೇಳೆಯಲ್ಲಿ ಭಾರತೀಯ ಸೇನೆಯ ಯುವಕರೊಂದಿಗೆ ಹೆಚ್ಚಾಗಿ ಸಮಯ ಕಳೆಯುತ್ತಾರೆ.