Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!

Tripushkara Yoga 2024: ಈ ರಾಶಿಯವರು ಆರ್ಥಿಕ ಲಾಭ ಪಡೆಯಲಿದ್ದಾರೆ. ಇವರ ಜೀವನದಲ್ಲಿ ಶಾಂತಿ ನೆಲೆಸಲಿದ್ದು, ಅಂದುಕೊಂಡ ಕಾರ್ಯಗಳು ಸುಲಭವಾಗಿ ಕೈಗೊಳ್ಳಲಿವೆ. ಈ ರಾಶಿಗಳ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸಿದರೆ ಜಾತಕದಲ್ಲಿ ಶನಿಯ ಸ್ಥಾನ ಬಲವಾಗಿ ಉಳಿಯುತ್ತದೆ. ​

Tripushkara Yoga 2024: ಇಂದು(ಜುಲೈ 6) ಚಂದ್ರನು ಮಿಥುನ ರಾಶಿಯ ನಂತರ ಕರ್ಕ ರಾಶಿಗೆ ಚಲಿಸಲಿದ್ದಾನೆ. ಶನಿವಾರ ಆಷಾಢ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಾಗಿದ್ದು, ಹರ್ಷ ಯೋಗ, ತ್ರಿಪುಷ್ಕರ ಯೋಗ ಮತ್ತು ಪುನರ್ವಸು ನಕ್ಷತ್ರದ ಮಂಗಳಕರ ಸಂಯೋಗ ನಡೆಯುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ 5 ರಾಶಿಗಳು ಇಂದು ರೂಪುಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತವೆ. ಈ ರಾಶಿಯವರು ಆರ್ಥಿಕ ಲಾಭ ಪಡೆಯಲಿದ್ದಾರೆ. ಇವರ ಜೀವನದಲ್ಲಿ ಶಾಂತಿ ನೆಲೆಸಲಿದ್ದು, ಅಂದುಕೊಂಡ ಕಾರ್ಯಗಳು ಸುಲಭವಾಗಿ ಕೈಗೊಳ್ಳಲಿವೆ. ಈ ರಾಶಿಗಳ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸಿದರೆ ಜಾತಕದಲ್ಲಿ ಶನಿಯ ಸ್ಥಾನ ಬಲವಾಗಿ ಉಳಿಯುತ್ತದೆ. ನ್ಯಾಯ ದೇವರಾದ ಶನಿದೇವರ ಆಶೀರ್ವಾದ ಪಡೆಯುತ್ತೀರಿ. ಈ ರಾಶಿಯವರ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಲೂ ಮುಕ್ತಿ ಸಿಗುತ್ತದೆ. ಜುಲೈ 6ರಂದು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂಬುದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮಿಥುನ ರಾಶಿಯವರಿಗೆ ಜುಲೈ 6 ಬಹಳ ವಿಶೇಷವಾದ ದಿನ. ಇಂದು ಯಾವುದೇ ಕೆಲಸವನ್ನು ದೃಢಸಂಕಲ್ಪದಿಂದ ಮಾಡಿದರೆ ಯಶಸ್ಸು ಸಿಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಸಿಹಿಸುದ್ದಿ ಸಿಗುತ್ತದೆ. ಸಂಬಂಧಗಳು ಗಟ್ಟಿಯಾಗಿರುತ್ತವೆ. ವ್ಯವಹಾರದಲ್ಲಿ ಹೊಸ ಪ್ರಯತ್ನ ಮಾಡುವ ಮೂಲಕ ನೀವು ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಲಾಭ ಪಡೆಯಲು ಸಾಧ್ಯವಾಗುತ್ತದೆ. ಈ ಹಿಂದೆ ಉದ್ಯೋಗಸ್ಥರು ಮಾಡಿದ ಕೆಲಸಗಳು ಫಲ ನೀಡಲಿವೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ ಮತ್ತು ಹೆತ್ತವರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಶನಿ ದೋಷದಿಂದ ಮುಕ್ತಿ ಹೊಂದಲು ಶನಿವಾರ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯಲ್ಲಿ ನಾಣ್ಯ ಹಾಕಿ, ಅದರಲ್ಲಿ ನಿಮ್ಮ ಪ್ರತಿಬಿಂಬ ನೋಡಬೇಕು. ನಂತರ ಬಟ್ಟಲಿನಲ್ಲಿ ಆ ಎಣ್ಣೆಯನ್ನು ಹಾಕಿ ಶನಿದೇವನ ಮುಂದೆ ಇರಿಸಬೇಕು. 

2 /5

ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ. ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆಗಳಿವೆ. ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಯಶಸ್ವಿಯಾಗಬಹುದು. ಕುಟುಂಬದಲ್ಲಿ ವಿವಾಹಿತ ಜನರ ನಡುವಿನ ಸಂಬಂಧ ಮುಂದುವರಿಯಬಹುದು. ಇದರಿಂದ ಎಲ್ಲಾ ಕುಟುಂಬ ಸದಸ್ಯರು ತುಂಬಾ ಸಂತೋಷವಾಗಿರುತ್ತಾರೆ. ಕೆಲ ಮಂಗಳಕರ ಘಟನೆಗಳು ನಡೆಯಬಹುದು. ಆಸ್ತಿ ಮತ್ತು ವಾಹನ ಖರೀದಿಸುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ಆಸೆಯೂ ಈಡೇರುತ್ತದೆ. ಮಾನಸಿಕ ಶಾಂತಿಗಾಗಿ ಪ್ರತಿ ಶನಿವಾರ ಹಿಟ್ಟು, ಕಪ್ಪು ಎಳ್ಳು ಮತ್ತು ಸಕ್ಕರೆಯನ್ನು ಬೆರೆಸಿ ಇರುವೆಗಳಿಗೆ ಹಾಕಿ. ಅಲ್ಲದೆ ಸಾಸಿವೆ ಎಣ್ಣೆಯಿಂದ ಮಾಡಿದ ಪದಾರ್ಥಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನವಾಗಿ ನೀಡಬೇಕು.

3 /5

ವೃಶ್ಚಿಕ ರಾಶಿಯವರಿಗೆ ಜುಲೈ 6 ಪ್ರಯೋಜನಕಾರಿಯಾಗಲಿದ್ದು, ಜೀವನದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ನೀವು ಸೌಕರ್ಯ ಮತ್ತು ಐಷಾರಾಮಿಗಳಿಂದ ತುಂಬಿದ ಜೀವನ ಕಾಣುತ್ತೀರಿ. ಉದ್ಯಮಿಗಳು ಧನಲಾಭ ಪಡೆಯಲಿದ್ದಾರೆ. ದುಡಿಯುವ ಜನರು ಪ್ರಗತಿಯನ್ನು ಸಾಧಿಸುತ್ತಾರೆ. ನಿಮ್ಮ ವೃತ್ತಿಜೀವನವು ಪ್ರಗತಿಯ ಹಾದಿಯಲ್ಲಿರುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಹೊಂದಾಣಿಕೆ ಇರುತ್ತದೆ. ನಿಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಪೋಷಕರ ಆರೋಗ್ಯದ ಚಿಂತೆ ದೂರವಾಗುತ್ತದೆ. ಕುಟುಂಬದಲ್ಲಿ ಶಾಂತಿ-ಸಂತೋಷ ಇರುತ್ತದೆ. ಹೊಸದಾಗಿ ಮದುವೆಯಾದವರ ಮನೆಗೆ ವಿಶೇಷ ಅತಿಥಿಗಳು ಆಗಮಿಸಬಹುದು. ಇದರಿಂದ ಮನೆಯಲ್ಲಿ ಸಂಭ್ರಮ ಇರುತ್ತದೆ. ಜೀವನದಲ್ಲಿ ಬರುವ ಅಡೆತಡೆಗಳನ್ನು ತೊಡೆದುಹಾಕಲು ಆಲದ ಮರಕ್ಕೆ ನೀರನ್ನು ಹಾಕಬೇಕು. ನಾಲ್ಕು ಮುಖದ ದೀಪವನ್ನು ಬೆಳಗಿಸಬೇಕು. ಶನಿದೇವನಿಗೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಬೆಳಗ್ಗೆ ಮತ್ತು ಸಂಜೆ 'ಓಂ ಶಾನ ಶನೈಶ್ಚರಾಯ ನಮಃ' ಎಂಬ ಮಂತ್ರವನ್ನು ಜಪಿಸಬೇಕು.

4 /5

ಮಕರ ರಾಶಿಯವರಿಗೆ ಜುಲೈ 6 ತುಂಬಾ ಅನುಕೂಲಕರವಾಗಿರುತ್ತದೆ. ಮಕರ ರಾಶಿಯವರು ಜೀವನವನ್ನು ಆನಂದಿಸುತ್ತಾರೆ. ನಿಮ್ಮ ಕೆಲಸದಲ್ಲಿನ ಸಾಮರ್ಥ್ಯಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಯಾವುದೇ ವಿವಾದಗಳು ನಡೆಯುತ್ತಿದ್ದರೆ, ಹಿರಿಯರ ಮೂಲಕ ಪರಿಹಾರ ದೊರೆಯಲಿದೆ. ನಿಮ್ಮ ಬಾಕಿ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ. ನಿಮ್ಮ ವೈವಾಹಿಕ ಜೀವನವು ಅದ್ಭುತವಾಗಿರುತ್ತದೆ. ದುಡಿಯುವ ಜನರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಎಲ್ಲಾ ರೀತಿಯ ಯಶಸ್ಸನ್ನು ತರುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆ ಕಾಣುವುದು. ನಿಮ್ಮ ರೋಗನಿರೋಧಕ ಶಕ್ತಿಯ ಮಟ್ಟ ಹೆಚ್ಚಾಗಿರುತ್ತದೆ. ಇದರಿಂದ ನೀವು ಆರೋಗ್ಯಕರ ಜೀವನವನ್ನು ನಡೆಸುತ್ತೀರಿ. ನೀವು ಸ್ನೇಹಿತರೊಂದಿಗೆ ಹೊರಗೆ ಹೋಗುವ ಅವಕಾಶ ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಶನಿವಾರ ಶನಿದೇವರ ಮಂತ್ರವನ್ನು ಪಠಿಸಬೇಕು. ಶನಿ ಚಾಲೀಸಾವನ್ನು ಪಠಿಸುವ ಮೂಲಕ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಬೇಕು.

5 /5

ಮೀನ ರಾಶಿಯವರಿಗೆ ಜುಲೈ 6 ಒಳ್ಳೆಯ ದಿನವಾಗಿರುತ್ತದೆ. ಮೀನ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಉದ್ಯೋಗ-ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ನೀವು ದೊಡ್ಡ ಯಶಸ್ಸು ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನವು ಮಾಧುರ್ಯದಿಂದ ಕೂಡಿರುತ್ತದೆ. ನೀವು ಕೆಲವು ಹೊಸ ಯೋಜನೆಗಳಲ್ಲಿ ಕೆಲಸ ಮಾಡುತ್ತೀರಿ, ನಿಮ್ಮ ಅಧಿಕಾರಿಗಳ ಬೆಂಬಲ ಪಡೆಯುತ್ತೀರಿ. ಶನಿದೇವನ ಕೃಪೆಯಿಂದ ವಿದೇಶಕ್ಕೆ ಹೋಗುವ ಸಾಧ್ಯತೆ ಬಲವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆಯೂ ಜಾಗೃತರಾಗಿರುತ್ತೀರಿ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ವಿದ್ಯಾರ್ಥಿಗಳು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತರಾಗುತ್ತಾರೆ. ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳಲ್ಲಿ ಯಶಸ್ಸು ದೊರೆಯುತ್ತದೆ. ಶನಿದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಬೆಳಗ್ಗೆ ಮತ್ತು ಸಂಜೆ ಒಂದು ಜಪಮಾಲೆಯೊಂದಿಗೆ 'ಓಂ ಐಂ ಹ್ಲೀಂ ಶ್ರೀಶನೇಶ್ಚರಾಯ ನಮಃ' ಮಂತ್ರ ಜಪಿಸಬೇಕು.