ದಿನಭವಿಷ್ಯ 13-09-2024: ಶುಕ್ರವಾರದಂದು ಸೌಭಾಗ್ಯ ಯೋಗ, ಮೇಷ, ವೃಶ್ಚಿಕ ಸೇರಿದಂತೆ ಈ ರಾಶಿಯವರಿಗೆ ಲಕ್ಷ್ಮಿ ಕೃಪೆ

Today Horoscope 13th September 2024:  ಶುಕ್ರವಾರ ಪೂ.ಷಾ. ನಕ್ಷತ್ರ, ಸೌಭಾಗ್ಯ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Yashaswini V | Last Updated : Sep 13, 2024, 08:02 AM IST
  • ದಿನ: ಶುಕ್ರವಾರ
  • ನಕ್ಷತ್ರ: ಪೂ.ಷಾ.
  • ಯೋಗ: ಸೌಭಾಗ್ಯ
ದಿನಭವಿಷ್ಯ 13-09-2024:  ಶುಕ್ರವಾರದಂದು ಸೌಭಾಗ್ಯ ಯೋಗ, ಮೇಷ, ವೃಶ್ಚಿಕ ಸೇರಿದಂತೆ ಈ ರಾಶಿಯವರಿಗೆ ಲಕ್ಷ್ಮಿ ಕೃಪೆ  title=

Shukravara Dina Bhavishya In Kannada:  ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಶುಕ್ರವಾರ ಪೂ.ಷಾ. ನಕ್ಷತ್ರ, ಸೌಭಾಗ್ಯ ಯೋಗ ಎಲ್ಲಾ 12 ರಾಶಿಯವರಿಗೆ ಏನು ಫಲ  ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಶುಕ್ರವಾರದ ದಿನ ಸೌಭಾಗ್ಯ ಯೋಗವು ಈ ರಾಶಿಯ ಜನರಿಗೆ ವ್ಯವಹಾರದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಮನೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಲೋನ್ ಗಾಗಿ ಪ್ರಯತ್ನಿಸುತ್ತಿದ್ದರೆ ಇಂದು ನಿಮ್ಮ ಕೆಲಸ ಸುಲಭವಾಗಿ ಆಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಶುಭ ಸುದ್ದಿ ಕೇಳಬಹುದು.  

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯ ಜನರಿಗೆ ಇಂದು ಧನಾತ್ಮಕ ಫಲಗಳು ದೊರೆಯಲಿವೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಸಂಗಾತಿಯಿಂದ ಸಾಕಷ್ಟು ಬೆಂಬಲ ಪಡೆಯುತ್ತೀರಿ. ಉದ್ಯೋಗ ರಂಗದಲ್ಲಿ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗಳಿವೆ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.  

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಸೌಭಾಗ್ಯ ಯೋಗವು ಈ ರಾಶಿಯವರಿಗೂ ಅದೃಷ್ಟವನ್ನು ಬೆಳಗಲಿದೆ. ಇಂದು ನಿಮಗೆ ಅನುಕೂಲಕರ ದಿನವಾಗಲಿದೆ. ಯಾವುದೇ ಆಸ್ತಿ ಸಂಬಂಧಿತ ವಿಷಯವು ಕಾನೂನಿನಲ್ಲಿ ನಡೆಯುತ್ತಿದ್ದರೆ, ಅದರಲ್ಲಿ ಜಯ ಸಿಗುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನೀವು ಕಾಳಜಿ ವಹಿಸಬೇಕಾಗುತ್ತದೆ.  

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನಿಮಗೆ ಲಾಭದಾಯಕವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಆತುರವನ್ನು ತಪ್ಪಿಸಿ, ಹಿರಿಯರ ಸಲಹೆಯಂತೆ ಮುಂದುವರೆಯುವುದರಿಂದ ಶುಭ ಫಲ. ಕೆಲಸದ ಜಂಜಾಟದಲ್ಲಿ ಕುಟುಂಬಕ್ಕೆ ಸಮಯ ನೀಡುವುದನ್ನು ಮರೆಯಬೇಡಿ.  ಯಾವುದೇ ವಿಚಾರವನ್ನು ಕುಟುಂಬಸ್ಥರೊಂದಿಗೆ ಮುಕ್ತವಾಗಿ ಮಾತನಾಡಿ. 

ಇದನ್ನೂ ಓದಿ- Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಶುಕ್ರವಾರದಂದು ಸೌಭಾಗ್ಯ ಯೋಗವು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಸಾಮಾಜಿಕ ಕ್ಷೇತ್ರಗಳಲ್ಲಿ ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ. ಭವಿಷ್ಯದಲ್ಲಿ ಅವರು ನಿಮಗೆ ಪ್ರಯೋಜನಕ್ಕೆ ಬರಲಿದ್ದಾರೆ. ನಿಮ್ಮ ತಾಯಿ ನಿಮ್ಮಲ್ಲಿ ಯಾವುದೇ ವಿನಂತಿಯನ್ನು ಮಾಡಿದರೆ, ನೀವು ಅದನ್ನು ಸಮಯಕ್ಕೆ ಪೂರೈಸುವುದನ್ನು ಮರೆಯಬೇಡಿ.  

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರಿಗೆ ಇಂದು ಲಾಭದಾಯಕ ಅವಕಾಶಗಳನ್ನು ತರಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರ ಗೌರವವು ಹೆಚ್ಚಾಗುತ್ತದೆ. ಆದಾಯದ ಯೋಜನೆಗಳಿಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಏರಿಕೆ ಕಾಣುವಿರಿ. ಮಕ್ಕಳಿಂದ ಶುಭ ವಾರ್ತೆ ನಿರೀಕ್ಷಿಸಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಲಿದೆ. ಕೆಲವು ಹೊಸ ಸಂಪರ್ಕಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ದೀರ್ಘ ಸಮಯದಿಂದ ನೀವು ಚಿಂತಿಸುತ್ತಿದ್ದ ಕೆಲಸಗಳು ಇಂದು  ಪೂರ್ಣಗೊಳ್ಳುತ್ತದೆ. ನೀವು ಯಾರಿಂದಲಾದರೂ ಹಣದ ಸಂಬಂಧಿತ ಸಹಾಯವನ್ನು ತೆಗೆದುಕೊಂಡಿದ್ದರೆ ಸಾಧ್ಯವಾದರೆ ಇಂದೇ ಹಿಂದಿರುಗಿಸಿ.  

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಸೌಭಾಗ್ಯ ಯೋಗವು ಇಂದು ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಶುಭ ಫಲಗಳನ್ನು ನೀಡಲಿದೆ. ಇಂದು ನಿಮಗೆ ಗೌರವ ಹೆಚ್ಚಾಗಲಿದೆ. ನಿಮ್ಮ ಹೆತ್ತವರ ಆಶೀರ್ವಾದದಿಂದ, ನಿಮ್ಮ ಯಾವುದೇ ಬಾಕಿ ಕೆಲಸವು ಪೂರ್ಣಗೊಳ್ಳುತ್ತದೆ. ಆದಾಗ್ಯೂ, ಇಂದು ಸಂಬಂಧಿಕರೊಂದಿಗೆ ಮಾತನಾಡುವ ಮಾತಿನ ಬಗ್ಗೆ ತುಂಬಾ ಎಚ್ಚರಿಕೆ ಅಗತ್ಯವಿದೆ.  

ಇದನ್ನೂ ಓದಿ- ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯ ಜನರಿಗೆ ಇಂದು ಸಂತೋಷದ ದಿನವಾಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ಥಾಪ ಕರಗಿ ಸಂತೋಷ ಇರುತ್ತದೆ. ನೀವು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಲಾಭ ಪಡೆಯಬಹುದು. ಆದರೆ, ಆತುರದ ನಿರ್ಧಾರಗಳನ್ನು ತಪ್ಪಿಸಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಆಯೋಜಿಸಬಹುದು.  

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯ ಜನರು ಇಂದು ಆತುರದಿಂದ ಮತ್ತು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ನಿಮ್ಮ ಮಗುವಿನ ನಡವಳಿಕೆಯಲ್ಲಿನ ಬದಲಾವಣೆ ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.  

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯವರಿಗೆ ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ಪ್ರಯಾಣದ ವೇಳೆ ನಿಮ್ಮ ಹಣ, ಒಡವೆ ಬಗ್ಗೆ ಎಚ್ಚರವಹಿಸಿ. ಇಂದು ನಿಮಗೆ ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ನಾಳೆಯವರೆಗೆ ಮುಂದೂಡುವುದನ್ನು ನೀವು ತಪ್ಪಿಸಬೇಕಾಗುತ್ತದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ, ಇಲ್ಲವೇ ಸಮಸ್ಯೆಗಳು ಉಲ್ಬಣಿಯಬಹುದು. ಪ್ರಮುಖ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಯಾರ ಪ್ರಭಾವಕ್ಕೂ ಒಳಗಾಗುವುದನ್ನು ತಪ್ಪಿಸಿ. ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ಹೊರಡುವ ಮುನ್ನ ಹಿರಿಯರ ಆಶೀರ್ವಾದ ಪಡೆಯಿರಿ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News