ಐದು ದಿನಗಳ ಬಳಿಕ ಮಂಗಳ ಅಸ್ತ: ಮೂರು ರಾಶಿಯವರ ಜೀವನದಲ್ಲಿ ಸಂಕಷ್ಟದ ಕಾರ್ಮೋಡ

Mangala Asta: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳನ ಸ್ಥಾನಮಾನವು ವ್ಯಕ್ತಿಯ ಉದ್ಯೋಗ, ವ್ಯವಹಾರದ ಮೇಲೆ ಪರಿಣಾಮವನ್ನು ಬಿರುತ್ತದೆ. ಇದೀಗ, ಶೀಘ್ರದಲ್ಲೇ ಮಂಗಳ ಕನ್ಯಾ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. 

Written by - Yashaswini V | Last Updated : Sep 19, 2023, 06:55 AM IST
  • ಮಂಗಳನು ಇನ್ನು ಐದು ದಿನಗಳ ನಂತರ, ಸೆಪ್ಟೆಂಬರ್ 24 ರಂದು ಕನ್ಯಾರಾಶಿಯಲ್ಲಿ ಅಸ್ತಮಿಸಲಿದ್ದಾನೆ.
  • ಮಂಗಳನ ಶತ್ರು ಗ್ರಹ ಎಂತಲೇ ಕರೆಯಲಾಗುವ ಬುಧನ ರಾಶಿಯಲ್ಲಿ ಅಸ್ತಮಿಸಲಿರುವ ಮಂಗಳ
  • ಮಂಗಳ ಅಸ್ತದ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟ
ಐದು ದಿನಗಳ ಬಳಿಕ ಮಂಗಳ ಅಸ್ತ: ಮೂರು ರಾಶಿಯವರ ಜೀವನದಲ್ಲಿ ಸಂಕಷ್ಟದ ಕಾರ್ಮೋಡ title=

Mangala Asta: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂದೇ ಕರೆಯಲ್ಪಡುವ ಮಂಗಳ ಗ್ರಹದ ಸ್ಥಾನಮಾನವು ವ್ಯಕ್ತಿಯ ಉದ್ಯೋಗ-ವ್ಯವಹಾರದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳನು ಬಲಶಾಲಿಯಾಗಿದ್ದರೆ ಅವರು ನಾನಾ ರೀತಿಯ ಸುಖ-ಸಂತೋಷವನ್ನು ಪಡೆಯುತ್ತಾರೆ. ಅದೇ ರೀತಿ ವ್ಯಕ್ತಿಯ ಜಾತಕದಲ್ಲಿ ಮಂಗಳನು ಅಶುಭ ಸ್ಥಾನದಲ್ಲಿದ್ದರೆ, ಅವರು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. 
 
ಮಂಗಳನು ಇನ್ನು ಐದು ದಿನಗಳ ನಂತರ, ಸೆಪ್ಟೆಂಬರ್ 24 ರಂದು ಕನ್ಯಾರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಮಂಗಳನ ಶತ್ರು ಗ್ರಹ ಎಂತಲೇ ಕರೆಯಲಾಗುವ ಬುಧನ ರಾಶಿಯಲ್ಲಿ ಅಸ್ತಮಿಸಲಿರುವ ಮಂಗಳನು ಮೂರು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟವನ್ನು ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Budha Margi: ಮುಂದಿನ 20 ದಿನ ಈ ರಾಶಿಯವರಿಗೆ ವೃದ್ಧಿಯಾಗಲಿದೆ ಧನ-ಸಂಪತ್ತು

ಅಸ್ತಮಿಸಲಿರುವ ಮಂಗಳನು ಯಾವ ರಾಶಿಯವರ ಮೇಲೆ ಅಶುಭ ಪರಿಣಾಮಗಳನ್ನು ತರಲಿದ್ದಾನೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ... 

ಸೆಪ್ಟೆಂಬರ್ 24ರಂದು ಕನ್ಯಾ ರಾಶಿಯಲ್ಲಿ ಅಸ್ತಮಿಸಲಿದ್ದಾನೆ ಮಂಗಳ: ಮೂರು ರಾಶಿಯವರಿಗೆ ಭಾರೀ ಸಂಕಷ್ಟ:- 
ವೃಷಭ ರಾಶಿ: 

ಸೆಪ್ಟೆಂಬರ್ 24ರಂದು ಮಂಗಳ ಅಸ್ತದ ಪರಿಣಾಮವಾಗಿ ವೃಷಭ ರಾಶಿಯವರು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ಅನಾವಶ್ಯಕ ವಾದ ಸಾಧ್ಯತೆ ಇರುವುದರಿಂದ ಸ್ವಲ್ಪ ತಾಳ್ಮೆಯಿಂದ ಇರುವುದು ಅಗತ್ಯ. ಇದಲ್ಲದೆ, ಪ್ರಯಾಣದ ವೇಳೆ ಜಾಗರೂಕರಾಗಿರಿ, ಇಲ್ಲದಿದ್ದರೆ ಹಣಕಾಸಿನ ನಷ್ಟ ಸಾಧ್ಯತೆ ಇದೆ. ಮಕ್ಕಳ ಆರೋಗ್ಯ ನಿಮಗೆ ಚಿಂತೆಯ ವಿಷಯವಾಗಬಹುದು. 

ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ. 

ಇದನ್ನೂ ಓದಿ- ಗುರು ಬಲ: ಈ ರಾಶಿಗಳ ಅದೃಷ್ಟದ ಬಾಗಿಲು ತೆರೆದಿದೆ.. ಮುಟ್ಟಿದ್ದೆಲ್ಲಾ ಚಿನ್ನಮಯ, ಧನ ಸಂಪತ್ತಿನ ಮಳೆ!

ಸಿಂಹ ರಾಶಿ: 
ಮಂಗಳ ಸಂಚಾರದಲ್ಲಿನ ಬದಲಾವಣೆಯು ಸಿಂಹ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದರಿಂದ ಚಿಂತೆ ಹೆಚ್ಚಾಗಬಹುದು. ಕಣ್ಣುಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡುವುದರಿಂದ ನಿರ್ಲಕ್ಷಿಸಬೇಡಿ. ವಾದ-ವಿವಾದಗಳು ಹೆಚ್ಚಾಗುವುದರಿಂದ ಸಾಧ್ಯವಾದಷ್ಟು ಅನಾವಶ್ಯಕ ವಿಷಯಗಳಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿ. 

ಪರಿಹಾರ: ಪ್ರತಿದಿನ 11 ಬಾರಿ "ಓಂ ಭಾಸ್ಕರಾಯ ನಮಃ" ಎಂದು ಜಪಿಸಿ. 

ಮೀನ ರಾಶಿ: 
ಮಂಗಳ ಅಸ್ತ ಪರಿಣಾಮ ಮೀನ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದೆ. ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಆರ್ಥಿಕ ಸಂಕಷ್ಟಗಳು ಹೆಚ್ಚಾಗಳಿವೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಿ. 

ಪರಿಹಾರ: ಪ್ರತಿದಿನ 27 ಬಾರಿ "ಓಂ ಮಂಗಳಾಯ ನಮಃ" ಎಂದು ಜಪಿಸಿ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News