ಈ ಅಕ್ಷರದಿಂದ ಹೆಸರು ಆರಂಭವಾಗುವವರ ಮೇಲೆ ಸದಾ ಇರುತ್ತದೆ ಕುಬೇರನ ಆಶೀರ್ವಾದ! ಜೀವನ ಪೂರ್ತಿ ರಾಜಯೋಗವೇ

ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ  ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡುಲಾಗುತ್ತದೆ. 

Written by - Ranjitha R K | Last Updated : Mar 17, 2023, 03:18 PM IST
  • ವ್ಯಕ್ತಿಯ ಹೆಸರಿಗಿದೆ ಭಾರೀ ಮಹತ್ವ
  • ಜನ್ಮ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ರಾಶಿ ನಿರ್ಧಾರ
  • ರಾಶಿಗನುಗುಣವಾಗಿ ಮಾಡಲಾಗುವುದು ನಾಮಕರಣ
 ಈ ಅಕ್ಷರದಿಂದ ಹೆಸರು ಆರಂಭವಾಗುವವರ ಮೇಲೆ  ಸದಾ ಇರುತ್ತದೆ   ಕುಬೇರನ ಆಶೀರ್ವಾದ!  ಜೀವನ ಪೂರ್ತಿ ರಾಜಯೋಗವೇ  title=

ಬೆಂಗಳೂರು : ಜ್ಯೋತಿಷ್ಯದಲ್ಲಿ ವ್ಯಕ್ತಿಯ ಹೆಸರಿನ ವಿಶೇಷ ಮಹತ್ವವನ್ನು ಹೇಳಲಾಗಿದೆ. ಹೆಸರಿನ ಆಧಾರದ ಮೇಲೆಯೇ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಹೇಳಬಹುದು. ಶಾಸ್ತ್ರಗಳ ಪ್ರಕಾರ, ಜನ್ಮ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ಜನ್ಮ ರಾಶಿಯನ್ನು ನಿರ್ಧರಿಸಲಾಗುತ್ತದೆ. ರಾಶಿಗನುಗುಣವಾಗಿ ಯಾವ ಅಕ್ಷರದಿಂದ ಹೆಸರು ಆರಂಭವಾಗಬೇಕು ಎನ್ನುವುದನ್ನು ಕೂಡಾ ತೀರ್ಮಾನಿಸಲಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕವೂ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. 

ಇವರ ಮೇಲಿರುತ್ತದೆ ಕುಬೇರನ ವಿಶೇಷ ಅನುಗ್ರಹ :
V ಅಕ್ಷರದಿಂದ ಹೆಸರು ಆರಂಭವಾಗುವವರು :  
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಮ್ಮ ಹೆಸರಿನ ಮೊದಲ ಅಕ್ಷರವು Vಯಿಂದ ಆರಂಭವಾದರೆ ಆ ವ್ಯಕ್ತಿ ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುತ್ತಾನೆ ಎನ್ನಲಾಗಿದೆ. ಕುಬೇರ ದೇವನ ಆಶೀರ್ವಾದ ಈ ಹೆಸರಿನವರ ಮೇಲೆ ಅತಿಯಾಗಿ ಇರುತ್ತದೆಯಂತೆ. ಇಷ್ಟೇ ಅಲ್ಲ, V ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿ ಜೀವನದಲ್ಲಿ ಎಲ್ಲಾ ರೀತಿಯ ಐಷಾರಾಮಗಳನ್ನೂ ಪಡೆಯುತ್ತಾನೆ. ಇವರು ದುಬಾರಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ ಮತ್ತು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. 

ಇದನ್ನೂ ಓದಿ : Chaitra Navratri 2023: 110 ವರ್ಷಗಳ ಬಳಿಕ ಅದ್ಭುತ ಕಾಕತಾಳೀಯ ನಿರ್ಮಾಣ, ತಾಯಿ ದುರ್ಗೆಯ ಕೃಪೆಯಿಂದ ಅಪಾರ ಸುಖ-ಸಮೃದ್ಧಿ!

N ಅಕ್ಷರದಿಂದ ಹೆಸರು ಆರಂಭವಾಗುವವರು :  
ಜ್ಯೋತಿಷ್ಯಶಾಸ್ತ್ರದ ಪ್ರಕಾರ, N ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಹೃದಯವಂತರು. ಇವರ ವಿಭಿನ್ನ ಶೈಲಿಯ ಮೂಲಕವೇ ಜನರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಇವರು ಸ್ವಭಾವತಃ ಧೈರ್ಯಶಾಲಿ ಮತ್ತು ನಿರ್ಭೀತರಾಗಿರುತ್ತಾರೆ. ಅವರು ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. 

S ಅಕ್ಷರದಿಂದ ಆರಂಭವಾಗುವ ಹೆಸರು : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, S ಅಕ್ಷರದಿಂದ ಹೆಸರು ಆರಂಭವಾಗುವವರು ಜೀವನದ ಪ್ರತಿಯೊಂದು ತಿರುವಿನಲ್ಲಿಯೂ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಇವರು ಅಂದುಕೊಂಡ ಕೆಲಸವನ್ನು ಮುಗಿಸಿಯೇ ತೀರುತ್ತಾರೆ. ಐಷಾರಾಮಿ ಜೀವನ ಇವರಿಗೂ ಇಷ್ಟ. ಈ ಹೆಸರಿನ ಜನರಿಗೆ ದೂರದ ಊರುಗಳಿಗೆ ಪ್ರಯಾಣ ಮಾಡುವುದೆಂದರೆ ಅಚ್ಚು ಮೆಚ್ಚು. ಕುಬೇರ ದೇವನ ಆಶೀರ್ವಾದ ಇವರ ಮೇಲೆ ಹೆಚ್ಚಾಗಿರುತ್ತದೆ. 

ಇದನ್ನೂ ಓದಿ : ತಾಯಿ ಗರ್ಭದಲ್ಲಿಯೇ ನಿರ್ಧಾರವಾಗಿರುತ್ತದೆಯಂತೆ ಈ ವಿಷಯಗಳು! ಏನು ಮಾಡಿದರೂ ಬದಲಾಯಿಸುವುದು ಸಾಧ್ಯವೇ ಇಲ್ಲ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News