ಲಕ್ಷ್ಮಿ ಕೃಪೆಗಾಗಿ ಶುಕ್ರವಾರದ ದಿನ ಮರೆತೂ ಸಹ ಈ ಕೆಲಸಗಳನ್ನು ಮಾಡಬಾರದು

Astro Tips: ಪ್ರತಿಯೊಬ್ಬರೂ ಸಹ ಜೀವನದಲ್ಲಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕು ಎಂದು ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರದಂದು ಐದು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Dec 7, 2023, 02:16 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರವನ್ನು ಬಹಳ ಪ್ರಾಶಸ್ತ್ಯವಾದ ದಿನ ಎಂದು ನಂಬಲಾಗಿದೆ.
  • ಶುಕ್ರವಾರದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.
  • ಶುಕ್ರವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ...
ಲಕ್ಷ್ಮಿ ಕೃಪೆಗಾಗಿ ಶುಕ್ರವಾರದ ದಿನ ಮರೆತೂ ಸಹ ಈ ಕೆಲಸಗಳನ್ನು ಮಾಡಬಾರದು  title=

Astro Tips: ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು, ಶ್ರೀಮಂತರಾಗಬೇಕು ಎಂಬ ಕನಸು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇದಕ್ಕಾಗಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯ ಆಶೀರ್ವಾದ ಬಹಳ ಮುಖ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರವನ್ನು ಬಹಳ ಪ್ರಾಶಸ್ತ್ಯವಾದ ದಿನ ಎಂದು ನಂಬಲಾಗಿದೆ. ಶುಕ್ರವಾರದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.  

ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಲಕ್ಷ್ಮಿಯ ಆಶೀರ್ವಾದವನ್ನು ಬಯಸಿದರೆ ಶುಕ್ರವಾರದಂದು ಐದು ಕೆಲಸಗಳನ್ನು ಮರೆತೂ ಸಹ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ... 

ಜೀವನದಲ್ಲಿ ಏಳ್ಗೆಗಾಗಿ ಶುಕ್ರವಾರದ ದಿನ ಈ ಐದು ಕೆಲಸಗಳನ್ನು ಮಾಡಲೇಬಾರದು: 
ಕ್ಲೀನಿಂಗ್ ಕೆಲಸ: 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿ ಶುಚಿತ್ವವನ್ನು ಇಷ್ಟಪಡುತ್ತಾಳೆ. ಆದರೆ, ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಮನೆಯನ್ನು ಸ್ವಚ್ಛಗೊಳಿಸುವ ಅರ್ಥಾತ್ ಮೂಲೆ, ಮೂಲೆಯಿಂದ ಕಸ ತೆಗೆಯುವ ಕೆಲಸ ಮಾಡಬಾರದು. 

ಇದನ್ನೂ ಓದಿ- ಆದಿತ್ಯ-ಮಂಗಳ ರಾಜಯೋಗ: ಹೊಸ ವರ್ಷದಲ್ಲಿ ಈ ಮೂರು ರಾಶಿಯವರಿಗೆ ಭಾರೀ ಅದೃಷ್ಟ

ಈ ರೀತಿಯ ಬಟ್ಟೆಗಳನ್ನು ಧರಿಸಬೇಡಿ: 
ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಬಯಸಿದರೆ, ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಹರಿದ, ಕೊಳಕಾದ ಬಟ್ಟೆಗಳನ್ನು ಧರಿಸಲೇಬಾರದು. ಇದು ಲಕ್ಷ್ಮಿಯ ಮುನಿಸಿಗೆ ಕಾರಣವಾಗಬಹುದು ಎನ್ನಲಾಗುತ್ತದೆ. 

ಹಣದ ವ್ಯವಹಾರ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರವಾರದ ದಿನ ಯಾವುದೇ ರೀತಿಯ ಹಣದ ವ್ಯವಹಾರಗಳಿಗೆ ಅತ್ಯಂತ ಅಶುಭ ಎಂದು ಹೇಳಲಾಗುತ್ತದೆ. ಈ ದಿನ ನೀವು ಬೇರೆಯವರಿಗೆ ಹಣ ನೀಡುವುದಾಗಲಿ ಅಥವಾ ಬೇರೆಯವರಿಗೆ ಹಣವನ್ನು ಸಾಲವನ್ನಾಗಿ ಪಡೆಯುವುದನ್ನಾಗಲಿ ಯಾವುದೇ ಕಾರಣಕ್ಕೂ ಮಾಡಬಾರದು. 

ಆಸ್ತಿಗೆ ಸಂಬಂಧಿಸಿದ ಕೆಲಸ: 
ಶುಕ್ರವಾರದಂದು ಆಸ್ತಿ ಸಂಬಂಧಿಸಿದ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಲೇಬಾರದು. ಈ ರೀತಿ ಮಾಡುವುದರಿಂದ ಇದು ಲಕ್ಷ್ಮಿ ದೇವಿ ಮುನಿಸಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ-  ಈ ರಾಶಿಯವರ ಎಲ್ಲಾ ರೀತಿಯ ಕಷ್ಟಗಳಿಗೆ ಬೀಳುವುದು ತೆರೆ ! ಇನ್ನೊಂದು ವಾರದಲ್ಲಿ ಸೂರ್ಯನಂತೆ ಬೆಳಗುವುದು ಅದೃಷ್ಟ ! 

ಈ ವಸ್ತುಗಳನ್ನು ಮನೆಗೆ ತರಬೇಡಿ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮಗೆ ಎಷ್ಟೇ ಅಗತ್ಯವಿದ್ದರೂ ಕೂಡ ಅಡುಗೆ ಮನೆಗೆ ಸಂಬಂಧಿಸಿದ ವಸ್ತುಗಳನ್ನು ಶುಕ್ರವಾರದ ದಿನ ಖರೀದಿಸಲೇಬಾರದು ಎನ್ನಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News