ಈ ಕ್ಷೇತ್ರದಲ್ಲಿ ನೀವೇನು ಬೇಕಾದರೂ ಬೇಡಿಕೊಳ್ಳಿ ಅದು ಈಡೇರುವುದು ನೂರಕ್ಕೆ ನೂರರಷ್ಟು ಖಚಿತ :ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದ ದೇವಸ್ಥಾನದ ಹರಕೆ ರೀತಿಯೇ ವಿಶೇಷ

ಈ ಕ್ಷೇತ್ರಕ್ಕೆ ಬಂದು ತಮ್ಮ ಮನದ ಆಸೆ ಈಡೇರಿಸು ಎಂದು ದೇವರನ್ನು ಬೇಡಿಕೊಂಡರೆ ಸಾಕು ಅದು ಖಂಡಿತವಾಗಿಯೂ ಈಡೇರುತ್ತದೆ ಎನ್ನುತಾರೆ ಭಕ್ತರು.    

Written by - Ranjitha R K | Last Updated : Aug 7, 2024, 04:10 PM IST
  • ಬೆಳ್ತಂಗಡಿ ತಾಲೂಕಿನಲ್ಲಿದೆ ಈ ಸುರ್ಯ ದೇವಸ್ಥಾನ
  • ಮಣ್ಣಿನ ಹರಕೆಯ ದೇವಾಲಯ ಎಂದು ಕೂಡಾ ಕರೆಯುತ್ತಾರೆ
  • ಇಲ್ಲಿ ಬೇಡಿಕೊಂಡ ಹರಕೆ ಈಡೇರುವುದು ಖಚಿತವಂತೆ
 ಈ ಕ್ಷೇತ್ರದಲ್ಲಿ ನೀವೇನು ಬೇಕಾದರೂ ಬೇಡಿಕೊಳ್ಳಿ ಅದು ಈಡೇರುವುದು ನೂರಕ್ಕೆ ನೂರರಷ್ಟು ಖಚಿತ :ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದ ದೇವಸ್ಥಾನದ ಹರಕೆ ರೀತಿಯೇ ವಿಶೇಷ title=

ಮಂಗಳೂರು : ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳೊಂದಿಗೆ ಸುರ್ಯ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದರು.ಇಲ್ಲಿಗೆ ಪ್ರತಿ ದಿನ ಹರಕೆ ಸಲ್ಲಿಸುವ ಸಲುವಾಗಿಯೇ  ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಈ ದೇವಸ್ಥಾನದಲ್ಲಿ ಚಿನ್ನ ಬೆಳ್ಳಿಯ ಹರಕೆಗಳನ್ನು ನೀಡುವುದಿಲ್ಲ.ಇಲ್ಲಿ ಸಲ್ಲಿಸುವ ಹರಕೆ ಮಣ್ಣಿನ ಗೊಂಬೆಯದ್ದೇ ಆಗಿರಬೇಕು. 

ಈ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಸುರ್ಯ ಕ್ಷೇತ್ರವನ್ನು ಮಣ್ಣಿನ ಹರಕೆಯ ದೇವಾಲಯ ಎಂದು ಕೂಡಾ ಕರೆಯಲಾಗುತ್ತದೆ.ಈ ಕ್ಷೇತ್ರದಲ್ಲಿ ಬಂದು ನಮ್ಮ ಮನಸ್ಸಿನ ಆಸೆಯನ್ನು ನೆರವೇರಿಸು ಎಂದು ಮನದ ಇಚ್ಚೆಯನ್ನು ಹೇಳಿಕೊಂಡರೆ ಅದು ಖಂಡಿತವಾಗಿಯೂ ನೆರವೇ ರುವುದಂತೆ. ಹೀಗೆ ನಾವು ಬೇಡಿಕೊಂಡ ಬೇಡಿಕೆ ಈಡೇರಿದ ಬಳಿಕ ಮತ್ತೆ ಈ ಕ್ಷೇತ್ರಕ್ಕೆ ಬಂದು ಮಣ್ಣ ಗೊಂಬೆ ಸಲ್ಲಿಸಬೇಕು. 

ಇದನ್ನೂ ಓದಿ: ಸೂರ್ಯ ಗ್ರಹಣದ ದಿನದಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಒಲಿದು ಬರುವುದು ಹೊಸ ಮನೆ ಖರೀದಿ ಭಾಗ್ಯ

ಉದಾರಣೆಗೆ ನೀವು ಈ ಕ್ಷೇತ್ರಕ್ಕೆ ಹೋಗಿ ಸ್ವಂತ ಮನೆಯ ಆಸೆ ಈಡೇರಿಸು ಎಂದು ಬೇಡಿಕೊಂಡು ಬಂದು ನೀವು ಸ್ವಂತ ಮನೆ ಖರೀದಿ ಅಥವಾ ನಿರ್ಮಾಣ ಮಾಡಿದ ಬಳಿಕ ಈ ಕ್ಷೇತ್ರಕ್ಕೆ ಮತ್ತೆ ಬಂದು ಮಣ್ಣಿನ ಮನೆಯನ್ನು ನೀಡಬೇಕು. ವಾಹನ ಖರೀದಿ ಆಸೆ ಈಡೇರಿದರೆ ಯಾವ ವಾಹನ ಖರೀದಿಸಿದ್ದಿರೂ ಆ ವಾಹನದ ಮಣ್ಣಿನ ಗೊಂಬೆ ನೀಡಬೇಕು. ನಿಮ್ಮಗಿಷ್ಟವಾದ ಕೆಲಸ ಸಿಕ್ಕಲೇ ಎನ್ನುವ ಬೇಡಿಕೆ ಈಡೇರಿದರೆ ಫೈಲ್, ಪೆನ್ನು ಹೀಗೆ ಕಚೇರಿಗೆ ಸಂಬಂಧಿಸಿದ ವಸ್ತುಗಳ ಗೊಂಬೆ ನೀಡಬೇಕು. ಇನ್ನು ಆರೋಗ್ಯ ಸಂಬಂಧ ಹರಕೆ ಹೊತ್ತು ಕೊಂಡಿದ್ದರೆ ದೇಹದ ಅಂಗಗಳ ಗೊಂಬೆ ನೀಡಬೇಕು.  ಒಟ್ಟಿನಲ್ಲಿ ಇಲ್ಲಿ ಏನೇ ನೀಡಿದರೂ ಅದು ಮಣ್ಣಿನದ್ದಾಗಿರುತ್ತದೆ. 

ಮಹಾಪೂಜೆಯ ಮೊದಲು ದೇವಸ್ಥಾನದ ಬಳಿಯಿರುವ ಹರಕೆ ಬನಕ್ಕೆ ಬಂದಿರುವ ಎಲ್ಲಾ ಹರಕೆ  ಬೊಂಬೆಗಳನ್ನು ಒಯ್ಯಲಾಗುವುದು.ನಂತರ ಅಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಹರಕೆ ಗೊಂಬೆಗಳನ್ನು ಬನದಲ್ಲಿ ಜೋಡಿಸಿಡುತ್ತಾರೆ. ಹರಕೆ ಸಲ್ಲಿಸುವಾಗ ಪಾಲಿಸಬೇಕಾದ ಮುಖ್ಯ ನಿಯಮ ಎಂದರೆ ಇಲ್ಲಿಗೆ ಸಲ್ಲಿಸುವ ಗೊಂಬೆಗಳಲ್ಲಿ ಯಾವುದೇ ರೀತಿಯ ಬಿರುಕಿರಬಾರದು.

ಇದನ್ನೂ ಓದಿ : ಮನಿ ಪ್ಲಾಂಟ್ ತುಳಸಿ ಅಲ್ಲ!ಮನೆಯಲ್ಲಿನ ಎಲ್ಲಾ ವಾಸ್ತು ದೋಷ ನಿವಾರಣೆ ಮಾಡಿ ಹಣದ ಹರಿವು ಹರಿಸುತ್ತದೆ ಈ ಸಸ್ಯ !ಶ್ರಾವಣದಲ್ಲಿ ನೆಟ್ಟರೆ ಇನ್ನೂ ಶುಭ

ಇನ್ನು ಭಕ್ತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹರಕೆ ಗೊಂಬೆಗಳು ಇಲ್ಲಿಯೇ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಮನಸ್ಸಿನಲ್ಲಿಯೂ ಈಡೇರದ ಆಸೆ ಏನಾದರೂ ಇದ್ದರೆ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News