Shani Gochar 2022: ಶನಿಯ ವಕ್ರ ದೃಷ್ಟಿಯಿಂದ ಮುಕ್ತಿ- ಜುಲೈನಿಂದ ಖುಲಾಯಿಸಲಿದೆ ಈ 2 ರಾಶಿಯವರ ಅದೃಷ್ಟ

Shani Dahiya 2022: ಶನಿಯ ಸಾಡೇ ಸಾತಿ ಮತ್ತು ಧೈಯಾ ಪ್ರಭಾವಕ್ಕೆ ಒಳಗಾಗುವುದರಿಂದ ಜೀವನದಲ್ಲಿ ಅನೇಕ ರೀತಿಯ ಸಂಕಷ್ಟಗಳು ಎದುರಾಗುತ್ತವೆ.  ಆದರೆ, ಶನಿ ವಕ್ರದೃಷ್ಟಿಯಿಂದ ಮುಕ್ತಿ ಪಡೆಯುವುದರಿಂದ ಜೀವನದಲ್ಲಿ ಸಂತೋಷ ತುಂಬುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2 ರಾಶಿಯ ಜನರು ಜುಲೈ 2022 ರಲ್ಲಿ ಶನಿಯ ಧೈಯಾದಿಂದ ಪರಿಹಾರವನ್ನು ಪಡೆಯಲಿದ್ದಾರೆ. ಇದರೊಂದಿಗೆ ಅವರು ತಮ್ಮ ವೃತ್ತಿಜೀವನದಲ್ಲಿ ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ 2 ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Jun 22, 2022, 07:02 AM IST
  • ಜುಲೈ 12 ರಂದು ಶನಿಯು ಮಕರ ರಾಶಿಗೆ ಪ್ರವೇಶಿಸಲಿದ್ದಾರೆ
  • ಶನಿಯ ಈ ಚಲನೆಯು ಎಲ್ಲಾ ರಾಶಿಯ ಜನರ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
  • ಆದರೆ, ಶನಿಯ ಈ ಸಂಕ್ರಮಣವು ಎರಡು ರಾಶಿಯ ಜನರಿಗೆ ಅದೃಷ್ಟವನ್ನು ಕರುಣಿಸಲಿದೆ
Shani Gochar 2022: ಶನಿಯ ವಕ್ರ ದೃಷ್ಟಿಯಿಂದ ಮುಕ್ತಿ- ಜುಲೈನಿಂದ ಖುಲಾಯಿಸಲಿದೆ ಈ 2 ರಾಶಿಯವರ ಅದೃಷ್ಟ title=
Shani rashi parivartan 2022

ರಾಶಿಚಕ್ರದ ಮೇಲೆ ಶನಿ ಗೋಚಾರ 2022 ರ ಪರಿಣಾಮ: ಶನಿ ಗ್ರಹವು 12 ಜುಲೈ 2022 ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಈ ಸಮಯದಲ್ಲಿ ಶನಿಯು ಕುಂಭ ರಾಶಿಯಿಂದ ಹಿಮ್ಮುಖವಾಗಿ ಚಲಿಸುವ ಮೂಲಕ ಮಕರ ರಾಶಿ ಪ್ರವೇಶಿಸಲಿದ್ದಾರೆ. ಶನಿಯ ಈ ಚಲನೆಯು ಎಲ್ಲಾ ರಾಶಿಯ ಜನರ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಪರಿಣಾಮವು ಶುಭ ಅಥವಾ ಅಶುಭವಾಗಿರಬಹುದು. ಇದರೊಂದಿಗೆ, ಶನಿಯ ರಾಶಿಚಕ್ರ ಬದಲಾವಣೆಯು ಶನಿಯ ಸಾಡೇ ಸಾತಿ ಮತ್ತು ಧೈಯಾ ಪ್ರಭಾವ  ನಡೆಯುತ್ತಿರುವ ರಾಶಿಚಕ್ರದ ಚಿಹ್ನೆಗಳ ಮೇಲೂ ಪರಿಣಾಮ ಬೀರುತ್ತದೆ. 

ಶನಿಯ ಸಂಕ್ರಮಣದಿಂದ ಎರಡು ರಾಶಿಯವರಿಗೆ ಶನಿ ಧೈಯಾದಿಂದ ಮುಕ್ತಿ:
ಇದೀಗ ಶನಿ ದೇವನು ಕುಂಭ ರಾಶಿಯಲ್ಲಿದ್ದಾನೆ ಮತ್ತು ಈ ಕಾರಣದಿಂದಾಗಿ, ಕರ್ಕ ಮತ್ತು ವೃಶ್ಚಿಕ ರಾಶಿಯ ಜನರು ಶನಿ ಧೈಯಾದಿಂದ ಪ್ರಭಾವಿತರಾಗಿದ್ದಾರೆ.  ಏಪ್ರಿಲ್ 29 ರಂದು ಈ ರಾಶಿಚಕ್ರ ಚಿಹ್ನೆಗಳ ಮೇಲೆ ಶನಿ ಸಾಡೇ ಸಾತಿ ಪ್ರಭಾವ ಕೊನೆಗೊಂಡು ಶನಿ ಧೈಯಾ ಪ್ರಾರಂಭವಾಯಿತು. ಈ ವೇಳೆ ಮಿಥುನ ಮತ್ತು ತುಲಾ ರಾಶಿಯ ಜನರು ಶನಿ ಧೈಯಾ ಪ್ರಭಾವದಿಂದ ಮುಕ್ತಿ ಪಡೆದಿದ್ದರು.  ಆದರೆ ಮತ್ತೊಮ್ಮೆ, ಹಿಮ್ಮೆಟ್ಟುವ ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ತಕ್ಷಣ ಮಿಥುನ ಮತ್ತು ತುಲಾ ರಾಶಿಯ ಜನರಿಗೆ ಶನಿ ಧೈಯಾ ಪ್ರಭಾವ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು ಧೈಯಾದಿಂದ ಪರಿಹಾರವನ್ನು ಪಡೆಯುತ್ತಾರೆ. 

ಇದನ್ನೂ ಓದಿ- Astrology Tips: ವೃತ್ತಿ ಜೀವನದಲ್ಲಿ ಯಶಸ್ಸಿಗಾಗಿ ಗ್ರಹಗಳನ್ನು ಈ ರೀತಿ ಬಲಪಡಿಸಿ

ಕರ್ಕಾಟಕ-ವೃಶ್ಚಿಕ ರಾಶಿಯ ಜನರು ದೊಡ್ಡ ಯಶಸ್ಸನ್ನು ಪಡೆಯುತ್ತಾರೆ :
ಜುಲೈ 12 ರಂದು ಶನಿಯು ಮಕರ ರಾಶಿಗೆ ಪ್ರವೇಶಿಸಿದ ತಕ್ಷಣ, ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ಕೆಟ್ಟ ಸಮಯ ಕೊನೆಗೊಳ್ಳುತ್ತದೆ. ಇದರೊಂದಿಗೆ, ಅವರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಲು ಪ್ರಾರಂಭಿಸುತ್ತಾರೆ. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ಸಿಕ್ಕಿಬಿದ್ದ ಹಣ ಕೈ ಸೇರಲಿದೆ.  ಬಡ್ತಿ-ಇಂಕ್ರಿಮೆಂಟ್ ಕೂಡ ಲಭ್ಯವಾಗಲಿದೆ. ಒತ್ತಡ ಕಡಿಮೆ ಆಗಿ ಆರೋಗ್ಯವೂ ಸುಧಾರಿಸಲಿದೆ. 

ಇದನ್ನೂ ಓದಿ- ಈ ಸಂಕೇತಗಳು ನಿಮಗೂ ಸಿಕ್ಕರೆ ಶನಿ ಮಹಾತ್ಮನ ಕೃಪೆ ನಿಮ್ಮ ಮೇಲಿದೆ ಎಂದರ್ಥ

ಜಾತಕದಲ್ಲಿ ಶನಿಯು ಉತ್ತಮ ಸ್ಥಾನದಲ್ಲಿದ್ದರೆ, ಅದು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಒಳ್ಳೆಯ ಕೆಲಸವನ್ನು ಮಾಡುವುದರಿಂದ ಶುಭ ಫಲಿತಾಂಶಗಳು ಹೆಚ್ಚಾಗುತ್ತದೆ, ಆದ್ದರಿಂದ ಬಡವರಿಗೆ ಸಹಾಯ ಮಾಡಿ. ಇದರಿಂದ ಎಲ್ಲವೂ ಒಳಿತೇ ಆಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News