Dina Bhavishya: ಶುಭ ಸೋಮವಾರದಂದು ಬೆಳಗುವುದು ಈ ರಾಶಿಯವರ ಲಕ್: ವ್ಯಾಪಾರದಲ್ಲಿ ಲಾಭ- ಜೇಬು ತುಂಬಾ ಹಣ!

Today Horoscope 29-05-2023: ವೃಷಭ ರಾಶಿಯ ಜನರು ಮೇಲಧಿಕಾರಿಗಳ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ವಾದ ಮಾಡಬೇಡಿ. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಅದೃಷ್ಟದ ಸಾಧ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕುಟುಂಬದಲ್ಲಿನ ಹಿರಿಯರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ.

Written by - Bhavishya Shetty | Last Updated : May 29, 2023, 06:52 AM IST
    • ಈ ರಾಶಿಯ ಜನರು ಅಧಿಕೃತ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ಉತ್ತಮ ಶುಭ ಮಾಹಿತಿಯನ್ನು ಪಡೆಯಬಹುದು
    • ವೃಷಭ ರಾಶಿಯ ಜನರು ಮೇಲಧಿಕಾರಿಗಳ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು
    • ಕರ್ಕಾಟಕ ರಾಶಿಯ ಜನರು ಕಾರ್ಯಗಳ ಬಗ್ಗೆ ಮಾನಸಿಕ ಗೊಂದಲಗಳನ್ನು ಹೊಂದಿರುತ್ತಾರೆ
Dina Bhavishya: ಶುಭ ಸೋಮವಾರದಂದು ಬೆಳಗುವುದು ಈ ರಾಶಿಯವರ ಲಕ್: ವ್ಯಾಪಾರದಲ್ಲಿ ಲಾಭ- ಜೇಬು ತುಂಬಾ ಹಣ!  title=
Horoscope

Today Horoscope 29-05-2023: ಸೋಮವಾರ, ಕರ್ಕ ರಾಶಿಯವರಿಗೆ ತಮ್ಮ ಕೆಲಸದ ಬಗ್ಗೆ ಮಾನಸಿಕ ಗೊಂದಲಗಳಿರುತ್ತವೆ, ಆದರೆ ಮನಸ್ಸನ್ನು ಶಾಂತವಾಗಿಟ್ಟುಕೊಂಡು, ಕೆಲಸವನ್ನು ಪೂರ್ಣಗೊಳಿಸುವತ್ತ ಗಮನಹರಿಸಿ. ಆದರೆ ಮಕರ ರಾಶಿಯ ವ್ಯಾಪಾರ ವರ್ಗಕ್ಕೆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಾಳ್ಮೆಯಿಂದ ಕೆಲಸ ಮಾಡಿ, ಆಗ ಮಾತ್ರ ನೀವು ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ: Budh Gochar: ಬುಧ-ಶುಕ್ರ ಸಂಯೋಗದಿಂದ ಈ ರಾಶಿಯವರಿಗೆ ಧನಯೋಗ: ಹೋದಲ್ಲೆಲ್ಲಾ ಯಶಸ್ಸು-ಪ್ರಗತಿ ಖಂಡಿತ!

ಮೇಷ - ಈ ರಾಶಿಯ ಜನರು ಅಧಿಕೃತ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ಉತ್ತಮ ಶುಭ ಮಾಹಿತಿಯನ್ನು ಪಡೆಯಬಹುದು. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಪೂರ್ವಜರ ವ್ಯವಹಾರವನ್ನು ಮಾಡುತ್ತಿದ್ದರೆ, ದಿನವನ್ನು ಪ್ರಾರಂಭಿಸುವ ಮೊದಲು, ನೀವು ನಿಮ್ಮ ಪೂರ್ವಜರಿಗೆ ನಮಸ್ಕರಿಸಬೇಕು.

ವೃಷಭ ರಾಶಿ - ವೃಷಭ ರಾಶಿಯ ಜನರು ಮೇಲಧಿಕಾರಿಗಳ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ವಾದ ಮಾಡಬೇಡಿ. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಅದೃಷ್ಟದ ಸಾಧ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕುಟುಂಬದಲ್ಲಿನ ಹಿರಿಯರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ.

ಮಿಥುನ ರಾಶಿ - ಈ ರಾಶಿಯ ಜನರ ಆತ್ಮವಿಶ್ವಾಸವು ಯಶಸ್ಸನ್ನು ನೀಡುತ್ತದೆ. ಉದ್ಯಮಿಗಳು ಇಂದು ಲಾಭ ಪಡೆಯುವ ಸಾಧ್ಯತೆಯಿದೆ. ಧಾರ್ಮಿಕ ಕಾರ್ಯಕ್ರಮ ಮಾಡುವ ಸಂಭವವಿದ್ದು, ಇದರಿಂದ ಮನಸ್ಸು ಕೂಡ ಸಂತೋಷದಿಂದ ಕೂಡಿರುತ್ತದೆ.

ಕರ್ಕಾಟಕ ರಾಶಿ - ಕರ್ಕಾಟಕ ರಾಶಿಯ ಜನರು ಕಾರ್ಯಗಳ ಬಗ್ಗೆ ಮಾನಸಿಕ ಗೊಂದಲಗಳನ್ನು ಹೊಂದಿರುತ್ತಾರೆ. ಆದರೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಕೆಲಸವನ್ನು ಪೂರ್ಣಗೊಳಿಸುವತ್ತ ಗಮನಹರಿಸಿ. ಉತ್ಪನ್ನಗಳ ಬಗ್ಗೆ ವ್ಯಾಪಾರಿಗಳು ಹೆಚ್ಚಿನ ಗಮನ ಹರಿಸಬೇಕು. ಜೀವನ ಸಂಗಾತಿಯ ಮಾತು ಹೃದಯಕ್ಕೆ ನೋವುಂಟು ಮಾಡುತ್ತದೆ.

ಸಿಂಹ - ಇಂದು ಒತ್ತಡದ ಕೆಲಸಗಳಿಂದ ದೂರವಿರುವುದು ಉತ್ತಮ. ಪೂರ್ವಿಕರ ವ್ಯಾಪಾರ ಮಾಡುವವರು ತಮ್ಮ ಪೂರ್ವಜರಿಗೆ ನಮಸ್ಕಾರ ಮಾಡಿದ ನಂತರವೇ ತಮ್ಮ ಕೆಲಸವನ್ನು ಪ್ರಾರಂಭಿಸಬೇಕು. ಯುವಕರು ಯಾವುದೇ ಸವಾಲಿನ ಸನ್ನಿವೇಶಗಳನ್ನು ಕಂಡರೆ, ಎಚ್ಚರಿಕೆಯಿಂದ ಸ್ಪರ್ಧಿಸಿ, ಗಾಬರಿಯಾಗಬೇಡಿ.

ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ತೊಂದರೆಗಳನ್ನು ಸುಲಭವಾಗಿ ಜಯಿಸಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಸಂಪತ್ತು ಸಿಗುವ ಕಾಲ. ಹೆಚ್ಚು ಕೆಲಸ ಮಾಡುವ ದಿನವಾಗಿದೆ.

ತುಲಾ ರಾಶಿ - ಈ ರಾಶಿಯ ಜನರು ತಮ್ಮ ಕೆಲಸದ ಸ್ಥಳದಲ್ಲಿ ಶಾಂತವಾಗಿರಿ. ಉದ್ಯಮಿಗಳು ಸಾಲ ನೀಡಿದ್ದರೆ, ಅದನ್ನು ಹಿಂತಿರುಗಿ ಪಡೆಯುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ವೃತ್ತಿಪರವಾಗಿ ಯೋಚಿಸಲು ಪ್ರಾರಂಭಿಸಬೇಕು. ಲಾಭದಾಯಕ ವ್ಯವಹಾರಗಳಿಗೆ ಹೆಚ್ಚಿನ ಗಮನ ನೀಡಬೇಕು. ಆತ್ಮೀಯರ ಮಾತು ಕೆಟ್ಟದಾಗಿ ಕಾಣಿಸಬಹುದು.

ಧನು ರಾಶಿ - ಈ ರಾಶಿಯ ಜನರು ಇತರರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಳ್ಳಬೇಕು. ವ್ಯಾಪಾರ ಪರಿಸ್ಥಿತಿಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ. ಈ ಬಗ್ಗೆ ಎಚ್ಚರವಹಿಸುವ ಅವಶ್ಯಕತೆಯಿದೆ.

ಮಕರ ರಾಶಿ - ಮಕರ ರಾಶಿಯ ಉದ್ಯೋಗಿಗಳು ಮೇಲಧಿಕಾರಿಗಳು ನೀಡಿದ ಗಂಭೀರ ಜವಾಬ್ದಾರಿಯನ್ನು ಮಾಡಿಮುಗಿಸಿ,  ವ್ಯಾಪಾರಿಗಳು ಆರ್ಥಿಕ ನಷ್ಟ ಎದುರಿಸುವ ಸಾಧ್ಯತೆ ಇದೆ. ಚಿಂತಿಸದೆ ತಾಳ್ಮೆಯಿಂದ ಕೆಲಸ ಮಾಡಿ.

ಕುಂಭ - ಈ ರಾಶಿಯ ಜನರು ಒತ್ತಡವನ್ನು ತೆಗೆದುಕೊಳ್ಳುವ ಬದಲು ಆನಂದಿಸುತ್ತಾ ಕೆಲಸವನ್ನು ಮಾಡಬೇಕು. ವ್ಯಾಪಾರ ಮಾಡುವವರು ಲಾಭವನ್ನು ಕಾಣುತ್ತಾರೆ. ಉತ್ತಮ ಜೀವನಶೈಲಿಯೊಂದಿಗೆ ಬದುಕು ಮತ್ತು ಆರೋಗ್ಯವನ್ನು ಆನಂದಿಸಿ.

ಇದನ್ನೂ ಓದಿ:  Ghee Benefits : ತುಪ್ಪ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದಲ್ಲದೇ ಇನ್ನು ಹಲವು ಪ್ರಯೋಜನಗಳಿವೆ...

ಮೀನ – ಮೀನ ರಾಶಿಯವರಿಗೆ ಪ್ರತಿಷ್ಠೆ ಹೆಚ್ಚಾಗುವುದು ಮತ್ತು ಸಂತೋಷವಾಗಿರುತ್ತಾರೆ. ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆಕಸ್ಮಿಕವಾಗಿ ಹಣ ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News