ಶ್ರೀಮಂತರು, ನಟರು, ಸ್ವಾಮೀಜಿಗಳು ಹುಲಿ ಉಗುರು ಧರಿಸಲು ಕಾರಣವೇನು ಗೊತ್ತೆ..? ರಹಸ್ಯ ಇಲ್ಲಿದೆ

Tiger nail astrology : ಹಿಂದಿನ ಕಾಲದಲ್ಲಿ ರಾಜರು ಹುಲಿ ಉಗುರು ಧರಿಸುತ್ತಿದ್ದ ಬಗ್ಗೆ ತಿಳಿದಿದ್ದೇವೆ. ಅಲ್ಲದೆ, ಖುಷಿ ಮುನಿಗಳು ತಪಸ್ಸನ್ನಾಚರಿಸಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು. ಅದೂ ಹುಲಿಯ ರುಂಡ ಸಮೇತ. ಇದರ ಹಿಂದಿನ ಸತ್ಯ ಇಲ್ಲಿದೆ ನೋಡಿ..

Written by - Krishna N K | Last Updated : Oct 25, 2023, 05:35 PM IST
  • ಹಿಂದಿನ ಕಾಲದಲ್ಲಿ ರಾಜರು ಹುಲಿ ಉಗುರು ಧರಿಸುತ್ತಿದ್ದರು.
  • ಖುಷಿ ಮುನಿಗಳು ತಪಸ್ಸನ್ನಾಚರಿಸಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು.
  • ಹುಲಿಯ ರುಂಡ ಸಮೇತ ವಿರುವ ಚರ್ಮವನ್ನು ಬಳಕೆ ಮಾಡುತ್ತಿದ್ದರು.
ಶ್ರೀಮಂತರು, ನಟರು, ಸ್ವಾಮೀಜಿಗಳು ಹುಲಿ ಉಗುರು ಧರಿಸಲು ಕಾರಣವೇನು ಗೊತ್ತೆ..? ರಹಸ್ಯ ಇಲ್ಲಿದೆ title=

Tiger claw pendant:  ರಾಜ್ಯದಲ್ಲಿ ಹುಲಿ ಉಗುರು ಸಖತ್‌ ಸದ್ದು ಮಾಡುತ್ತಿದೆ. ಎಲ್ಲಿ ನೋಡಿದ್ರೂ ಹುಲಿ ಉಗುರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಗ್‌ ಬಾಸ್‌ನಿಂದ ಪ್ರಾರಂಭವಾದ ಈ ವಿಚಾರ ಇದೀಗ ಸ್ಯಾಂಡಲ್‌ವುಡ್‌ ವರೆಗೂ ಬಂದು ನಿಂತಿದೆ. ಅಲ್ಲದೆ, ಸ್ವಾಮೀಜಿಗಳ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿ ಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಹಾಗಿದ್ರೆ ಹುಲಿ ಉಗುರು ಅಷ್ಟು ಫವರ್‌ ಫುಲ್‌ ಇದೆಯಾ..? ಬನ್ನಿ ಈ ಕುರಿತು ತಿಳಿಯೋ..

ಹೌದು.. ಪುರಾಣದ ಕತೆಗಳಲ್ಲಿ ನಾವು ರಾಜರೂ ಸಹ ಹುಲಿ ಉಗುರು ಧರಿಸುತ್ತಿದ್ದ ಬಗ್ಗೆ ತಿಳಿದಿದ್ದೇವೆ. ಅಲ್ಲದೆ, ಈ ಹಿಂದೆ ಸ್ವಾಮೀಜಿಗಳು ತಾವು ಕುಳಿತು ಕೊಳ್ಳಲು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು. ಅದೂ ಹುಲಿಯ ರುಂಡ ಸಮೇತ. ತಪಸ್ಸನ್ನು ಆಚರಿಸಲು ಸಹ ಕೆಲವು ಸಾಧು ಸಂತರು ಹುಲಿ ಚರ್ಮವನ್ನು ಬಳಕೆ ಮಾಡುತ್ತಿದ್ದರು.

ಇದನ್ನೂ ಓದಿ:ನಾನು ಧರಿಸಿದ್ದ ಹುಲಿ ಉಗುರು ನಕಲಿ, ನೈಜವಾದುದ್ದಲ್ಲ : ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ

ಮೊದಲಿಗೆ ಹುಲಿ ಚರ್ಮವನ್ನು ಋಷಿ ಮುನಿಗಳು ಏಕೆ ಬಳಸುತ್ತಿದ್ದರು ಎಂದು ತಿಳಿಯೋಣ, ಹುಲಿ ಚರ್ಮವು ಬೆಚ್ಚಗಿರುತ್ತದೆ. ಧ್ಯಾನ ಮಾಡುವಾಗ ನಿಮ್ಮ ಬೆನ್ನುಹುರಿಯ ಉದ್ದಕ್ಕೂ ಶಾಖವನ್ನು ಹೆಚ್ಚಿಸುತ್ತದೆ. ಅಲ್ಲದೆ, ಧ್ಯಾನ ಮಾಡುವಾಗ ಇತರ ಪ್ರಾಣಿಗಳನ್ನು ದೂರವಿರಿಸಲು ಇದು ಸಹಾಯ ಮಾಡುತ್ತದೆ. ಅದಕ್ಕಾಗಿ ಘೋರ ಕಾನನದಲ್ಲಿಯೂ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗಿದೆ. ಶಿವನೂ ಸಹ ಹುಲಿ ಚರ್ಮವನ್ನು ಧರಿಸಿದ್ದನ್ನು ನಾವು ಗಮನಿಸಬಹುದು. ರಾಜರು ಅಂದಿನ ಕಾಲದಲ್ಲಿ ಕಾಡಿನ ಪ್ರಾಣಿಗಳನ್ನು ಬೇಟೆಯಾಡಿದ ಪರಾಕ್ರಮಕ್ಕಾಗಿ ಧರಿಸುತ್ತಿದ್ದರು.

ಇನ್ನು ಹುಲಿ ಉಗುರಿನ ಬಗ್ಗೆ ನೋಡುವುದಾದರೆ, ಹುಲಿ ಉಗುರಿನ ಲಾಕೆಟ್ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಈ ಪ್ರಾಣಿಗಳ ಉಗುರುಗಳು ಮಾಂತ್ರಿಕ ಗುಣಗಳನ್ನು ಹೊಂದಿವೆ ಎಂದು ನಂಬಲಾಗಿದೆ. ವ್ಯಾಘ್ರ ಉಗುರನ್ನು ಹೃದಯಕ್ಕೆ ಹತ್ತಿರವಾಗಿ ಧರಿಸುವುದು ಅದೃಷ್ಟ ಮತ್ತು ರಕ್ಷಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಕಷ್ಟದ ಸಮಯದಲ್ಲಿ ಧೈರ್ಯ, ಶಕ್ತಿ ದೊರೆಯುತ್ತದೆ ರಾಜಯೋಗ ಬರುತ್ತದೆ ಎಂದು ಭಾವಿಸಲಾಗಿದೆ.

ಇದನ್ನೂ ಓದಿ:ನಟ ದರ್ಶನ, ಜಗ್ಗೇಶ್ ಸೇರಿದಂತೆ ಯಾರೇ ಹುಲಿ ಉಗುರು ಧರಿಸಿದ್ದರೂ ಕ್ರಮ ಖಂಡಿತ : ಸಚಿವ ಖಂಡ್ರೆ

ಮೊದಲಿಗೆ ಪ್ರಾಣಿಗಳ ಬೇಟೆ ಪ್ರತಿಷ್ಠೆಯಾಗಿತ್ತು. ಆದ್ರೆ ವನ್ಯಜೀವಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಂತೆ, 1972ರಿಂದ ದೇಶದಲ್ಲಿ ವನ್ಯಜೀವಿ ರಕ್ಷಣಾ ಅಧಿನಿಯಮ (Wildlife Protection Act 1972) ಜಾರಿಗೆ ಬಂತು. ಈ ಕಾನೂನು ಕಾಡಿನ ಪ್ರಾಣಿಗಳ ರಕ್ಷಣೆಗೆ ಬದ್ಧವಾಗಿದೆ. ಕಾಡು ಪ್ರಾಣಿಗಳ ಬೇಟೆ, ಮಾಂಸ ಭಕ್ಷಣೆ ಹಾಗೂ ಅವುಗಳ ದೇಹದ ಬಿಡಿ ಭಾಗಗಳ ಮಾರಾಟವನ್ನ ತಡೆಯೋದಕ್ಕಾಗಿ ಈ ಕಾನೂನು ರಚಿಸಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News