Tulasi Niyam: ತುಳಸಿ ಸಸ್ಯಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

Tulasi Niyam: ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸಸ್ಯದ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ. 

Written by - Yashaswini V | Last Updated : Sep 28, 2023, 08:27 AM IST
  • ತುಳಸಿ ಸಸ್ಯವು ಭಗವಾನ್ ವಿಷ್ಣುವಿಗೆ ಪ್ರಿಯವಾದ ಸಸ್ಯವಾಗಿದೆ.
  • ಹಾಗಾಗಿ, ತುಳಸಿ ಸಸ್ಯದಲ್ಲಿ ಭಗವಾನ್ ವಿಷ್ಣು ನೆಲೆಸಿದ್ದಾನೆ ಎಂಬ ನಂಬಿಕೆಯೂ ಹಲವರಲ್ಲಿದೆ.
  • ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಸಸ್ಯದ ವಿಷಯದಲ್ಲಿ ಕೆಲವು ನಿರ್ಲಕ್ಷ್ಯಗಳು ಜೀವನದಲ್ಲಿ ಭಾರೀ ತೊಂದರೆಯನ್ನು ಸೃಷ್ಟಿಸುತ್ತದೆ
Tulasi Niyam: ತುಳಸಿ ಸಸ್ಯಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ title=

Tulasi Niyam: ಧಾರ್ಮಿಕ ನಂಬಿಕೆಗಳ ಪ್ರಕಾರ, ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ಯಾವ ಮನೆಯಲ್ಲಿ ತುಳಸಿ ಸಸ್ಯವನ್ನು ನೆಡಲಾಗಿರುತ್ತದೆಯೋ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. ಅಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂತಲೂ ಹೇಳಲಾಗುತ್ತದೆ. ಆದರೆ, ಇದಕ್ಕಾಗಿ ತುಳಸಿ ಸಸ್ಯವನ್ನು ನೆಡುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ. 

ವಾಸ್ತವವಾಗಿ, ತುಳಸಿ ಸಸ್ಯವು ಭಗವಾನ್ ವಿಷ್ಣುವಿಗೆ ಪ್ರಿಯವಾದ ಸಸ್ಯವಾಗಿದೆ. ಹಾಗಾಗಿ, ತುಳಸಿ ಸಸ್ಯದಲ್ಲಿ ಭಗವಾನ್ ವಿಷ್ಣು ನೆಲೆಸಿದ್ದಾನೆ ಎಂಬ ನಂಬಿಕೆಯೂ ಹಲವರಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಸಸ್ಯದ ವಿಷಯದಲ್ಲಿ ಕೆಲವು ನಿರ್ಲಕ್ಷ್ಯಗಳು ಜೀವನದಲ್ಲಿ ಭಾರೀ ತೊಂದರೆಯನ್ನು ಸೃಷ್ಟಿಸುತ್ತದೆ. ಹಾಗಾಗಿ, ತುಳಸಿ ಸಸ್ಯಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎನ್ನಲಾಗುತ್ತದೆ. ಹಾಗಿದ್ದರೆ, ತುಳಸಿ ಸಸ್ಯಕ್ಕೆ ಸಂಬಂಧಿಸಿದ ಆ ಪ್ರಮುಖ ನಿಯಮಗಳು ಯಾವುವು ಎಂದು ತಿಳಿಯುವುದು ಮುಖ್ಯವಾಗಿದೆ. 

ತುಳಸಿ ಸಸ್ಯವನ್ನು ನೆಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನವಿರಲಿ: 
ತುಳಸಿಯನ್ನು ಈ ದಿನ ನೆಡುವುದು ಶುಭ: 

ಮೊದಲೇ ತಿಳಿಸಿದಂತೆ ತುಳಸಿ ವಿಷ್ಣು ಪ್ರಿಯೆ. ಹಿಂದೂ ಧರ್ಮದಲ್ಲಿ ಪ್ರತಿ ವಾರವೂ ಒಂದೊಂದು ದೇವರಿಗೆ ಮೀಸಲಿದ್ದು, ಭಗವಾನ್ ವಿಷ್ಣುವಿಗೆ ಗುರುವಾರವನ್ನು ಮೀಸಲಿಡಲಾಗಿದೆ. ಹಾಗಾಗಿ, ತುಳಸಿ ಸಸ್ಯವನ್ನು ಗುರುವಾರದಂದು ನೆಡುವುದು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಇದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದದೊಂದಿಗೆ ಅಂತಹ ಮನೆಯಲ್ಲಿ ಸದಾ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ನೆಲೆಗೊಳ್ಳುತ್ತಾಳೆ ಎನ್ನಲಾಗುತ್ತದೆ. 

ಇದನ್ನೂ ಓದಿ- 2025ರವರೆಗೆ ತನ್ನ ಪ್ರಿಯ ರಾಶಿಯಲ್ಲಿ ಶನಿದೇವನ ವಾಸ್ತವ್ಯ, ಈ 4 ರಾಶಿಯ ಜನರಿಗೆ ಸೋಲೆಂಬುದೇ ಇಲ್ಲ

ಈ ದಿನ ಯಾವುದೇ ಕಾರಣಕ್ಕೂ ತುಳಸಿ ಗಿಡ ನೆಡಬಾರದು. 
ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾನುವಾರದ ದಿನ ತುಳಸಿ ಮಾತೆ ವಿಷ್ಣುವಿಗಾಗಿ ಉಪವಾಸ ಕೈಗೊಳ್ಳುತ್ತಾಳೆ. ಹಾಗಾಗಿ, ಈ ದಿನ ತುಳಸಿ ಸಸ್ಯವನ್ನು ಮುಟ್ಟುವುದಾಗಲಿ, ತುಳಸಿ ಗಿಡ ನೆಡುವುದನ್ನಾಗಲಿ ಅಶುಭ, ಅಮಂಗಳಕರ ಎನ್ನಲಾಗುತ್ತದೆ. ಮಾತ್ರವಲ್ಲ, ಭಾನುವಾರದ ದಿನ ತುಳಸಿಗೆ ನೀರು ಅರ್ಪಿಸುವುದನ್ನು ಕೂಡ ನಿಷೇಧಿಸಲಾಗಿದೆ. 

ಈ ದಿಕ್ಕಿನಲ್ಲಿ ತುಳಸಿ ಸಸ್ಯವನ್ನು ನೆಡಬಾರದು: 
ತುಳಸಿ ಸಸ್ಯವನ್ನು ನೆಡುವಾಗ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಕೂಡ ಮುಖ್ಯವಾಗಿದೆ. ತುಳಸಿ ಸಸ್ಯವನ್ನು ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿನಲ್ಲಿ ನೆಡಬಾರದು. ಆಗ್ನೇಯ ಮೂಲೆಯು ಅಗ್ನಿ ಎಂದರೆ ಬೆಂಕಿಗೆ ಸಂಬಂಧಿಸಿದ ದಿಕ್ಕಾಗಿದ್ದು ಈ ದಿಕ್ಕಿನಲ್ಲಿ ತುಳಸಿ ನೆಡುವುದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. 

ಇದನ್ನೂ ಓದಿ- Astro Tips: ಖ್ಯಾತಿ, ಅದೃಷ್ಟ ಮತ್ತು ಸಂಪತ್ತನ್ನು ಪಡೆಯಲು ಈ ಉಪವಾಸ ಮಾಡಿ!

ಕತ್ತಲೆಯಲ್ಲಿ ಇಡಬೇಡಿ: 
ತುಳಸಿ ಸಸ್ಯವನ್ನು ಬೆಳಕಿಲ್ಲದ ಜಾಗದಲ್ಲಿ, ಕತ್ತಲೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ. ಮುಸ್ಸಂಜೆ ವೇಳೆ ತುಳಸಿ ಮುಂದೆ ದೀಪ ಹಚ್ಚಲು ಸೂಚಿಸುವುದು ಕೂಡ ಇದೇ ಕಾರಣಕ್ಕೆ. 

ಸ್ವಚ್ಛತೆ: 
ತುಳಸಿ ಸಸ್ಯವನ್ನು ನೆಡುವಾಗ,ಗಿಡದ ಸುತ್ತಮುತ್ತಲಿನ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ. ಇದರೊಂದಿಗೆ ತುಳಸಿ ಸಸ್ಯದ ಸುತ್ತಮುತ್ತ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಇಡಬಾರದು ಎಂಬುದನ್ನೂ ನೆನಪಿನಲ್ಲಿಡಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News