ಶ್ರೀರಾಮ ಭಕ್ತ ಹನುಮಂತ ತನ್ನ ದೇಹದಾದ್ಯಂತ ಕುಂಕುಮವನ್ನು ಏಕೆ ಹಚ್ಚಿಕೊಳ್ಳುತ್ತಿದ್ದ ಗೊತ್ತೆ..? ಭಗವಂತನ ಲೀಲೆ ನೋಡಿ..

Kesarinandan Hanuman : ಭಗವಾನ್‌ ಹನುಮಂತ ತನ್ನ ಮೈತುಂಬ ಸಿಂಧೂರವನ್ನು ಹೆಚ್ಚಿಕೊಂಡಿರುತ್ತಾನೆ.. ಇದರ ಹಿಂದೆ ಅರ್ಥಗರ್ಭಿತವಾದ ಮಾತಿದೆ.. ರಾಮ ಭಕ್ತ ಹನುಮನ ಪೂಜಿಸುವರಿಗೆ ಈ ವಿಚಾರ ತಿಳಿದಿರುವುದು ಬಹಳ ಮುಖ್ಯ.. ಬನ್ನಿ ಮಾರುತಿ ಮೈತುಂಬಾ ಕುಂಕುಮ ಹಚ್ಚಿಕೊಂಡಿದ್ದು ಏಕೆ..? ತಿಳಿಯೋಣ.. 

Written by - Krishna N K | Last Updated : Aug 30, 2024, 08:45 PM IST
    • ಭಗವಾನ್‌ ಹನುಮಂತ ತನ್ನ ಮೈತುಂಬ ಸಿಂಧೂರವನ್ನು ಹೆಚ್ಚಿಕೊಂಡಿರುತ್ತಾನೆ..
    • ವಾಯುಪುತ್ರನ ಪ್ರತಿಮೆಗೆ ಭಕ್ತರು ಸಿಂಧೂರವನ್ನು ಹಚ್ಚಿ ಅಲಂಕರಿಸುತ್ತಾರೆ.
    • ಕೇಸರಿನಂದನನಿಗೆ ಸಿಂಧೂರ ನೈವೇದ್ಯ ಯಾಕೆ ಮಾಡ್ತಾರೆ ಅಂತ ಗೊತ್ತೆ..?
ಶ್ರೀರಾಮ ಭಕ್ತ ಹನುಮಂತ ತನ್ನ ದೇಹದಾದ್ಯಂತ ಕುಂಕುಮವನ್ನು ಏಕೆ ಹಚ್ಚಿಕೊಳ್ಳುತ್ತಿದ್ದ ಗೊತ್ತೆ..? ಭಗವಂತನ ಲೀಲೆ ನೋಡಿ.. title=

Hanuman and sindoor : ನಾಳೆ ಶನಿವಾರ ಹನುಮಂತನ ವಾರ.. ರಾಮ ಬಂಟನನ್ನು ಭಕ್ತಿಯಿಂದ ಪೂಜಿಸುವ ಶುಭ ದಿನ.. ಈ ದಿನಗ ವಾಯುಪುತ್ರನ ಪ್ರತಿಮೆಗೆ ಭಕ್ತರು ಸಿಂಧೂರವನ್ನು ಹಚ್ಚಿ ಅಲಂಕರಿಸುತ್ತಾರೆ. ರಾಮಧೂತನ ದೇಹದಾದ್ಯಂತ ಸಿಂಧೂರವನ್ನು ಲೇಪಿಸಲಾಗುತ್ತದೆ. ಆದರೆ ನಿಮಗೆ ಗೊತ್ತೆ..? ಕೇಸರಿನಂದನನಿಗೆ ಸಿಂಧೂರ ನೈವೇದ್ಯ ಯಾಕೆ ಮಾಡ್ತಾರೆ ಅಂತ.. ?

ಪುರಾಣದ ಪ್ರಕಾರ, ಒಮ್ಮೆ ಹನುಮಂತ ತಾಯಿ ಸೀತಾ ಹಣೆಗೆ ಸಿಂಧೂರವನ್ನು ಹೆಚ್ಚಿಕೊಳ್ಳುತ್ತಿರುವುದನ್ನು ನೋಡಿ.. ಮಾತೆ ನೀವು ಏಕೆ ಸಿಂಧೂರವನ್ನು ಹಚ್ಚಿಕೊಳ್ಳುತ್ತೀರಿ? ಅಂತ ವಿನಮ್ರವಾಗಿ ಪ್ರಶ್ನೆ ಮಾಡ್ತಾನೆ.. ಆಗ ಮಾತೆ ಸೀತಾದೇವಿಯು, ಈ ಸಿಂಧೂರ ರಾಮನ ಆಯಸ್ಸು ಹೆಚ್ಚಿಸುತ್ತೆ ಅಂತ ಹೇಳುತ್ತಾಳೆ.. ಅದಕ್ಕೆ ಹನುಮನ ತನ್ನ ಆರಾಧ್ಯದೈವದ ಆಯಸ್ಸು ಹೆಚ್ಚಲಿ ಅಂತ ಮೈತುಂಬಾ ಕುಂಕುಮ ಹಚ್ಚಿಕೊಳ್ಳುತ್ತಾನೆ.. ಅಂದಿನಿಂದ ಇಂದಿನವರೆಗೂ ಆಂಜನೇಯನಿಗೆ ಸಿಂಧೂರ ಹಚ್ಚಿ ಅಲಂಕರಿಸಲಾಗುತ್ತದೆ..

ಇದನ್ನೂ ಓದಿ:ಅದೃಷ್ಟ ಹಿಂಬಾಲಿಸಬೇಕಾದರೆ ಗೋಡೆ ಗಡಿಯಾರವನ್ನು ಈ ದಿಕ್ಕಿನಲ್ಲಿಯೇ ಹಾಕಿ ! ಜೀವನದ ಶುಭ ಸಮಯವೂ ಶುರುವಾಗುವುದು !

ಸಂಕಟಮೋಚನ ಹನುಮನ ಭಕ್ತರ ಸಂಖ್ಯೆ ಅಸಂಖ್ಯಾತ. ಮಾರುತಿಯನ್ನು ಮಂಗಳವಾರ ಮತ್ತು ಶನಿವಾರದಂದು ಭಕ್ತಿಯಿಂದ ಉಪವಾಸ ವೃತ ಆಚರಿಸಿ ಪೂಜಿಸಲಾಗುತ್ತದೆ. ಆಚರಿಸುತ್ತಾರೆ. ಕಪಿಸೇನಾನಾಯಕ ತನ್ನ ಭಕ್ತರನ್ನು ಎಲ್ಲಾ ಆಪತ್ತುಗಳಿಂದ ದೂರಮಾಡುತ್ತಾನೆ ಎನ್ನುವುದು ಅವರ ನಂಬಿಕೆ..

ಶಕ್ತಿ ಮತ್ತು ಬುದ್ಧಿವಂತಿಕೆಯ ದೇವರು ಹನುಮಂತ ಬಹಳ ಶಕ್ತಿಶಾಲಿ. ಒಂದು ಕೈಯಿಂದ ಇಡೀ ಪರ್ವತವನ್ನು ಎತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಪುರಾಣಗಳ ಪ್ರಕಾರ, ಅವನ ಇಡೀ ದೇಹವು ವಜ್ರದಂತಿತ್ತು ಎನ್ನಲಾಗಿದೆ. ಆದ್ದರಿಂದ ಅವನನ್ನು ಬಜರಂಗ ಬಲಿ ಎಂದು ಕರೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News