ಟಿ-20 ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ!? ಬಿಸಿಸಿಐಗೆ ಹೀಗೆಂದು ತನ್ನ ನಿರ್ಧಾರ ತಿಳಿಸಿದ ಹಿಟ್’ಮ್ಯಾನ್

Rohit Sharma White Ball Captaincy: ಇದೀಗ ವಿಶ್ವಕಪ್ ಸೋಲಿನ ಬಳಿಕ ವೈಟ್ ಬಾಲ್ ಅಂದರೆ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಮುಂದುವರೆಯುತ್ತಾರಾ? ಎಂಬೆಲ್ಲಾ ಪ್ರಶ್ನೆಗಳು ಭುಗಿಲೆದ್ದುದೆ. ಇನ್ನೊಂದು ವರದಿಗಳ ಪ್ರಕಾರ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರೊಂದಿಗೆ ವೈಟ್ ಬಾಲ್ ನಾಯಕತ್ವದ ಬಗ್ಗೆ ಚರ್ಚಿಸಲಿದೆ

Written by - Bhavishya Shetty | Last Updated : Nov 23, 2023, 02:47 PM IST
    • ವಿಶ್ವಕಪ್ ಸೋಲಿನ ಬಳಿಕ ರೋಹಿತ್ ಶರ್ಮಾ ನಾಯಕನಾಗಿ ಮುಂದುವರೆಯುತ್ತಾರಾ?
    • ಆಯ್ಕೆ ಸಮಿತಿಯು ರೋಹಿತ್ ಜೊತೆ ವೈಟ್ ಬಾಲ್ ನಾಯಕತ್ವದ ಬಗ್ಗೆ ಚರ್ಚಿಸಲಿದೆ.
    • ಆಯ್ಕೆಗಾರರು ODI ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ
ಟಿ-20 ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ!? ಬಿಸಿಸಿಐಗೆ ಹೀಗೆಂದು ತನ್ನ ನಿರ್ಧಾರ ತಿಳಿಸಿದ ಹಿಟ್’ಮ್ಯಾನ್ title=
Rohit Sharma

Rohit Sharma White Ball Captaincy: ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡವು 2023ರ ODI ವಿಶ್ವಕಪ್‌ ಫೈನಲ್‌’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಸಂಪೂರ್ಣ ಟೂರ್ನಿಯಲ್ಲಿ ರಾರಾಜಿಸಿದ್ದ ಟೀಂ ಇಂಡಿಯಾ ಫೈನಲ್’ನಲ್ಲಿ ಮಾತ್ರ ಮುಗ್ಗರಿಸಿತ್ತು.

ಇದನ್ನೂ ಓದಿ: ಸಂಕಷ್ಟದಲ್ಲಿದೆ ಈ ಆಟಗಾರನ ವೃತ್ತಿಜೀವನ! ವಿಶ್ವಕಪ್ ಅಂತ್ಯವಾಗ್ತಿದ್ದಂತೆ ತಂಡದಿಂದ ಹೊರಬಿದ್ದ ಓಪನರ್

ಇದೀಗ ವಿಶ್ವಕಪ್ ಸೋಲಿನ ಬಳಿಕ ವೈಟ್ ಬಾಲ್ ಅಂದರೆ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಮುಂದುವರೆಯುತ್ತಾರಾ? ಎಂಬೆಲ್ಲಾ ಪ್ರಶ್ನೆಗಳು ಭುಗಿಲೆದ್ದುದೆ. ಇನ್ನೊಂದು ವರದಿಗಳ ಪ್ರಕಾರ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರೊಂದಿಗೆ ವೈಟ್ ಬಾಲ್ ನಾಯಕತ್ವದ ಬಗ್ಗೆ ಚರ್ಚಿಸಲಿದೆ.

'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಾರ, ರೋಹಿತ್ ಶರ್ಮಾ ಈಗಾಗಲೇ ಆಯ್ಕೆಗಾರರಿಗೆ ಟಿ20 ಮಾದರಿಯಿಂದ ದೂರ ಇಡಬೇಕೆಂದು ಹೇಳಿದ್ದಾರೆ. ಅಂದಹಾಗೆ ಆಯ್ಕೆದಾರರು ಕಳೆದ ಒಂದು ವರ್ಷದಿಂದ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನ ನಾಯಕತ್ವವನ್ನು ಯುವ ಆಟಗಾರರಿಗೆ ನೀಡುತ್ತಿದ್ದಾರೆ. ಮುಂದಿನ ವರ್ಷ ಜೂನ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ವೇಳೆಯೂ ಇದೇ ನಿರ್ಧಾರ ಮುಂದುವರೆಯಲಿದೆಯೋ ಎಂಬುದನ್ನು ಕಾದುನೋಡಬೇಕಿದೆ.

ಟಿ20ಯಲ್ಲಿ ಅವರನ್ನು ಪರಿಗಣಿಸದ ಕಾರಣ, ಈಗ ಆಯ್ಕೆಗಾರರು ರೋಹಿತ್ ಜೊತೆ ಏಕದಿನ ಮಾದರಿಯ ನಾಯಕತ್ವದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಸುದೀರ್ಘ ಸಮಯದ ಬಳಿಕ ಟಿ20 ತಂಡಕ್ಕೆ ಎಂಟ್ರಿ ಪಡೆದ ಈ ಮ್ಯಾಚ್ ವಿನ್ನರ್!

ಮೂಲವು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ ಮಾಹಿತಿ ಪ್ರಕಾರ, “ರೋಹಿತ್ ಶರ್ಮಾ 2025ರಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್‌’ಗಾಗಿ ಹೆಚ್ಚು ಗಮನಹರಿಸಲಿದ್ದಾರೆ ಎಂದು ತೋರುತ್ತಿದೆ. ದೀರ್ಘ ಸ್ವರೂಪಕ್ಕಾಗಿ ಹೊಸ ನಾಯಕನನ್ನು ಸಿದ್ಧಪಡಿಸುವುದು ಈ ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ. ಹಾರ್ದಿಕ್ ಪಾಂಡ್ಯ ಅವರ ಗಾಯದ ದೃಷ್ಟಿಯಿಂದ ಆಯ್ಕೆಗಾರರು ODI ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ” ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News